Sunday, 29 September 2013

ಜ್ಞಾನ

ಪ್ರಾಣಿಗಳಿಗೂ ಶಾಲೆಗೆ ಕರೆಸಿ,
ಅವುಗಳಿಂದ ಕಲೆಯುವದು ಬಹಳವಿದೆ!
----------------------------------------------
ತುಂಬಿದ ಕೊಡ
ಒಳಗೊಳಗೇ ಪಾಚಿಗಟ್ಟಿತ್ತು
----------------------------------------------
ನಂಬಿಕೆಯ ಬಗೆಗಿನ ಜ್ಞಾನ ನಿಜವಿರಬಹುದು
ಜ್ಞಾನದ ಮೇಲಿನ ನಂಬಿಕೆ ಸುಳ್ಳು
----------------------------------------------
ಯಾವಾಗಲೂ, ಯಾರನ್ನೂ ದ್ವೇಷಿಸಬೇಡಿ
ಎಂದು ಸಾರುವ ಸ್ವಾಮಿಗೆ
ದ್ವೇಷದ ಮೇಲೆಯೇ ಹಗೆತನವೇ ?
----------------------------------------------
ಆ ಬುದ್ಧ ನಕ್ಕಿದ್ದನ್ನು ನೋಡಿ
ಇತರರು ಮ್ಲಾನವಾದರು
----------------------------------------------
-VV

No comments:

Post a Comment