Tuesday, 27 May 2014

Bharwan Alu Tiranga

Nope, i'm not back at cooking after a long but back at writing down the recipes I try out. In the meantime, i had made several one timer dishes only to forget the quicker than remembering to writing them down.

The name is suggested by my better half, Bharwan Alu Tiranga. Also the preparation and helping done by her. I only told her what to do and took pictures for your reference.

Let me tell you before you read the recipe or even try to cook it, it was yummy! :-)

Now the details.

Ingredients: 

Onions : 2 big ones, one small one.
Tomato : 2 medium ones.
Jeera, saumf powders
Methi leaves - a couple of handful
Roasted peanut powder.

Method:

Boil potato in pressure cooker for 2 whistles. Take them out, allow them to cool down and scoop the inner portion to leave enough potato outside with their skin on.


Grind onion to a fine paste

Chop onions and tomato. Take 4 table spoons of oil on a pan, heat and pour chopped onions and tomatoes in it. Add chilly flakes, salt and Saute till its fully done. Before turning off the flame, pour a handful of roasted peanut powder (make it little coarse though) and keep aside.




Finely chop methi and saute in oil along with finely chopped garlic and jeera+saumf powder for some time, keep aside.


Now fill potato first with onion tomato filling and then with methi filling.


Take a pan, pour oil and heat it. Add mustard seeds and curry leaves. Add onion paste and sauté till golden colour. Add the removed potato portion to make gravy, add garam masala, chilli powered and salt to taste, add water and let it boil.


Put the stuffed potato one by one on this gravy making sure they don't spill or burst. Close the lid and cook for 7-10 minutes in low flame.



(I chose the lid of cooker because i couldn't find anything else to close. A dome shape lid is better to close while you cook, instead of flat one. This allows the aroma to settle in the potatoes.


Finally the dish looks like this :-



You can omit putting potato in the gravy if you do not like potato gravy. instead you can make tomato gravy or even coconut gravy.

Enjoy the food!




Monday, 14 April 2014

ನನ್ನವಳು ಆಗಬೇಕಿದ್ದವಳು

ನಾ ಕೈ ತೂರಿ ಗುಡ್ಡೆ ಮಾಡಿದ
ಮರಳು ಮನೆಯಲ್ಲಿ
ಕಿರುಬೆರಳು ಹಾಕಿ
ಬೆಳಕಿಂಡಿ ಮಾಡಿದವಳು
ಜೊತೆಗೇ ಕಚಗುಳಿ ಇಟ್ಟವಳು

ನಾ ಬಿಟ್ಟ ಕಾಗದದ ದೋಣಿ
ಮುಂದೆ ಸಾಗಿಸಲು
ಬೆರಳ ಹುಟ್ಟು ಹಾಕಿದವಳು
ಅದು ಕೊಚ್ಚಿ ಹೋಗಲು
ಮಳೆಯಲ್ಲಿ ನನ್ನ ಕಣ್ಣೊರೆಸಿದವಳು

ಕುಂಟಾಟ ಆಡುವಾಗ
ಬೇಕೆಂತಲೇ ಕೈಗೆ ಸಿಕ್ಕಿ
ನನ್ನ ಕೈಗೂ ಮನಸ್ಸಿಗೂ
ಮುದಗೊಳಿಸಿದವಳು
ಕೈ ಕೊಸರಿಕೊಳ್ಳುವ
ಹುಸಿ ಕೋಪ ತೋರಿಸಿದವಳು

ಹರೆಯದ ಹುಚ್ಚು ಹಿಡಿಸಿ
ಕಣ್ಣಿಂದಲೇ ಜೀವ ಮಿನುಗಿಸಿದವಳು
ಪ್ರಾಣ ನನ್ನಲ್ಲಿದೆಯೋ ಅವಳಲ್ಲಿದೆಯೊ
ಅರಿವು ಮರೆಸಿದವಳು

ನನ್ನವಳು ಆಗಬೇಕಿದ್ದವಳು
ಕನಸಿನಲ್ಲೇ ಉಲಿದವಳು
ಬದುಕ ಮಾಯೆ, ಸೊಬಗಿನ ಜೊತೆ
ಮನಸಿನಲ್ಲೇ ಉಳಿದವಳು

-VV


Ignorance

ನನಗ್ಗೊತ್ತಿಲ್ಲವಾದದ್ದು ಬಹಳವಿದೆಯಾದರೂ
ಗೊತ್ತಿಲ್ಲದ್ದು ಗೊತ್ತಾಗುವವರೆಗೆ ಕಾಯಬಹುದು
ಗೊತ್ತಿಲ್ಲ-ಇದು ಗೊತ್ತಾಗಬೇಕೀಗಲೇ.

-VV

I know not, a lot.
What I don't know can
wait to be known.
'I don't know'-this
I need to know now!

-VV

untouchable

ಮನುಷ್ಯ.ರಿಗಿಂತ ಬೇರೆಯಾಗಿ ನೋಡಿದವರೇ
ತಮ್ಮ ದೇವರನ್ನು ಅಸ್ಪೃಶ್ಯನನ್ನಾಗಿ ಮಾಡುವದು
-VV

Why separate your God from the human, and make him untouchable?
-VV

Pretention

ನೀನಲ್ಲದೇ ಇರುವುದನ್ನು ಇಲ್ಲವಾಗಿಸುವದು ನೀನಿದ್ದ ಹಾಗಿರುವದಕ್ಕಿಂತ ಸುಲಭ. ಪ್ರಯತ್ನಿಸಿ ನೋಡು. - VV

Not being what you are not is easier than being yourself. So try it. - VV

ಪ್ರೀತಿ

ಅವನ ಪ್ರೀತಿ ಎಂತಹದು ಅಂತೀರಾ?
ಇಷ್ಟು ದಿವಸ ತಾನಿಲ್ಲದೆ ಬದುಕದವಳು ಏನೋ ಒಂದು ತಪ್ಪು ಮಾಡಿದಳು ಎಂದ ಮಾತ್ರಕ್ಕೆ ತನ್ನನ್ನು ತಾನೇ ದೂರ ಮಾಡಿ ತಾನಿರದೇ ಅವಳಿಗಾಗುವ ಚಿತ್ರಹಿಂಸೆಯನ್ನು ನೆನೆಸಿಕೊಂಡು ಸುಖಿಸುವ ವಿಚಿತ್ರ ಮ್ಯಾಸೋಕಿಸಂ.

ಅವಳದೂ ಕಡಿಮೆಯೇನಿಲ್ಲ.
ಅವನಿಗಾಗುವ ಅಂತಹ ಖುಷಿಗಾಗಿಯೇ ತಾನು ಇನ್ನೂ ಸ್ವಲ್ಪ ಕಷ್ಟ ಅನುಭವಿಸಿ ಅವನಿಗೇ ತೋರಿಸುವ ವಿಲಕ್ಷಣ ಏಕ್ಸಿಬಿಶನಿಸಂ!

Whip

It is best to endure the words; because silence can hit you harder

- VV

Friday, 21 March 2014

ವ್ಯಾಪಾರ

ಎಲ್ಲರದೂ ಒಂದೊಂದು ತರಹದ ವ್ಯಾಪಾರ
ಪ್ರಾಮಾಣಿಕತೆಯ, ಕಪಟದ,
ನೀತಿವಂತಿಕೆಯ, ಲಂಪಟತನದ,
ಕುತೂಹಲದ, ಅಸಡ್ಡೆಯ,
ಪ್ರೀತಿಯ, ಹಗೆತನದ
ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳುವ ಹಂಬಲ
ಯಾರೂ ನಷ್ಟ ಸಹಿಸಲೊಲ್ಲರು
ಇದು ಹೀಗೇ, ತೆಗೆದುಕೊಳ್ಳಿ ಎಂದು
ಕೆಲವರು ತಮ್ಮ ಸಾಮಾನು ಮಾರಿದರೆ
ಇದು ಹೀಗಲ್ಲ ಎಂದು ಮಾರುವವರೂ ಉಂಟು
ಹೌದು ನಾನು ವ್ಯಾಪಾರಿ ಎಂದು ಒಪ್ಪಿಕೊಳ್ಳುವ ಕೆಲವರಾದರೆ
ಹಾಗಂತ ಒಪ್ಪಿಕೊಳ್ಳ ದಿರುವ ವ್ಯಾಪಾರಿಗಳೂ ಉಂಟು
ಬೇಕು ಎಂದು ಕೇಳುವ, ಕೇಳದೆ ಇತರಿರಗೆ ಕೊಡುವ
ಎಲ್ಲಾ ಒಂದು ರೀತಿ ವ್ಯಾಪಾರವೇ.

ಎಲ್ಲಿವರೆಗೆ ಮಾರುಕಟ್ಟೆ ಇರುವದೋ
ಅಲ್ಲಿವರೆಗೆ ಈ ವ್ಯಾಪಾರ.

ಯಾವತ್ತು ಇದು ಇರದಾಗುವದೋ
ಮತ್ತೊಂದು ವ್ಯವಹಾರ ಶುರುವಾಗುವದೋ ?

-VV




Words

Words are neither in the mouth nor on the paper.
They are in the minds of the writer and the reader. -VV

Why

When anything you do with absolute conviction, love and passion or lack of them; then 'what, where, how and when' you do it will disappear. Only 'why' you do it remains. -VV

Belief

When I believe in something, I know I have to fight for it. Either with self or with others.

Man, with certain beliefs, is home for constant tussle. - VV

lie

In the state of confusion, whatever you speak is a lie; deliberate or otherwise. -VV

Idea

Contrary to what you think by thinking ideas strike, stop thinking and see them really do! -VV


Tuesday, 25 February 2014

Impulse and Stupidity


No one commits stupidity, it happens. Only when something we do, goes wrong, we call it as stupidity. When the things go as per our plans or for that matter some action that we take impromptu succeeds, we do not call that as stupidity. But only when the plans do not work or worse, sudden action taken at that time, fails, we curse it as stupidity.

Stupidity need not be in the eye of the beholder. It is something that is not desired by the event itself. It is not a relative term. It is not the stupidity a person calls for the action of another person. It is the stupidity in nature. When stupidity takes place, things do go wrong as an event and not as pertaining to that event.

Whenever things do go wrong, we either justify the act saying I did what I thought was appropriate that time or we simply regret our act. In either case, the stupidity stands stall, glaring at us. If we are honest enough and do not wish to repeat the same or similar act in the future, we would develop certain intelligence towards handling such things.

Now look at the intelligence. Intelligence has to be committed, it doesn’t happen on its own.

Intelligence is also an absolute thing. This does not belong to one person. When enough of intelligence exists around the events, things go the way they are supposed to go. Our endeavor should be to merge with the intelligence around us and help ourselves get the desired result. The desire also should have intelligence and not be stupid to ask for unimaginable things to happen.

When we merge ourselves with the existing intelligence, we already know how to handle the situation. The appropriateness is decided by the requirement of the event and not by our convenience. The intelligence doesn’t necessarily accumulate by past experience and learning. Of course they can be referred to, but there are always surprises. Life offers situations beyond all experiences and cognition.

When we do the things as the situation demands without recognizing necessary intelligent thought around it, it may anyway go wrong. How do we react to any given situation depends on the thought we give around the situation and not only to the situation. Taking time at the time of the situation may help us think. Revisiting the set goals and objectives might help. Or overall understanding of the situation will lead to the required action.

Intelligence comes with clarity of the mind. Confusion is not stupidity but lack of intelligence is. In the state of confusion, we do not do things that come to our mind. In stead, we seek clarity in ourselves. Clarity comes by merging ourselves with intelligence. Sincere, patient and truthful efforts take us to this path of merging with intelligence.

- VV


Monday, 24 February 2014

Exclusivity:

between memories and forgetfulness,
just in order not to break
the thin string of breath,
do i have to take life's toll?

between speech and silence,
just in order to solve and resolve
the crossword of thoughts,
should i be counting days and nights?

love and selfishness
are as limited as the wide ravine
that i need to jump.
do i have to save my energy for that?

renouncement and thirst -
it's all the commotion of beliefs.
should I be saying the unseen
to convince others?

-VV

ಧಾರಣೆ

ನೆನಪು - ಮರೆವಿನ ನಡುವೆ
ಉಸಿರಾಟದ ತೆಳು ದಾರ
ಹರಿದು ಹೋಗದಿರಲೆಂದು
ಬಸವಳಿದು ಬದುಕಲೆ ?

ಮಾತು - ಮೌನದ ಮಧ್ಯೆ
ಯೋಚನೆಗಳ ನುಡಿವತ್ತು
ಬಿಡಿಸಿ ಜೋಡಿಸಲೆಂದು
ಹಗಲಿರುಳು ಎಣಿಸಲೆ ?

ಪ್ರೀತಿ - ಸ್ವಾರ್ಥದ ಮಿತಿ
ಅತಿ ದೀರ್ಘ ಕಾಲುವೆಯ
ನೆಗೆದು ಪಾರಾಗಲೆಂದು
ಕಸುವನ್ನು ಕೂಡಿಡಲೆ ?

ತ್ಯಾಗ - ತೃಷೆ ಗಳ ನಂಟು
ನಂಬಿಕೆಗಳ ಗಲಿಬಿಲಿ
ಜನರ ಒಪ್ಪಿಸಲೆಂದು
ಕಾಣದ ಮನಗಾಣಲೆ ?

-VV


Tuesday, 4 February 2014

ಸೆಳೆತ

The story of going inwards, can not be written in words. -VV

ವಯಸ್ಸು ಮೂವತ್ತೆಂಟು. ಒಳ್ಳೆಯ ನೌಕರಿ, ಪ್ರತಿಷ್ಠಿತ ಹುದ್ದೆ, ವಿದೇಶದಲ್ಲೂ ಸೇರಿಸಿ ತನ್ನ ಹದಿನೇಳು ವರುಷದ ಕೆಲಸದಲ್ಲಿ ಸಾಕಷ್ಟು ಹಣ  ಗಳಿಸಿಯೂ ಆಗಿತ್ತು. ಸುಶೀಲ ಹೆಂಡತಿ, ಎರಡು ಮುದ್ದಾದ ಹೆಣ್ಣು ಮಕ್ಕಳು, ಒಟ್ಟಿನಲ್ಲಿ ಸುಖಿ ಸಂಸಾರ ಅವನದು. ಹೊರಗಿನಿಂದ ನೋಡಿದವರಿಗೆ ಯಾವದೇ ಕೊರತೆ ಕಾಣದಿರುವಂತಹ, ಕೆಲವಬ್ಬರು ಹೊಟ್ಟೆ ಕಿಚ್ಚು ಪಡುವಂತಹ ಜೀವನ ರಾಜೀವನದು. ಆದರೂ ಏನೋ ಕೊರತೆ. ಒಳಗೊಳಗೇ ಸೆಲ್ಫ ಪಿಟಿ ಮಾಡಿಕೊಳ್ಳುವ ಸ್ಯಾಡಿಸಂ. ಎಲ್ಲದರಲ್ಲೂ ದಾರ್ಶನಿಕ ಸಿಧ್ಧಾಂತ ಕಂಡುಕೊಳ್ಳುವ ವಿಚಿತ್ರ ಹುಕ್ಕಿ. ದಿನನಿತ್ಯದ ಆಗು ಹೋಗುಗಳ ಕಾರಣ ಮತ್ತು ಪರಿಣಾಮಗಳ ಬುಡಕ್ಕೆ ಹೋಗುವಹುಚ್ಚು. ತನ್ನ ಮೇಲೆ ತನಗಿರುವ ಹುಂಬ ಆತ್ಮವಿಶ್ವಾಸ. ಇದೆಲ್ಲರ ಪರಿಣಾಮವಾಗಿಯೋ ಏನೋ, ಆಗಾಗ್ಗೆ ಜಗತ್ತಿನ ಇರುವಿಕೆ, ಸತ್ಯ-ಮಿಥ್ಯ ದ ಬಗೆಗಿನ ಗೊಂದಲ. ಮಿಡ್ ಲೈಫ್ ಕ್ರೈಸಿಸ್ ನ ಪರಮಾವಧಿ.

ಈ ನಡುವೆ ಸ್ವಂತಕ್ಕೆ ಖುಷಿ ಕೊಡುವ ಎಲ್ಲಾ ಚಟುವಟಿಕೆಗಳನ್ನೂ ಶುರುಮಾಡಿಯಾಗಿತ್ತು. ಯಾವ ನೌಕರಿ, ಸಂಸಾರದ ನೆಪದಲ್ಲಿ ಇಷ್ಟು ವರುಷ ತನ್ನ ಆಸಕ್ತಿಗಳನ್ನು ಪಕ್ಕಕ್ಕಿಡುತ್ತಾ ಬಂದಿದ್ದನೋ ಅವುಗಳನ್ನೆಲ್ಲ, ತನ್ನ ವಯಸ್ಸು ಮತ್ತು ಸಾಮರ್ಥ್ಯಕ್ಕನುಗುಣವಾಗಿ ಒಂದೊಂದಾಗಿ ಮಾಡುತ್ತಾ ಬಂದಿದ್ದ. ಲೈಫ್ ಬಿಗಿನ್ಸ್ ಆಟ್ ಫಾರ್ಟಿ ಎನ್ನುವಂತೆ ಇಷ್ಟು ವರುಷ ಮಾಡದೆ ಇರುವಂಥ ಎಲ್ಲವನ್ನು ಮಾಡಿ ನೋಡುವ ಹುಮ್ಮಸ್ಸು ಹೊಕ್ಕಿತ್ತವನಿಗೆ. ಆದರೆ ಅದಕ್ಕೂ ಮಿತಿಯಿತ್ತು. ಮಾಡುತ್ತಾ ಮಾಡುತ್ತಾ ಕೊನೆಗೆ ಅವಕ್ಕೂ ಬೇಸತ್ತ. ಇನ್ನು ಉಳಿದಿರುವುದೊಂದೇ, ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದಾಗಬೇಕು ಎಂದುಕೊಂಡು ಅದರ ಹತ್ತಿರಕ್ಕೂ ಹೋಗದೇ ಇದ್ದ ಒಂದು ಸಂಗತಿ ಎಂದರೆ ಆಧ್ಯಾತ್ಮ. ಆಧ್ಯಾತ್ಮ, ದೇವರು-ದಿಂಡರುಗಳಿಗೆ ಹತ್ತಿರವಾದುದ್ದೇನೋ ಎಂದು ಅದರಿಂದ ಅರ್ಧಂಬರ್ಧ ನಾಸ್ತಿಕನಾದ ಇವನು ದೂರವೇ ಇದ್ದ. ಜಾಸ್ತಿ ಅದರ ಬಗ್ಗೆ ಯೋಚನೆಯಾಗಲಿ, ಆಸಕ್ತಿ ತೋರಿಸುವದಾಗಲಿ ಮಾಡಿರಲಿಲ್ಲ. ಆದರೆ ಇತ್ತೀಚಿಗೆ ಜೀವನದ ಬಗ್ಗೆ ಜುಗುಪ್ಸೆಗೆ ಹತ್ತಿರವಾದ ಭಾವನೆಗಳು ಬರತೊಡಗಿದ್ದರಿಂದ ಅವನ ಮನಸ್ಸು ಆಧ್ಯಾತ್ಮದತ್ತ ವಾಲಿತ್ತು.

ಬರ ಬರುತ್ತಾ ಅವರವರ ಸಿಧ್ಧಾಂತಗಳಿಗೆ ಸಂಪೂರ್ಣವಾಗಿ ಒಪ್ಪದೇ ಹೋದರೂ ರಾಜೀವ ಸುಮಾರು ಆಧ್ಯಾತ್ಮಿಕ ಗುರುಗಳ ಪುಸ್ತಕಗಳನ್ನ ಓದುತ್ತಾ ಬಂದಿದ್ದ. ದಿನಾಲೂ ಅವನ ದಿನಚರಿಯಯ ಪ್ರಕಾರ ತಾಯಿಯ ಮೇಲಿನ ಗೌರವಕ್ಕಾಗಿ ಮಾತ್ರ ಮಾಡಿಕೊಂಡ ರೂಢಿಯಂತೆ ಸ್ನಾನವಾದ ತಕ್ಷಣ ದೇವರಿಗೆ ನಮಸ್ಕಾg ಮಾಡುವ ಬದಲು ಬೆಡ್‌ರೂಂ ಗೆ ಹೋಗಿ ಯೂ ಟ್ಯೂಬ್ ಹಾಕಿಕೊಂಡು, ಆಫೀಸಿಗೆ ರೆಡಿ ಅಗುತ್ತಾ ಅನೇಕ ಆಧ್ಯಾತ್ಮಿಕ ಪ್ರವಚಗಳನ್ನುಕಿವಿಯ ಮೇಲೆ ಬೀಳಿಸಿಕೊಳ್ಳಲು ಶುರುಮಾಡಿದ್ದ.ತಾನು ಇಷ್ಟು ದಿನ ಕಲಿತಿದ್ದದ್ದಕ್ಕೆ ಸಂಪೂರ್ಣವಾಗಿ ವಿರುಧ್ಧವಾದ ವಿಚಾರಸರಣಿಗಳು ಅವನ ತಲೆಯಲ್ಲಿ ಗುಂಯ್ಯಿಗುಡುತ್ತಿದ್ದವು. ಅದು ಹಾಗಿರದೇ ಹೋದರೆ ಹೀಗೇಕಿದೆ, ಹೀಗಿದೆ ಅಂದುಕೊಂಡಿದ್ದೆಲ್ಲಾ ಹಾಗಿದೆಯಲ್ಲ, ನಿರ್ಲಿಪ್ತತೆಯೆಂದರೆ ವೈರಾಗ್ಯವೇ? ಹೀಗೆ ಕೇಳಿದ್ದಷ್ಟು ಇನ್ನಷ್ಟು ಗೊಂದಲ ಉಂಟಾಗುತಿತ್ತು. ಮೊದಲಿದ್ದ ಅರಿವೇ ಸುಳ್ಳು ಎನ್ನುಷ್ಟು ಹತಾಶೆಯ ಮನೋಭಾವ ಬರತೊಡಗಿತು. ಕೆಲವು ಜೀವನದ ಯಾವುದೇ ಸಂಗತಿಗಳ ಬಗ್ಗೆ ಸ್ಪಷ್ಟ ಧೋರಣೆಯಿಲ್ಲದ ಗೆಳೆಯರಿಂದ ತನ್ನ ಹೊಸ ಗೊಂದಲಗಳ ಕುರಿತಾಗಿ ಉಗಿಸಿಕೊಂಡದ್ದೂ ಆಗಿತ್ತು, ಅವರಿಗೆ ಮರಳಿ ಅಸ್ಪಷ್ಟವಾಗಿ ಉಗಿದಿದ್ದೂ ಆಗಿತ್ತು.

ಒಂದು ದಿವಸ ಹೀಗೇ ಯೂ ಟ್ಯೂಬ್ ನಲ್ಲಿ ಹುಡುಕುತ್ತಾ ಇದ್ದಾಗ ಶಿವಗುರು ಎಂಬ ಒಬ್ಬರ ವಿಡಿಯೋ ಗಳ ಮೇಲೆ ಕಣ್ಣು ಹೋಯಿತು. ಆದಿನ ಆ ಗುರುಗಳ ಒಂದೆರಡು ವಿಡಿಯೋ ನೋಡಿದ. ಮಾಮೂಲಿನ ದಿನ ಕಳೆಯಬೇಕಾದರೆ ಅದೇಕೋ ಆ ಶಿವಗುರುಗಳ ಮುಖವೇ ಕಣ್ಣೆದುರಿಗೆ ಬಂದು ನಿಂತಂತಾಗುತಿತ್ತು. ಇಷ್ಟು ದಿನ ಹಲವು ತತ್ವಗಳನ್ನು ಕೇಳಿದ್ದಕ್ಕೂ ಇರಬಹುದು ಇವರ ವಿಚಾರಗಳು ಒಮ್ಮೆಲೇ ವಿರೋಧಾಭಾಸವಾಗೇನೂ ಕಾಣಲಿಲ್ಲ. ಬದಲಿಗೆ ಏನೋ ಒಂಥರಾ ಆಕರ್ಷಣೀಯವಾಗಿ ಕಂಡವು. ಅವರಲ್ಲೇನೋ ಇದೆ ಎಂದು ಅವನಿಗೆ ಭಾಸವಾಗಲು ಜಾಸ್ತಿ ಹೊತ್ತು ಬೇಕಾಗಲಿಲ್ಲ. ಮಾರನೇ ದಿನವೂ ಅವರ ಸಂವಾದವನ್ನೇ ಹಾಕಿಕೊಂಡು ಕೇಳಿದ. ಅದರ ಮಾರನೇ ದಿನವೂ. ಹೀಗೇ ಒಂದು ವಾರದಲ್ಲಿ ಶಿವಗುರು ಅವರ ಸುಮಾರು ಇಪ್ಪತ್ತಿಪ್ಪತ್ತೈದು ವಿಡಿಯೋಗಳನ್ನ ನೋಡಿದ. ಕಲಿಯಬೇಕಾಗಿದ್ದು ತುಂಬಾ ಇದೆ ಅನಿಸತೊಡಗಿತ್ತು. ಗೊಂದಲಗಳು ಕರಗಿ ಸ್ಪಷ್ಟತೆ ಮೂಡ ತೊಡಗಿತ್ತು, ತನಗೇನೂ ಸ್ಪಷ್ಟತೆ ಇಲ್ಲದರ ಬಗ್ಗೆ! ಅರಿವು ಮಾತ್ರ ನಿಜ, ನಂಬಿದ್ದೆಲ್ಲ ಸುಳ್ಳು ಎಂದರವರು ಶಿವಗುರು. ಹಾಗಾಗಿ ಇಷ್ಟು ದಿನಗಳ ತನ್ನ ನಂಬಿಕೆಗಳ ಮೇಲೆಯೇ ನಂಬಿಕೆ ಹಾರ ತೊಡಗಿತ್ತು.

ಈ ಮಧ್ಯೆ ಕಥೆ ಕಾದಂಬರಿ ಬರೆಯುವ ಹುಚ್ಚೂ ಅವನ ತಲೆಯಲ್ಲಿ ಹೊಕ್ಕಿತ್ತು. ಯಾವಾಗಲೂ ತಾನು ಎಂದೂ ಬರೆಯದೇ ಇರುವ ಕಥೆಗೆ ಏನಾದರೂ ಒಂದು ಹೊಸ ವಸ್ತು ಸಿಗುತ್ತದೋ ಎಂದು ನೋಡುತ್ತಲೇ ಇರುತ್ತಿದ್ದ. ಮೊದಲೇ ಊಹಾ ಪ್ರಪಂಚಕ್ಕೆ ಕಿರೀಟವಿರದ ಅಧಿಪತಿ, ಮಿಡ್ ಲೈಫ್ ಕ್ರೈಸಿಸ್ ನಲ್ಲಿ ಬಿಡ್ತಾನೆಯೇ? ಸರಿ, ಯಾವಾಗ ನೋಡಿದಾಗ ಅವನಿಗಿರುವ ಕೆಲಸ ಎರಡೇ, ಒಂದು, ತಾನು ನೋಡಿದ್ದೆಲ್ಲವನ್ನು ಆಧ್ಯಾತ್ಮಿಕ ಮಾಪಕದಲ್ಲಿ ಅಳೆಯುವದು. ಅದು ತನ್ನ ಕಥೆಯ ವಸ್ತುವಾಗುತ್ತದಾ ಅಂದು ನೋಡುವದು ಇನ್ನೊಂದು. ಶಿವಗುರುಗಳ ಪ್ರತಿ ಮಾತಿನಲ್ಲಿಯೂ ಅವರೇ ಅರ್ಥ ಹುಡುಕಬಾರದೆಂದು ಹೇಳಿದ್ದರೂ ಅರ್ಥ ಹುಡುಕಲಿಕ್ಕೆ ಶುರು ಮಾಡಿದ. ಅವರ ಜೀವನದ ಬಗ್ಗೆ ಜಾಸ್ತಿ ಮಾಹಿತಿಗಳನ್ನ ಸಂಗ್ರಹಿಸತೊಡಗಿದ. ಯಾರನ್ನೇ ಆಗಲಿ ಸಂಪೂರ್ಣವಾಗಿ ನಂಬಲಿಕ್ಕೂ ಮುನ್ನ ಅವರ ಬಗ್ಗೆ ಕೂಲಂಕುಷವಾಗಿ ಅಭ್ಯಾಸಿಸುವದು ಅವನಿಗೆ ಚಿಕ್ಕಂದಿನಿಂದಲೇ ಬಂದಿದ್ದ ಚಟ. ಅದೇ ಚಟವನ್ನು ಮುಂದುವರೆಸುತ್ತಾ ಶಿವಗುರುಗಳ ಬಗ್ಗೆ ಸಿಕ್ಕಷ್ಟು ಮಾಹಿತಿಗಳಿಸುತ್ತಾ ಹೋದ. ಒಂದು ಹಂತದಲ್ಲಿ ಅವರ ಬಗ್ಗೆ ಮಾಹಿತಿಗಳಿಸುವದೇ ಅವರು ಪ್ರಸ್ತಾಪಿಸುವ ಆಧ್ಯಾತ್ಮಕ್ಕಿಂತಲೂ ಮಹತ್ವಪೂರ್ಣವಾಗತೊಡಗಿತು. ಆದರೂ ಅವರ ಮೇಲಿನ ಆಕರ್ಷಣೆ ಕಡಿಮೆಯೇನೂ ಆಗಲಿಲ್ಲ.

ಹೀಗೊಂದು ದಿನ ಆಫೀಸಿನಲ್ಲಿ ಜಾಸ್ತಿ ಕೆಲಸ ಇರದಿದ್ದಾಗೊಂದು ಸಲ ಶಿವಗುರುಗಳ ವೆಬ್‌ಸೈಟ್ ಗೆ ಧಿಡೀರನೆ ಭೇಟಿಯಿತ್ತ. ಇಷ್ಟು ದಿವಸ ಅದರ ಬಗ್ಗೆ ಅವನಿಗೆ ಹೇಗೆ ಹೊಳೆದಿರಲಿಲ್ಲವೋ ಅವನಿಗೇ ಗೊತ್ತಿರಲಿಲ್ಲ. ಒಮ್ಮೆಲೇ ಅವನಿಗೆ ಶಿವಗುರುಗಳನ್ನು ನೋಡಲೇಬೇಕು ಎಂಬ ಉತ್ಕಟ ಆಸೆ ಆಯಿತು. ಆ ಆಸೆ ಅವನಿಗೆ ಬಂದಿದ್ದು ಶಿವಗುರುಗಳ ಮೇಲಿನ ಭಕ್ತಿಗಾಗಿ ಬಂದಿದ್ದೋ ಅಥವಾ ಅವರ ಮೇಲಿನ ಸಂಶಯ ಪರಿಹಾರದ ಉದ್ದೇಶಕ್ಕೋಸ್ಕರ ಬಂದಿದ್ದೋ ಅವನಿಗೂ ಹೊಳೆಯಲಿಲ್ಲ. ಅಂತೂ ಅವರ ವೆಬ್ ಸೈಟ್ ನೋಡುತ್ತಾ ಹೋದ ಹಾಗೆ ಹೊಸ ಹೊಸ ಸಂಗತಿಗಳು ಕಾಣುತ್ತಾ ಬಂದವು. ಶಿವಗುರುಗಳು ತಾನು ಎಣಿಸಿದಷ್ಟು ಸಣ್ಣ ಪ್ರಮಾಣದವರು ಅಲ್ಲವಂತಲೂ, ಅವರನ್ನು ಭೇಟಿ ಮಾಡುವದು ಅಷ್ಟು ಸುಲಭವಲ್ಲದಿರುವದೂ ಗೊತ್ತಾಯಿತು. ಅವರ ವೇಳಾಪಟ್ಟಿ ನೋಡಿದಾಗ ಅವರು ಏರ್ಪಡಿಸಿರುವ ಒಂದು ಕಾರ್ಯಕ್ರಮ ಕಂಡಿತು. ಆದರೆ ಆ ಕಾರ್ಯಕ್ರಮ ಮುಂದುವರೆದ ಮಟ್ಟದ್ದು ಇದ್ದುದಾದರಿಂದ ಅದರಲ್ಲಿ ಭಾಗವಹಿಸಲು ಕನಿಷ್ಠ ಒಂದಾದರೂ basic program ಅನ್ನು ಪೂರೈಸಿರಬೇಕಾಗಿದ್ದು ಅವಶ್ಯವಾಗಿತ್ತು. ಅವರನ್ನು ನೋಡುವ ಆಸೆ ಎಷ್ಟು ಜಾಸ್ತಿಯಾಗಿತ್ತೆಂದರೆ ಶಿವಗುರು ಅವರ ಸಂಸ್ಥೆ ಸಾಮಾನ್ಯ ಜನರಿಗಾಗಿ ಏರ್ಪಡಿಸುವ course ಗಳನ್ನು ಗಮನಿಸುತ್ತಾ ಹೋದ. ನಿಮ್ಮನ್ನು ನೀವೇ ಅರಿಯಿರಿ ಎಂಬ ಮೊದಲ ಹಂತದ course ಅದು. ಆ course ನಡೆಯುವ ಜಾಗ, ದಿನಾಂಕಗಳನ್ನು ಪರಿಶೀಲಿಸುತ್ತಾ ಬಂದ. ಚಂಡೀಗಢ... ದೆಹಲಿ... ಇತ್ಯಾದಿ... ಕೆಳಗೆ ನೋಡುತ್ತಾ ಬಂದ. ಹಾಂ! ಅಲ್ಲಿತ್ತು ಬೆಂಗಳೂರು! ಅವನ ತಲೆಯಲ್ಲೀಗಾಗಲೇ ಹಲವಾರು ಯೋಚನೆಗಳು ಬರತೊಡಗಿದ್ದವು. ತಾನೇನೋ ಈ course ಮಾಡಲು ಸಿಧ್ಧನಾಗಿದ್ದೇನೆ, ಆದರೆ ಬೆಂಗಳೂರಲ್ಲಿ ಆ ತರಬೇತಿ ನಡೆಯುವ ಜಾಗ ದೂರವಿದ್ದರೆ ಏನು ಗತಿ? ಬೆಂಗಳೂರಿನ traffic ನಲ್ಲಿ ಎಲ್ಲೂ ಹೋಗಲು ಮನಸ್ಸಾಗದು. ಇಲ್ಲೇ ಎಲ್ಲೋ ಹತ್ತಿರವಿದ್ದರೂ ಅದರ ಶುಲ್ಕ ತುಂಬಾ ಜಾಸ್ತಿ ಇದ್ದರೆ? ದುಡ್ಡಿನ ಸಮಸ್ಯೆ ತನಗಿರದಿದ್ದರೂ ಸುಮ್ಮ ಸುಮ್ಮನೇ ಯಾವದೋ ಒಂದು ತಲೆಕೆಡಿಸುವ ವಿಷಯಕ್ಕೋಸ್ಕರ ಖರ್ಚು ಮಾಡುವ ಹುಚ್ಚುತನವಲ್ಲ ಅವನದು. ಫೀಜು ಕಡಿಮೆ ಇದ್ದರೆ ಮಾತ್ರ ನೋಡೋಣ ಎಂದು ಮನದಲ್ಲೇ ತಲೆಗೆ ಹೊಳೆದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಹೌದು, ಬೆಂಗಳೂರಲ್ಲಿ ಇದ್ದು, ದುಡ್ಡೂ ಕಡಿಮೆ ಇದ್ದುದೇ ನಿಜವಾದರೆ ತನಗೆ ಸಮಯವೂ ಸಾಧಿಸಬೇಕಲ್ಲಾ? ತನ್ನ ಬಿಡುವಿಲ್ಲದ ದಿನಚರಿಯಲ್ಲಿ ಇಂಥದೇನಾದರೂ ಬಂದರೆ ಸುಮಾರು ದಿನಗಳ ಮೊದಲೇ ಕಾರ್ಯಕ್ರಮ ಯೋಜಿಸಿ ಇಡಬೇಕಾಗುತಿತ್ತು. ಬೆಂಗಳೂರು... ಬೆಂಗಳೂರಲ್ಲಿ ಎಲ್ಲಿ? ... ಹಾಗೇ ನೋಡುತ್ತಾ ಬಂದಾಗ ಅವನು ತನ್ನ ಕಣ್ಣುಗಳನ್ನೇ ನಂಬದಾದ! ತನ್ನ ಆಫೀಸ್ ಪಕ್ಕದಲ್ಲಿನದೇ ಅಡ್ರೆಸ್ಸು!! ಇವನ ಆಫೀಸಿಗೆ ಬರೀ ಎರಡು ನಿಮಿಷದ ನಡಿಗೆಯ ಹಾದಿಯಲ್ಲಿತ್ತು ಆ course ನಡೆಯುವ ಜಾಗ. ಯಾವಾಗ? ಸರಿಯಾಗಿ ಬರೀ ಎರಡೇ ದಿನ ಬಿಟ್ಟು! ಅದರ ವೇಳಾಪಟ್ಟಿಯೂ ತನ್ನ ಆಫೀಸ್ ಮುಗಿದ ಮೇಲೆಯೇ ಇದೆ. ಏನೋ ಒಂದು ಸಮ್ಮೋಹನಕ್ಕೊಳಪಟ್ಟಿರುವನಂತೆ ಸಣ್ಣಗೆ ಕಂಪಿಸಿ ಹೋದ!

ಅದಾಗಿ ಅವನಿಗೆ ಚೇತರಿಸಿಕೊಳ್ಳಲು ಸ್ವಲ್ಪ ಹೊತ್ತೇ ಬೇಕಾಯಿತು. ಹೊರಗೆ ಹೋಗಿ ಸಿಗರೇಟು ಹಚ್ಚಿ ಯೋಚಿಸತೊಡಗಿದ. ತಾನು ಆಧ್ಯಾತ್ಮದತ್ತ ಒಲಿಯುವದಕ್ಕೂ, ಶಿವಗುರುಗಳ ಕಡೆಗೆ ಆಕರ್ಷಿತವಾಗುವದಕ್ಕೂ, ತಾನು ಅವರನ್ನು ಭೇಟಿಯಾಗಬಯಸುವದಕ್ಕೂ, ಅವರ ವೆಬ್ ಸೈಟ್ ನೋಡುವದಕ್ಕೂ, ಆ courseನಲ್ಲಿ ಭಾಗವಹಿಸ ಬಯಸುವದಕ್ಕೂ ಇತ್ಯಾದಿ ಇವೆಲ್ಲವಕ್ಕೂ ಮತ್ತು course ನಡೆಯುವ ಸ್ಥಳ ತನಗೆ ಇಷ್ಟು ಹತ್ತಿರವಿದ್ದು ಇನ್ನೆರಡೇ ದಿನಗಳಲ್ಲಿ ಶುರುವಾಗಲಿದ್ದದ್ದಕ್ಕೂ ಏನೋ ಕಾಕತಾಳೀಯತೆ ಇದೆ ಎಂಬಂತೆ ತೋರಿತು. ಅಥವಾ ಕಾಕತಾಳೀಯ ಹೌದೋ ಅಲ್ಲವೋ ಎಂದು ಇನ್ನೊಮ್ಮೆ ಮೈ ಕಂಪಿಸಿತು! ಒಟ್ಟಿನಲ್ಲಿ ಈ ವಿಷಯದಲ್ಲಿ ಏನೋ ಇದೆ ಎಂದಾದರೂ ಖಚಿತವಾಯಿತು. ಸಿಗರೇಟು ಎಸೆದು ಒಳಗೆ ಬಂದು ಕೂಡಲೆ ಆ course ನ ಮಾಹಿತಿ ಪ್ರಕಾರ ಅದರಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದ. ಆ ಕಡೆಯಿಂದ ಅಷ್ಟೇನೂ ಆಸಕ್ತಿ ಇರಲಾರದ ಹೆಣ್ಣು ಧ್ವನಿಯೊಂದು ಮಾತನಾಡಿತು. ಸಾಮಾನ್ಯವಾಗಿ ಹೆಣ್ಣಿನ ಧ್ವನಿಯೆಂದರೆ ಏನೋ ಒಂದು ಕುತೂಹಲ, ಮೈ ಜುಂ ಜುಂ ಇವನಿಗೆ. ಇರುವ ವಿಷಯಬಿಟ್ಟು ಇನ್ನೇನೋ ಮಾತಾಡುವ ಮಹಾ ಪ್ರಣಯವಿಲಾಸಿ. ಆದರೆ ಅವತ್ತೇನಾಯಿತೋ ಏನೋ ಸುಮ್ಮನೆ ಮಾಹಿತಿ ಕೇಳಿ ಫೋನಿಟ್ಟ. ಏನಿಲ್ಲ, ಆ course ಗಾಗಿ ಏನೂ ಮುಂಗಡವಾಗಿ ಹಣ ಕೊಟ್ಟು ಜಾಗ ಕಾಯ್ದಿಡಬೇಕಾಗಿಲ್ಲ, ಅವತ್ತಿನ ದಿನವೇ ಅಲ್ಲಿ ಹೋಗಿ ಹೆಸರು ನೋಂದಾಯಿಸಿದರೆ ಸಾಕೆಂದು ಆ ಕಡೆಯ ಹೆಣ್ಣು ಹೇಳಿತ್ತು. ಒಟ್ಟಿನಲ್ಲಿ ಪ್ರವೇಶಕ್ಕೆ ಅನುಮತಿ ಸಿಕ್ಕರೆ ಸರಿ, ಇಲ್ಲಾ ಯಾಕಷ್ಟೊಂದು ಅದಕ್ಕೋಸ್ಕರ ಹಾತೊರೆಯುವದು ಎಂದು ಮನಸ್ಸಿನಲ್ಲೇ ತನಗೆ ತಾನೆ ಸಮಧಾನ ಹೇಳಿಕೊಂಡ. 

ಯಾವುದೇ ಸಣ್ಣ ವಿಷಯವಿರಲಿ, ದೊಡ್ಡ ವಿಷಯವಿರಲಿ, ಎಲ್ಲರ ಮುಂದೆ ಹೇಳಿಕೊಳ್ಳುವದು ಇವನ ರೂಢಿ. ಆದರೆ ಇಂಥ ವಿಷಯಗಳನ್ನು ತನ್ನ ಕೀಟಲೆ ಮಾಡುವ ಸ್ನೇಹಿತರಿಗೆ ಹೇಳುವದೆಂದರೆ ಹಾಸ್ಯಾಸ್ಪದಗೀಡಾಗಲಿಕ್ಕೆ ಬಲಿ ಯಾಗುವುದೇ ಅಂತ ಅರ್ಥ. ಆದರೆ ಇಂಥಾ ಕಾಕತಾಳೀಯತೆ? ಹೇಳದೇ ಇರುವ ಸೈರಣೆಯೂ ಇವನದಲ್ಲ. ಏನೇ ಇರಲಿ, ಹೆಂಡತಿಗಂತೂ ಹೇಳುವ ವಿಷಯ ಖಂಡಿತಾ ಅಲ್ಲ! ಅಂತೂ ತನ್ನೊಳಗೇ ವಿಷಯ ಇಟ್ಟುಕೊಂಡು ಆ ದಿನಕ್ಕಾಗಿ ಕಾಯತೊಡಗಿದ. 

ಕೊನೆಗೂ ಆ ದಿನ ಬಂದೇ ಬಿಟ್ಟಿತು. ಅವತ್ತು ಸಾಯಂಕಾಲ ಆಫೀಸ್ ಮುಗಿಸಿಕೊಂಡು ಹೇಗೂ ತನ್ನ ಆಫೀಸ್ ಪಕ್ಕದಲ್ಲೇ ಇತ್ತಲ್ಲ, ಆ course  ನಡೆಯುವ ಜಾಗಕ್ಕೆ ಹೋದ. ಮೊದಲಿನ ಒಂದೂವರೆ ಗಂಟೆಗಳ ಪರಿಚಯದ ನಂತರ ಹೆಸರು ನೋಂದಾಯಿಸಲು ಅವಕಾಶ ಕೊಟ್ಟರು. ಇವನು ಯಂತ್ರಮಾನವನ ಥರ ಹೆಸರು ನೋಂದಾಯಿಸಿದ್ದೂ ಆಯಿತು, ಒಳಗಡೆ ಹೋಗಿ ಕುಳಿತಿದ್ದೂ ಆಯಿತು. ಶಿವಗುರು ಅವರ ಶಿಷ್ಯರಲ್ಲೊಬ್ಬರಾದವರು ಅದನ್ನು ನಡೆಸಿಕೊಟ್ಟರು. ಅವರ ತೇಜಸ್ಸಿಗೂ ತಕ್ಷಣ ಅವನು ಮಾರುಹೋದ. ಶಿವಗುರುಗಳ ಪ್ರಭಾವ ಅಪೂರ್ವವಾದದ್ದು, ಅವರಲ್ಲದೆ ಅವರ ಶಿಷ್ಯರದೂ ಎಷ್ಟೊಂದು ಮನತಟ್ಟುವ ನಡತೆ ಇದೆ. ಆ ಪೂರ್ತಿ ಕಾರ್ಯಕ್ರಮ ನಡೆಸಿಕೊಡುವವರು ಏನೂ ಸಂಭಾವನೆ ಇರದೇ ಕೆಲಸ ಮಾಡುವ ಕಾರ್ಯಕರ್ತರು. ಅವರು ನಗುನಗುತ್ತಾ ಇವರಿಗೋಸ್ಕರ ಮಾಡಿದ ಎಲ್ಲ ಕೆಲಸಗಳನ್ನು ನೋಡಿ ಅವರದೂ ಎಂತಹ ನಿಸ್ವಾರ್ಥ ಸೇವೆ ಎನ್ನಿಸಿತು.

ಅದಾದ ಮೇಲೆ ಅವನನುಭವಕ್ಕೆ ಬಂದಿದ್ದು ಒಂದು ಅವಿವರಣೀಯ ಸಂಗತಿ. ಇವನು ಭಾಷೆಯಲ್ಲಿ ಎಷ್ಟೇ ಜಾಣನಿದ್ದರೂ ಆ ಅನುಭವವನ್ನು ವಿವರಿಸುವ ಧೈರ್ಯ ಮಾಡಲಾರ. ದಿನಕ್ಕೆ ಮೂರು ತಾಸಿನಂತೆ, ನಾಲ್ಕು ದಿನಗಳ ಸುಧೀರ್ಘ ಸೆಷನ್ನುಗಳು ಆದನಂತರ ರವಿವಾರ ಪೂರ್ತಿ ದಿನದ ತರಬೇತಿಯ ನಂತರ ಎಲ್ಲರಂತೆ ಆ course ನಲ್ಲಿ ಇವನಿಗೂ ದೀಕ್ಷೆ ಕೊಡಲಾಯಿತು. ಅಬ್ಬಾ! ಅದೆಂಥ ಅನುಭೂತಿ! ಅದೆಂಥ ಅಗಾಧತೆಯ ಅರಿವು! ಇಡೀ ಬ್ರಹ್ಮಾಂಡದ ಅಂಥ ಅಗಾಧತೆಯ ಮುಂದೆ ತಾನೆಂಥ ಹುಲ್ಲು ಕಡ್ಡಿ ಎನಿಸಿತು. ತನ್ನ ಸೊಕ್ಕು, ತನ್ನ ಆಸೆ-ಅಪೇಕ್ಷೆ, ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ ಹೀಗೆ ತನ್ನ ಲಕ್ಷಣಗಳ ಬಗ್ಗೆ ಅನೇಕ ಪರ್ಯಾಯ ಪದಗಳು, ವಿಶೇಷಣಗಳು ತೋಚುತ್ತಾ ಹೋದ ಹಾಗೆ ಅವೆಲ್ಲಾ  ಕ್ಷುಲ್ಲಕ ಅನಿಸಿಬಿಟ್ಟವು. ಎಲ್ಲಾ ಬಿಟ್ಟು ಓಡಿ ಹೋಗಲೇ ಎಂದೂ ಅನಿಸಿತು. ಎಂದೂ ಭಾವುಕನಾಗಿ ಅಳದೇ ಇರುವವನ ಕಣ್ಣುಗಳು ಕಣ್ಣೀರ ಕೋಡಿ ಹರಿಸಿದ್ದವು. ಯಾವದೋ ವಿಚಿತ್ರ ಸಂಕಟ. ಸಂಕಟವಲ್ಲ, ಒಂಥರಾ ಭಾವೋದ್ವೇಗ. ಅಳುತ್ತಿರುವುದಾದರೂ ಏಕೆ, ದುಃಖಕ್ಕಾಗಿಯೋ ಸುಖಕ್ಕಾಗಿಯೋ, ಭಯಕ್ಕೋ, ಉನ್ಮಾದಕ್ಕೋ ಒಂದೂ ತೋಚದ ಥರ ಒಂದೇ ಸಮನೆ ಅಳುತ್ತಾ ಹೋದ. ಆಳುತ್ತಾ ಅಳುತ್ತಾ ಹೋದಂತೆ ಏನೇನೋ ವಿಚಿತ್ರ ಸಂಗತಿಗಳು ಗೋಚರಿಸುತ್ತ ಹೋದವು......

ಮನೆಯಲ್ಲೂ ಬರಬರುತ್ತಾ ಇವನ ನಡವಳಿಕೆ ಒಂಥರಾ ವಿಚಿತ್ರವಾಗ ತೊಡಗಿತು. ಕೆಲವೊಮ್ಮೆ ಏನೂ ಸ್ಪಷ್ಟವಾಗಿ ಕಾಣದ ಥರ, ಕೆಲವೊಮ್ಮೆ ಏನೋ ಹೊಸತು ಕಂಡುಕೊಂಡ ಥರ. ಕೆಲವೊಮ್ಮೆ ಎಲ್ಲಾ ಕಳೆದುಕೊಂಡ ಥರ, ಇನ್ನೂ ಕೆಲವೊಮ್ಮೆ ಯಾರಿಗೂ ಇರಲಾರದ್ದನ್ನು ಪಡೆದುಕೊಂಡ ಥರ. ಚಿತ್ರ ವಿಚಿತ್ರವಾದ ಅನುಭವ, ಅನಿಸಿಕೆಗಳು. ಯಾರಲ್ಲಿ ಹೇಳಿಕೊಂಡರೂ ಅವರು ಅರ್ಥ ಮಾಡಿಕೊಳ್ಳಲಾರೆಂಬ ಮುನ್ನೆಣಿಕೆ. ಖುಷಿಯೂ ಹೌದು, ಗೊಂದಲವೂ ಹೌದು. ಹೀಗೆಯೇ ವಿವರಿಸಲಾಗದ ದಿಗಿಲಿನಲ್ಲಿ ಇನ್ನೆರಡು ದಿನ ಉಳಿದ course ಮುಗಿಸಿದ. ಅದರಲ್ಲಿ ಕೊನೆಯ ದಿನ ಅವನು ಈ ಮೊದಲೇ ನೋಡಿದ ವೆಬ್ ಸೈಟ್ ಮಾಹಿತಿ ಪ್ರಕಾರ ಶಿವಗುರು ಅವರ ವಿಶೇಷ ಕಾರ್ಯಕ್ರಮದ ಬಗ್ಗೆ ಪ್ರಕಟಣೆಯನ್ನು ಮಾಡಲಾಯಿತು. ತಕ್ಷಣ ಇವನು ಹೋಗಲೇ ಬೇಕೆಂದು ನಿರ್ಧಾರ ಮಾಡಿದ. 

ಅಂದು ರಾತ್ರಿ ಸುಮಾರು ದಿವಸಗಳಿಂದ ಕೆಲಸ ಮತ್ತು ಯೋಗದ course ನಲ್ಲಿ ಮಗ್ನವಾಗಿದ್ದರಿಂದ ಭೇಟಿಮಾಡಲಿಕ್ಕಾಗದೇ ಇರುವ ತನ್ನ ವಾಡಿಕೆಯ ಗೆಳೆಯನನ್ನು ಕಾಣಲು ಹೋದ. ಬಹಳ ದಿವಸಗಳ ನಂತರ ಸಿಕ್ಕ ಗೆಳೆಯ ಹೇಳದೇ ಕೇಳದೇ ವ್ಹಿಸ್ಕಿಗೆ ಅಣಿವು ಮಾಡತೊಡಗಿದ. ರಾಜೀವನೂ ಬೇಡವೆನ್ನಲಿಲ್ಲ. ಅವನ ತಲೆಯೂ ಮಿತಿಮೀರಿ ದುಡಿದ ಕಾರ್ಯಾಗಾರ ವಾಗಿತ್ತು. ಸ್ವಲ್ಪ ಪುನರುಜ್ಜೀವನ ವ್ಹಿಸ್ಕಿಯ ರೂಪದಲ್ಲಿ ಬೇಕಾಗಿತ್ತು. ಇಬ್ಬರೂ ಗೆಳೆಯರು ಕುಡಿಯತೊಡಗಿದರು. ಒಂದೆರಡು ಪೆಗ್ಗು ಒಳಗೆ ಹೋದ ಮೇಲೆ ಒಳಗಿನ ಮನುಷ್ಯರು ಪ್ರಕಟವಾದರು. ರಾಜೀವ ತುಂಬಾ ಭಾವುಕನಾಗಿ ತನ್ನ ಅಳಲನ್ನು ಹೇಳಿಕೊಂಡ. ಅಷ್ಟರಲ್ಲೇ ತನ್ನ ಮೇಲ್ಮೆಯನ್ನು ತೋರಿಸಿಕೊಳ್ಳಲೂ ಮರೆಯಲಿಲ್ಲ. ತನಗಾದ ಅನುಭವಗಳ ಬಗ್ಗೆ, ತಾನು ಹೊಸದಾಗಿ ಕಂಡುಕೊಂಡ ದಾರ್ಶನಿಕತೆಯ ಬಗ್ಗೆ. ಶಿವಗುರುಗಳ ಪ್ರಕಾಂಡತೆ ಬಗ್ಗೆ ಅವರು ತನ್ನ ಮಾವನೋ ಎನ್ನುವ ರೀತಿ ಹೇಳಿಕೊಳ್ಳಲಾರಂಭಿಸಿದ. ಅವನ ಗೆಳೆಯ ಮನೀಷ್‌ನೂ ಸಾಮಾನ್ಯ ಪ್ರತಿಭೆಯವನಲ್ಲ. ಸಾಕಷ್ಟು ತರ್ಕವನ್ನು ತನ್ನ ವ್ಯಾವಹಾರಿಕ ಜೀವನಶೈಲಿಯಲ್ಲಿ ಕಂಡುಕೊಂಡಿದ್ದ. ಯಾರೇ ಒಂಚೂರು ದಾರ್ಶನಿಕತೆಯ ಬಗ್ಗೆ ಮಾತನಾಡಿದರೂ ಅದಕ್ಕೆ ವಿರುಧ್ಧವಾಗಿ ತನ್ನದೇ ಶೈಲಿಯಲ್ಲಿ ವಾದವನ್ನು ಮಂಡಿಸುತ್ತಿದ್ದ. ರಾಜೀವನ ಕಥೆ ಕೇಳಿ ಒಂಥರಾ ಸೊಕ್ಕಿನ ನಗು ನಗತೊಡಗಿದ. 

"ಯಾರು? ಶಿವಗುರು ಅವರಾ? ಅವರ ಬಗ್ಗೆ ನಾನು ಎನೇನೋ ಓದಿದ್ದೀನಲ್ಲಪ್ಪಾ?"

"ಏನೋ ನೀನು ಓದಿರೋದು? ಅಂಥದ್ದಿಂಥದ್ದೇನಾದರೂ ಇದೆಯಾ? ನಾನೂ ಸುಮಾರಾಗೇ ಅವರ ಬಗ್ಗೆ ಓದಿದ್ದೇನಲ್ಲ? ಅಂಥದ್ದೇನೂ ನನ್ನ ಗಮನಕ್ಕೆ ಬರಲಿಲ್ಲವಲ್ಲ?"

"ಹೌದಾ, ಹಾಗಾದರೆ ಇದನ್ನು ನೀನು ಖಂಡಿತಾ ನೋಡಿರೊಲ್ಲ, ಇಗೊ, ಇದನ್ನ ಸ್ವಲ್ಪ ನೋಡು" ಎಂದು ಮನೀಷ ತನ್ನ ಐ ಪ್ಯಾಡ್ ನಲ್ಲಿ ಒಂದು ವಿಡಿಯೊ ಹಾಕಿ ತೋರಿಸಿದ. ಅದರಲ್ಲಿ ನೋಡಿ ರಾಜೀವ ತನ್ನ ಕಣ್ಣುಗಳನ್ನೇ ನಂಬದಾದ! ಅದೊಂದು ಸಾಕ್ಷ್ಯ ಚಿತ್ರ. ಶಿವಗುರು ಅವರ ಬಗ್ಗೆ ಯಾರೋ ಒಂದಿಬ್ಬರು ಮೂವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು. ಶಿವಗುರು ಅವರಿಗೆ ಮದುವೆಯಾಗಿತ್ತೆಂದಲೂ, ಅವರೂ ಸಹ ಶೋಕಿಯ ಜೀವನ ಸಾಗಿಸಿದ್ದಾರೆಂದಲೂ, ಅವರಿಗೆ ಒಬ್ಬ ಮಗನಿದ್ದಾನೆಂತಲೂ ಇತ್ಯಾದಿ ರಾಜೀವನಿಗೆ ಗೊತ್ತಿದ್ದ ವಿಷಯಗಳೇ ಇದ್ದರೂ ಕೊನೆಯಲೊಂದು ಪ್ರಶ್ನೆ ಹದ್ದಿನ ಹರಿತ ಕೊಕ್ಕು ಚುಚ್ಚಿದ ಹಾಗೆ ಚುಚ್ಚಿತು. "ಶಿವಗುರು ಅವರ ಹೆಂಡತಿ ಚಿಕ್ಕ ವಯಸ್ಸಿನಲ್ಲೇ ಮರಣಕ್ಕೀಡಾಗಿದ್ದು ಆ ಅಕಾಲಿಕ ಮರಣದ ಹಿಂದೆ ಏನಾದರೂ ಶಿವಗುರುಗಳ ಕೈವಾಡವಿದೆಯೆ?" ಎಂಬುದು. 

ಅರೆ ಕ್ಷಣ ಏನೂ ಮಾತನಾಡದೆಹೋದ ರಾಜೀವ. ಮೊದಲಿನ ಎಲ್ಲ ಸಂಗತಿಗಳು ರಾಜೀವನಿಗೆ ಹೆಚ್ಚು ಕಡಿಮೆ ಗೊತ್ತಿದ್ದವು. ಶಿವಗುರು ಅವರು ಮದುವೆ ಯಾಗಿದ್ದು, ಸಂಸಾರಿಯಾಗಿದ್ದುಕೊಂಡೇ ಯೋಗಿಯಾಗಿ ಜನರಿಗೆ ಸಾಧನೆ ಹೇಳಿಕೊಡಲಾರಂಭಿಸಿದ್ದು, ಅವರ ಬಗ್ಗೆ ಆ ಕೋರ್ಸಲ್ಲಿ ನೋಡಿದ ವಿಡಿಯೋದಲ್ಲೇ ಇದ್ದವು. ಇವನಿಗೆ ಕಷ್ಟವೆನಿಸಿದ ವಿಷಯ ಅದಾಗಿರಲಿಲ್ಲ. ಅವರ ಪತ್ನಿಯ ಮರಣದ ಬಗ್ಗೆ ತಾನು ಯೋಚಿಸದೇ ಹೋದ ಒಂದು ಆಯಾಮ ನೆನೆಸಿಕೊಂಡೇ ತಾನು ಮಾಡಿದ ಕೋರ್ಸ ಬಗ್ಗೆ ಮತ್ತು ತನ್ನ ಬಗ್ಗೆಯೇ ಒಂಥರಾ ಜುಗುಪ್ಸೆ ಉಂಟಾಯಿತು. ಇದಕ್ಕೂ ಮುಂಚೆ ತಾನು ನೋಡಿದ ಸ್ವ ಘೋಷಿತ ದೇವ ಮಾನವರ ಜೀವನದಲ್ಲಿ ಒಂದಲ್ಲಾ ಒಂದು ವಾದವಿವಾದ ಇದ್ದೇ ಇತ್ತು. ಯಾರೊ ಲೈಂಗಿಕ ಹಗರಣದಲ್ಲೋ, ಇನ್ನೂ ಕೆಲವರು ದುಡ್ಡು, ರಾಜಕಾರಣಿಗಳ ಸಾಂಗತ್ಯದ ವಿವಾದಗಳಲ್ಲೋ ಸಿಕ್ಕಿಕೊಂಡಿದ್ದರು. ರಾಜಕಾರಣಿಗಳಿಗಿಂತ ಪ್ರಬಲ ಶಕ್ತಿಯ ಆಗಾರವಾದವರೂ ಸುಮಾರು ಜನ ಸ್ವಾಮಿಗಳಿದ್ದೇ ಇದ್ದರು. ಅವೆಲ್ಲರನ್ನು ನೋಡಿಯೇ ರಾಜೀವನಿಗೆ ಆಧ್ಯಾತ್ಮದ ಬಗ್ಗೆ ಸಂಶಯ ಮೂಡಿದ್ದೂ ನಿಜ. ಆದರೂ ಶಿವಗುರುವಿಗೆ ಅವನು ಮಾರು ಹೋದದ್ದು ಅವರ ವಾಕ್ ಪಾಂಡಿತ್ಯಕ್ಕೆ, ಅವರ ಪ್ರೌಢಿಮೆಗೆ. ಇಷ್ಟೆಲ್ಲ ಗೊತ್ತಿರುವವರು ಇಂಥದೆಲ್ಲ ಮಾಡುವ ಅವಕಾಶವೇ ಇಲ್ಲ ಎಂದೆಲ್ಲಾ ಅಂದುಕೊಂಡ. ಆದರೆ ಅಂಥದ್ದೇನಾದರೂ ನಿಜವಾಗಿಯೂ ಅಗಿದ್ದಾದರೆ? ಛೇ, ಎಂಥ ಕೆಲಸ ಮಾಡಿಬಿಟ್ಟೆ ಎಂದು ಹಲುಬಿದ. ವ್ಯಕ್ತಿಯ ತರ್ಕ, ಅವನು ಏನು ಹೇಳುತ್ತಾನೆ ಎನ್ನುವದಕ್ಕಿಂತಲೂ ಆ ವ್ಯಕ್ತಿಯ ಹಿನ್ನೆಲೆ ಅವನು ಹೇಳುವದರ ಪ್ರಭಾವದ ಮೇಲೆಯೇಪರಿಣಾಮ ಬೀಳಿಸುತ್ತದೆ ಎನ್ನುವದು ನಿಜಕ್ಕೂ ನಿರುಪಯೋಗಿ ವಿಡಂಬನೆ.

ಅವನ ಆ ಸ್ಥಿತಿ ನೋಡಿ ಮನೀಷನೇ ಅಲ್ಲಾ, ಯೋಚನೆ ಮಾಡಿ ನೋಡು, ಈಗಿನ ಕಾಲದಲ್ಲಿಯೂ ದೇಹ ಬಿಡುವದು ಅಂತ ಒಂದಿದೆಯೇ? ಯಾರಾದರೂ ಇಛ್ಛಾ ಮರಣ ಹೊಂದುವದು ಸಾಧ್ಯವಿದೆಯೇ? ಅವರ ಹೆಂಡತಿಯೂ ಸಹ ಅವರ ಹಾಗೆ ಯೋಗದಲ್ಲಿ ನಿಸ್ಸೀಮರಿದ್ದರಂತೆ ಅನ್ನುವದೇನೋ ನಿಜವಿರಬಹುದು. ಆದರೆ ಯಾರಿಗೆ ತಾನೆ ಅಂಥ ಚಿಕ್ಕ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಲಿಕ್ಕೆ ಧೈರ್ಯ ಅಥವಾ ಮಾಡುವ ಸಂಪೂರ್ಣ ಜ್ಞಾನ ಇರಲು ಸಾಧ್ಯ? ಏನೋ ಒಂದಿರಬೇಕಲ್ಲವೇ? ಒಬ್ಬರನ್ನು ಹೊಸಕಿ ತಾನು ಮುಂದೆ ಬರಲಿಕ್ಕೆ ಮನುಷ್ಯ ಏನೇನು ಮಾಡುತ್ತಾನೋ ಸ್ವತಃ ಮನುಷ್ಯ ಜನ್ಮಕ್ಕೇ ಅರಿಯದ ಸಂಗತಿ. ಎಂದೆಲ್ಲಾ ಒಳಗೆ ಹಾಕಿದ ಪರಮಾತ್ಮನ ಇರುವಿನ ಬಗೆಗೇ ಸಂಶಯ ತರುವಂತಹ ಮಾತು ಮಾತನಾಡಿದ. ರಾಜೀವನಿಗೆ ಇಲ್ಲದ ಗೊಂದಲ ಶುರುವಾಯಿತು. ಹಿಡಿದಿದ್ದನ್ನು ಸುಮ್ಮನೆ ಬಿಡುವ ಜಾಯಮಾನದವನಲ್ಲ ಅವನು. ಇಂಥದ್ದೇನೊ ಮಾಡಿ ಸುಮ್ಮನೇ ತನಗೆ ತಾನೇ ನಗೆಪಾಟಲಿಗೀಡಾದೆನಲ್ಲ ಎಂದು ಯೋಚಿಸತೊಡಗಿದ. ತನ್ನ ಮೇಲೆ ಕನಿಕರ, ಶಿವಗುರುಗಳ ಮೇಲೆ ಸಿಟ್ಟು, ಎರಡೂ ಉಂಟಾದವು. ಈ ಗದ್ದಲದಲ್ಲಿ ಪರಮಾತ್ಮ ಸ್ವಲ್ಪ ಜಾಸ್ತಿಯೇ ಒಳಗಡೆ ಹೋಗಿದ್ದು ಅವನ ಗಮನಕ್ಕೆ ಬಂದಿದ್ದು ಮಾರನೆ ದಿನ ಎಚ್ಚೆತ್ತಾಗಲೇ. ತಲೆ ಎನ್ನುವದು ದೇವಸ್ಥಾನದಲ್ಲಿ ಬಾರಿಸುವ ಜಾಗಟೆಯ ಹೊಳಲಾಗಿತ್ತು.
ಆ ಪೂರ್ತಿ ದಿವಸ ತನಗಾದ ಅನುಭವಗಳ ಬಗ್ಗೆ ಯೋಚಿಸುವದರಲ್ಲೇ ಹೋಯಿತು. ತಾನು ಅಲ್ಲಿ ಕಲಿತ ವಿಶಿಷ್ಠ ಸಂಗತಿಗಳು ಒಂದು ಹೊಸ ಅರಿವು ಮೂಡಿಸಿದ್ದೇನೋ ನಿಜ. ವ್ಯಕ್ತಿ ತನ್ನನ್ನು ತನಗಿಂತ ಹೊರಗಿಟ್ಟು ನೋಡಿದಾಗಲೇ ತಾನು ಬೇರೆಯವರನ್ನು ಯಾವ ದೃಷ್ಟಿಯಿಂದ ನೋಡುವನೋ ಹಾಗೆ ತಾರತಮ್ಯ ಇರದೆ ನೋಡಲು ಸಾಧ್ಯ. ಬೇರೆಯವರ blind spot ಗುರುತಿಸುವದು ಎಷ್ಟು ಸುಲಭವೋ ತನ್ನದನ್ನು ಕಂಡುಹಿಡಿಯುವದು ಅಷ್ಟೇ ಕಷ್ಟ. ಯಾವುದೇ ಸಂಗತಿ ಜೀವಕ್ಕೆ ಕುತ್ತು ಬರುವಷ್ಟು ಗಂಭೀರವಾಗಿಲ್ಲದಿದ್ದರೂ ನಾವು ಮಾತ್ರ ಅದರ ಮೇಲೆಯೇ ನಮ್ಮ ಜೀವನ ನಿಂತಿದೆ ಎನ್ನುವಷ್ಟು ಗಂಭೀರವಾಗಿ ಯೋಚಿಸುವದು, ಸಂಗತಿಗಳು ನಮಗೆ ಬೇಕಾದ ಹಾಗೆ ನಡೆಯದಿದ್ದಾಗ ಮಾತ್ರ. ಇನ್ನೂ ಹಲವಾರು ಸಂಗತಿಗಳು ಧುತ್ತೆಂದು ಕಣ್ಣ ಮುಂದೆ ಬಂದು ಮಾಯವಾಗುತ್ತಿದ್ದವು. ಇವೆಲ್ಲ ಅನುಭೂತಿಯ ಜೊತೆಗೆ ನಾನೇನಾದರೂ ಕಳ್ಳ ಸನ್ಯಾಸಿಗೆ ಮೋಸ ಹೋಗುತ್ತಿದ್ದೇನೆಯೇ ಎಂಬ ಸಂಶಯವೂ ಸುಳಿಯದೇ ಇರಲಿಲ್ಲ.ಆದರೆ ಅವನಿಗಾದ ಆಶ್ಚರ್ಯದ ಸಂಗತಿಯೆಂದರೆ ತಾನು ಮಾಡಿದ ಕೋರ್ಸಗಾಗಿ ಬರೀ ಒಂದು ಸಾವಿರ ಮಾತ್ರ ಖರ್ಚು ಮಾಡಿದ್ದ. ಏನು ಬರುತ್ತೆ ಈ ಕಾಲದಲ್ಲಿ? ದುಡ್ಡು ಮಾಡುವ ಸಂಸ್ಥೆಯೇನಾದರೂ ಆಗಿದ್ದಿದ್ದಲ್ಲಿ ಇಂಥ ಒಂದು ವಾರದ ಕೋರ್ಸಗೇ ಸುಮಾರು ಫೀಜು ಹೇರಬಹುದಿತ್ತಲ್ಲಾ? ಬರೀ ಶ್ರೀಮಂತರು ಮಾಡುವಂಥ ಧ್ಯಾನ ಸಂಕೂಟಗಳಿಗೇನು ಕಮ್ಮಿಯಿಲ್ಲ ಇಲ್ಲಿ.

ಇವೆಲ್ಲಾ ಪ್ರಶ್ನೆಗಳಿಗೆ ಪರಿಹಾರ ಸಿಗಬೇಕೆಂದರೆ ತನ್ನ ಕೋರ್ಸ ಮುಗಿದಇನ್ನೆರಡು ದಿನ ಬಿಟ್ಟು ಶುರುವಾಗಬೇಕಾಗಿದ್ದ ಶಿವಗುರು ಅವರು ಸ್ವತಃ ನಡೆಸಿಕೊಡಲಿದ್ದ ಒಂದು ಅಪರೂಪದ ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ನಿಶ್ಚಯಸಿದ್ದ. ಅದಕ್ಕೂ ಮುಂಗಡವಾಗಿ ಜಾಗೆ ಕಾಯ್ದಿಡಬೇಕಾಗಿತ್ತು. ಆದರೆ ಇವನ ನಿರ್ಣಯ ಧಿಡೀರನೇ ಆಗಿದ್ದರಿಂದ ತನ್ನಷ್ಟೆ ಧಿಡೀರ್ ಆಗಿ ಯೋಚಿಸಿ ತಯಾರಾಗಿದ್ದ ಇನ್ನೆರಡು ಜನರನ್ನು ಕೂಡಿಸಿಕೊಂಡು ತನ್ನ ಕಾರ್ ಒಡಿಸಿಕೊಂಡು ಹೋಗಲು ಅಣಿವಾದ. ಸುಮಾರು ಎಂಟು ತಾಸಿನ ಕಾರಿನ ಹಾದಿ ಅದು. ರಾತ್ರಿ ಇಡೀ ತಾನು, ಇನ್ನೊಬ್ಬನ ಜೊತೆ ಕಾರು ಓಡಿಸಿಕೊಂಡು ಶಿವಗುರುಗಳ ಆಶ್ರಮವಿರುವ ಊರಿಗೆ ಹೋದ. 

ಮರುದಿನ ಬೆಳಿಗ್ಗೆ ಆಶ್ರಮದಲ್ಲಿ ಕಾಲಿಡುತ್ತಿದ್ದಂತೆ ಅತೀ ಸುಂದರ ದೃಶ್ಯವೊಂದನ್ನು ನೋಡಿದ. ಆಹ್ಲಾದಕರ ಮುಂಜಾವು ಅದು, ಚುಮು ಚುಮು ಛಳಿ, ಹಿತವಾದ ನೆಲದ ವಾಸನೆ, ಪಕ್ಷಿಗಳ ಕಲರವ, ಎಲ್ಲೋ ಒಂದೆಡೆ ನವಿಲುಗಳ ಕೂಗು, ಎಷ್ಟೇ ಜುಗುಪ್ಸೆಗೊಂಡವನೂ ಜೀವನದ ಬಗ್ಗೆ ಪುಲಕಿತವಾಗುವಂಥ ವಾತಾವರಣವದು. ಪರ್ವತಗಳ ಅಡಿ ಇದ್ದ ಆಶ್ರಮದ ನೋಟವೇ ಒಂದು ದೈವೀ ಅನುಭವವಾಗಿತ್ತು. ಕಣ್ಣೆತ್ತಿ ಸಾಲು ಸಾಲಾಗಿ ಮಲ್ಲ ಯೋಧ್ಧರ ಹಾಗೆ ನಿಂತು ತಮ್ಮ ಸುಂದರ ಅಂಗಸೌಷ್ಠವ ತೋರಿಸುತ್ತಿರುವ ಪರ್ವತಗಳತ್ತ ನೋಡಿದ. ಅಂಥ ಅದ್ಭುತ ಪರ್ವತಗಳ ಶ್ರೇಣಿಯನ್ನು ಮುತ್ತಿಕ್ಕಲು ಮೋಡಗಳು ಸ್ಪರ್ಧಿಸುವ ರೀತಿ ತೋರುತ್ತಿತ್ತು. ನಂತರ ಮೋಡಗಳು ಸಾಲಾಗಿ ಎಲ್ಲಕ್ಕಿಂತ ಎತ್ತರವಿರುವ ಪರ್ವತದ ಸುತ್ತ ಸುತ್ತ ತೊಡಗಿದವು. ಅಂಥ ರಮಣೀಯ ದೃಶ್ಯ ರಾಜೀವನು ಪ್ರತ್ಯಕ್ಷವಲ್ಲ, ಟೀವಿಯಲ್ಲಿ ಕೂಡ ನೋಡಿರಲಿಲ್ಲ. ರಾತ್ರಿಯಿಡೀ ಕಾರು ನಡೆಸಿದ ಆಯಾಸ ಆವಿಯಾಗಿ ಹೋದಂತೆ ಅನಿಸಿತು. ತಾನು ಬಂದ ಉದ್ದೇಶವನ್ನೇ ಒಂದು ಘಳಿಗೆ ಮರೆತು ಎಲ್ಲರಿಗೆ ತಾನು ನೋಡಿ ಆನಂದಿಸುತ್ತಿದ್ದ ದೃಶ್ಯ ಬೆರಳುಮಾಡಿ ತೋರಿಸಿದ. 

ರಿಜಿಸ್ಟರಿನಲ್ಲಿ ತನ್ನ ಹೆಸರು ದಾಖಲಿಸಿ ಎಲ್ಲರ ಜೊತೆಗೆ ಒಳಗೆ ನಡೆದ. ಸಾವಿರಾರು ಜನರು ನೆರೆದಿದ್ದರಿಂದ, ನಿಧಾನವಾಗಿ ಶಿವಗುರುಗಳ ಪ್ರಭಾ ರಾಜೀವನಿಗೆ ಅರಿವಾಗತೊಡಗಿತ್ತು. ತುಂಬಾ ದೊಡ್ಡದಾದ ಆಶ್ರಮವದು, ಇಷ್ಟೆಲ್ಲಾ ಜನರಿಗೆ ಅತ್ಯಂತ ಸುಲಭವಾಗಿ ಮತ್ತು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿಯ ಅನಾನುಕೂಲತೆ, ಅಸಹ್ಯಕರವಾದ ಅನುಭವ ಆಗಲಿಲ್ಲ. ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡುವ ಕಾರ್ಯಕರ್ತರು ಅವನಿಗಾಗುವ ಒಳ್ಳೆಯ ಅನುಭವಕ್ಕೆ ನೆರವು ಮಾಡಿಕೊಡುತ್ತಿದ್ದರು. ತಣ್ಣೀರ ಸ್ನಾನವಾದರೂ ಹಿತವಾಗಿತ್ತು. ಯಾವಗಲೂ ತನ್ನದೇ ಮಾತು ಕೇಳುವಂತೆ ಒತ್ತಾಯಿಸುವ ದೇಹದಮೇಲೆ ಸೇಡು ತೀರಿಸಿಕೊಳ್ಳುವ ಮುದ್ದಾದ ಖುಷಿ ಅವನದು. 

ಸ್ನಾನ, ತಿಂಡಿಯಾದನಂತರ ಶಿವಗುರುಗಳ ಸಾನಿಧ್ಯದಲ್ಲಿ ಎರಡು ದಿನಗಳ ಕಾರ್ಯಕ್ರಮ ಶುರುವಾಯಿತು. ಮೊದ ಮೊದಲು ಸರಿಯಾಗಿ ಸ್ಪೀಕರ್‌ಗಳಲ್ಲಿ ಕೇಳದ್ದಕ್ಕೋ, ತನಗಾದ ಆಯಾಸ ಮೈಯಲ್ಲಾವರಿಸದ್ದಕ್ಕೋ ಏನೋ, ಶಿವಗುರುಗಳು ಮಾತುಗಳಿಷ್ಟವಾದರೂ ಜೊಂಪು ಹತ್ತ ತೊಡಗಿತು. ಆದರೆ ನಂತರ, ಬೇರೆ ಬೇರೆ ರೀತಿಯ ಕಸರತ್ತುಗಳು, ಮೋಜಿನ ಆಟಗಳು, ಶಿವಗುರುಗಳ ವಿನೋದದ ಆಖ್ಯಾಯಿಕೆಗಳು ಎಲ್ಲ ಒಟ್ಟಿನಲ್ಲಿ ಆ ಕಾರ್ಯಕ್ರಮದ ಬಗೆಗಿನ ಬೇಸರವನ್ನು ಹೋಗಿಸಿದ್ದವು. ವಿರಾಮದ ಸಮಯಗಳಲ್ಲಿ ಅಲ್ಲಿರುವ ಗುಂಪು ಹಾಡುವ ಹಾಡುಗಳು, ಮಂತ್ರಗಳ ಹಾಗೆ ಕೇಳಿಸುವ ಪಠನಗಳು, ಇಡೀ ವಾತಾವರಣವನ್ನು ಮೈ ನವಿರೇಳಿಸುವಂತೆ ಮಾಡಿದ್ದವು. ಮಧ್ಯಾಹ್ನ ರಾಜೀವ ತನ್ನ ಸ್ನೇಹಿತರೊಂದಿಗೆ ಅಲ್ಲಿರುವ ಕೊಂಡದಲ್ಲಿ ಮುಣುಗಿ ಎದ್ದು, ಶಿವನ ದೇವಸ್ಥಾನಕ್ಕೂ ಭೇಟಿಯಿತ್ತು ಬಂದ. ಅಲ್ಲಿಯೂ ಕೂಡ ರಾಜೀವನಿಗೆ ಹೇಳಲು ಅಸಾಧ್ಯವಾದ ಮೈ ಪುಳಕವಾಯಿತು. ದೇವರನ್ನು ನಂಬದ, ಈ ಜಗತ್ತಿನಲ್ಲಿ ತನಗೆ ಗೊತ್ತಿರುವ ಸಂಗತಿಗಳಿಗಿಂತ ಗೊತ್ತಿರದ ಸಂಗತಿಗಳೇ ಜಾಸ್ತಿ ಇವೆಯೆಂಬುದು ಅವನಿಗೆ ಮನದಟ್ಟಾಗಿದ್ದು ಆ ದೇವಸ್ಥಾನಕ್ಕೆ ಭೇಟಿ ಕೊಟ್ಟಮೇಲೆಯೇ. ಅರ್ಧ ದಿನ ಕಳೆದ ನಂತರ ಶಿವಗುರುಗಳು ಹೇಳಿದ ಪ್ರಕಾರ ನಾಲ್ಕು ತಾಸುಗಳವರೆಗೆ ಯಾರ ಜೊತೆಯೂ ಮಾತನಾಡದೆ ಮೌನವಾಗಿ ಕಳೆದ. ಇಷ್ಟು ಹೊತ್ತು ಅವನು ಮೌನವಾಗಿದ್ದು ಮಾತು ಬಂದ ಮೇಲೆ ಅಥವಾ ಮಲಗದಾಗ, ಮೊದಲ ಸಲ ಅನಿಸುತ್ತೆ. ಮಾತು ಬೆಳ್ಳಿ, ಮೌನ ಬಂಗಾರ ಎನ್ನುವದು ಬರೀ ಗಾದೆಮಾತಲ್ಲ, ಆ ಗಾದೆ ಮಾತಿಗಿಂತ ದೊಡ್ಡದು ಎಂಬುದು ಅವನಿಗೆ ಅರಿವಾಯಿತು. ಮನುಷ್ಯ ಮಾತನಾಡದೆ ಇದ್ದಾಗ ಬರು ಯೋಚನೆಗಳು ಮತ್ತು ಆ ಯೋಚನೆಗಳಿಗೆ ಹೊರಗೆಡಕದೆ ಹೋದಾಗ ಆಗುವ ಯಾತನೆಗಳು ಎಲ್ಲವೂ ತನ್ನ ಒಳಗಿನಿಂದ ಬಂದದ್ದೇ ಆದರೂ ಹೊಸವೆನಿಸಿದವು. ಮನುಷ್ಯ ತನ್ನನ್ನು ತಾನೇ ಅರಿತುಕೊಳ್ಳ ಬಯಸಿದರೆ ಮೊಟ್ಟ ಮೊದಲ ಕೆಲಸ ಮಾಡಬೇಕಾಗಿರುವದು - ಮೌನದಿಂದ ಇರುವದು ಎಂದು ಮನದಲ್ಲೇ ಅಂದುಕೊಂಡ. ಹೆಂಡತಿ, ಮಕ್ಕಳು, ಕೆಲಸ, ಗ್ರಾಹಕರು, ಸ್ನೇಹಿತರು ಇತ್ಯಾದಿ ಇತ್ಯಾದಿಯಾಗಿ ದೂರಲಿಕ್ಕೆ ನೂರಾ ಎಂಟು ನೆಪ ಹುಡುಕುವಾತನಿಗೆ ಅಂದು ಯಾರಾದರು ಮುಂದೆ ಬರಬಾರದೆ ಒಂಚೂರಾದರೂ ಮಾತನಾಡಲಿಕ್ಕೆ? ಎಂದೆನಿಸಿತು. ಆದರೆ ಬರುತ್ತಾ ಬರುತ್ತಾ ಆ ಮೌನದಲ್ಲಿನ ನೀರವತೆಯೇ ಆಪ್ತವಾಗತೊಡಗಿತು. ಜಗತ್ತಿನ ಬಗ್ಗೆ ವೈರಾಗ್ಯ ಬರತೊಡಗಿತು. ಮನುಷ್ಯರ ಹೊರತಾಗಿ ಎಷ್ಟೆಲ್ಲ ಜೀವಜಂತುಗಳು ಮಾತನಾಡಿಯೇ ಬದುಕುವದು? ಎಷ್ಟು ಚೆನ್ನಾಗಿ ಅವು ತಮ್ಮ ದಿನ ನಿತ್ಯದ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಹೋಗುತ್ತವೆ? ಹೌದು, ಮಾತು - ಮನಸ್ಸು ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಬೇರೆಯಾಗಿಸುವವೇನೋ ನಿಜ, ಆದರೆ ಅವೇ ಅವನ ದುಃಖಕ್ಕೂ ಮೂಲವಾಗುವವಲ್ಲವೆ? ಮಾರ್ಕೆಟಿಂಗ್ನಲ್ಲಿದ್ದ ತನ್ನ ವಾಕ್ಷಮತೆಗೆ ಬೀಗುತ್ತಿದ್ದ ರಾಜೀವನಿಗೆ ಮಾತೆಂದರೇ ವಾಕರಿಕೆ ಬರುವಂತಾಯಿತು. ಪುನಃ ಆ ದಿನದ ಬಾಕಿ ಕಾರ್ಯಕ್ರಮ ಶುರುವಾಗತೊಡಗಿದ ನಂತರ ಅವನ ತಲೆ ವಿಚಾರಗಳಿಂದ ಪೂರ್ತಿ ತುಂಬಿ ಹೋಗಿ ಒಂದು ಸಲ ಪೂರ್ತಿಯಾಗಿ ವಿಚಾರರಹಿತವಾಗಿಯೂ ಹೋಯಿತು. ಶಿವಗುರುಗಳು ಹೇಳಿಕೊಟ್ಟ ಯೋಗ, ಧ್ಯಾನವನ್ನು ಮಾಡಿದ ನಂತರವಂತೂ, ಶಿವಗುರುಗಳ ಕೊಂಚ ಧ್ವನಿ ಕೇಳುವದೇ ತಡ, ಹುಚ್ಚು ಹಿಡಿದಂತೆ ಭಾವಾವೇಶದಿಂದ ಚೀರಾಡುವ ಇತರ ಶಿಷ್ಯವೃಂದವನ್ನು ನೋಡಿ ರಾಜೀವನಿಗೆ ಅಮಲಿನ ಹುಚ್ಚು ಹಿಡಿಯುವದೊಂದೇ ಬಾಕಿ. ಆ ರಾತ್ರಿ ವಿಪರೀತ ದಣಿವು ಆಗಿದ್ದರೂ ಬಹಳ ಹೊತ್ತಿನವರೆಗೆ ರಾಜೀವನಿಗೆ ನಿದ್ರೆ ಬರಲಿಲ್ಲ. ಮರುದಿನ ಬೆಳಿಗ್ಗೆ ಬೇಗ ಎದ್ದು ತಣ್ಣೀರ ಸ್ನಾನ ಮಾಡಿ ಮುಂದಿನ ದೊಡ್ಡ ಮೈದಾನದಲ್ಲಿ ನೆರೆಯಬೇಕೆಂದು ಪ್ರಕಟಣೆ ಆಗಲೇ ಆಗಿತ್ತು. ಚಳಿಯಲ್ಲಿ ತಣ್ಣೀರ ಸ್ನಾನವಿರಲಿ, ಎದ್ದೇಳುವದೂ ಇಲ್ಲ, ಯಾರು ಬಂದು ಎಬ್ಬಿಸುತ್ತಾರೋ ನೋಡೋಣ ಎಂದು ಬಲವಂತವಾಗಿ ಕಣ್ಣು ಮುಚ್ಚಿ ಮಲಗಿದ. ಹೊತ್ತು ಆಗಲೇ ಮಧ್ಯರಾತ್ರಿ. 

ಮರುದಿನ ಬೆಳಿಗ್ಗೆ, ಸುಮಾರು ನಾಲ್ಕಾಗಿರಬಹುದು, ಜನರ ಕಲರವದಿಂದ ಯಾಂತ್ರಿಕವಾಗಿ ಎಚ್ಚೆತ್ತುಕೊಂಡು ಸ್ನಾನ ಮಾಡುವದಿಲ್ಲ ಎಂದು ಸ್ವಗತ ಘೋಷಿಸಿಕೊಂಡಿದ್ದನ್ನು ಮರೆತು ಪೂರ್ತಿ ಹುಮ್ಮಸ್ಸಿನಿಂದ ತಣ್ಣೀರ ಸ್ನಾನ ಮುಗಿಸಿ, ಅಲ್ಲಿಯ ಶಿವಗುರುಗಳ ಕೆಲವು ನುರಿತ ಶಿಷ್ಯರು ಹೇಳಿ ಕೊಡುವ ಸೂರ‍್ಯ ನಮಸ್ಕಾರ ಇತ್ಯಾದಿ ಯೋಗಗಳನ್ನು ಪ್ರಾಮಾಣಿಕನಾಗಿ ಮುಗಿಸಿದ. ಒಂಬತ್ತರ ನಂತರ ಶಿವಗುರುಗಳ ಎರಡನೇ ದಿನದ ಕಾರ್ಯಕ್ರಮ ಶುರುವಾಯಿತು. ನಿನ್ನೆಗಿಂತಲೂ ಇವತ್ತಿನ ಹುಮ್ಮಸ್ಸು ಇಮ್ಮಡಿಯಾಗಿತ್ತು ಅಲ್ಲಿ ನೆರೆದ ಎಲ್ಲರಿಗೂ. ವಾತವರಣದಲ್ಲಿ ಒಂಥರಾ ಖುಷಿಯ ಅಲೆಯೇ ಎದ್ದಿತ್ತು. ಆ ಅಲೆಯಲ್ಲಿ ಕೊಚ್ಚಿ ಹೋಗುವದನ್ನೇ ಕಾಯುತ್ತಿರುವಂತೆ ರಾಜೀವ ಕಂಡುಬಂದ. 

"ಎಲ್ಲರೂ ಐದು ಐದು ನಿಮಿಷ ತೆಗೆದುಕೊಳ್ಳಿ, ಹಲವು ಸಣ್ಣ ಗುಂಪುಗಳನ್ನು ಮಾಡಿಕೊಂಡು ಆ ಐದು ನಿಮಿಷಗಳಲ್ಲಿ ನೀವು ತುಂಬಾ ಖುಷಿಯಾಗಿದ್ದಾಗ ಏನು ಮಾಡಬಯಸುತ್ತೀರೊ ಅದನ್ನು ಮಾಡಿ. ಆ ಐದು ನಿಮಿಷಗಳ ನಂತರ ನೀವು ಜೀವಿಸುವದೇ ಇಲ್ಲ, ಅವು ನಿಮ್ಮ ಕೊನೆಯ ಐದು ನಿಮಿಷಗಳು ಎನ್ನುವ ಥರ ಖುಷಿಯಾಗಿ ಏನಾದರೂ ಗುಣುಗುಣಿಸಿ, ಕುಣಿಯಿರಿ ಅಥವಾ ಕುಪ್ಪಳಿಸಿರಿ" ಎಂದರು ಶಿವಗುರು. ರಾಜೀವ ತಾನು ಶುರು ಹಚ್ಚುವ ಮುನ್ನ ಇತರರನ್ನು ಗಮನಿಸಿದ. ಕೆಲವರು ಖುಷಿಯಲ್ಲಿರಲಿಕ್ಕೂ ಸಂಕೋಚಪಟ್ಟುಕೊಳ್ಳುತ್ತಿದ್ದರು. ಇನ್ನು ಕೆಲವರು ಖುಷಿ ಎಂದರೇನೆ ಗೊತ್ತಿಲ್ಲರದವರಂತೆ ಮುಖ ಕಿವಿಚಿ ಕಾಟಾಚಾರಕ್ಕೆ ಎನ್ನುವರ ಹಾಗೆ ಏನೋ ಒಚಿದು ಗುಣುಗುಣಿಸುತ್ತಿದ್ದರು. ಆವಾಗವನಿಗೆ ಅನ್ನಿಸಿತು, ಜೀವನದಲ್ಲಿ ನಾವೆಲ್ಲ ಇತರರ ಖುಷಿಗಾಗಿಯೋ ಇಲ್ಲಾ ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳುವದೇ ಇಲ್ಲ ಎನ್ನುವ ಸೆಲ್ಫ್ ಪಿಟಿ ಯಿಂದಲೋ ಅಥವಾ ಗಂಭೀರವಾಗಿರುವದೇ ಪ್ರಬುಧ್ಧತೆಯ ಲಕ್ಷಣವೋ ಎನ್ನುವಂತೆ ಯಾವಾಗಲೂ ಭೂಮಿಯ ಭಾರ ತಲೆಮೇಲೆಯೇ ಹೊತ್ತುಕೊಂದು ತಿರುಗುತ್ತಿರುತ್ತೇವೆ. ಯಾವಾಗಲಾದರೂ ನಮ್ಮ ಒಳಗಿನ ಮಗು ಹೊರಗೆ ಬರಲೆತ್ನಿಸಿ ಅಪ್ರಯತ್ನವಾಗಿ ನಗು ಬಂತೋ ಅಥವಾ ಹಾಗೇ ಏನೋ ಒಂದಕ್ಕೆ ಇಷ್ಟಪಟ್ಟು ನಕ್ಕೆವೋ ಎಂದುಕೊಳ್ಳಿ, ಆ ಸುಖ ಬಾಳಿಕೆ ಬರುವುದರೊಳಗಾಗಿ ಬಲವಂತದ ಪ್ರಜ್ಞೆ ತರಿಸಿಕೊಂಡು ನಮ್ಮಲ್ಲಿ ಪುನಃ ಗಂಭೀರವಾಗುವವರೇ ಜಾಸ್ತಿ. ರಾಜೀವನು ಇದೆಲ್ಲಾ ಅರಿತುಕೊಂಡು ಮತ್ತು ನಿಜವಾಗಿಯೂ ಜಗತ್ತನ್ನೇ ಪಕ್ಕಕ್ಕಿಡಬಯಸಿ ಕಣ್ಣುಮುಚ್ಚಿ ತನ್ನ ಅಚ್ಚುಮೆಚ್ಚಿನ ಹಾಡೊಂದನ್ನು ವ್ಹಿಸಲ್ ಮಾಡತೊಡಗಿದ. ಉಳಿದವರು ತಾವು ಮಾಡುತ್ತಿದ್ದುದನ್ನು ನಿಲ್ಲಿಸಿ ಇವನತ್ತ ಅವಕ್ಕಾಗಿ ನೋಡಿ ಅವನು ಸಿಳ್ಳೆ ಹಾಕುವದನ್ನು ಕೇಳತೊಡಗಿದರು. ರಾಜೀವ ನಿಜಕ್ಕೂ ಮೆಚ್ಚುವಂತಹ ರೀತಿ ಸೀಟಿ ಹೊಡೆಯುತ್ತಿದ್ದ. ಅವತ್ತಿನ ದಿನವಂತೂ ಅವನ ಭಾವನೆಗೆ ಮೇರೆ ಇಲ್ಲದಂತಾಗಿ ಅವನ್ನು ನೋಡಿ ನಿಜವಾದ ಆನಂದವೆಂದರೆ ಇದೇಯೇನೋ ಎನಿಸುತ್ತಿತ್ತು. ಅದನ್ನು ಸ್ವತಃ ರಾಜೀವನೂ ಗಮನಿಸಿದ. 

ಅನಂತರ ಕೆಲವು ಸಂವಾದಗಳಾದ ಮೇಲೆ, ಕೊನೆಯದಾಗಿ ಸಂಗೀತವನ್ನು ಹಾಕಿ ಶಿವಗುರುಗಳೂ ಸೇರಿದಂತೆ ಎಲ್ಲರೂ ಆನಂದದಲ್ಲಿ ಕುಣಿಯತೊಡಗಿದರು. ಶಿವಗುರುಗಳು ಜಗತ್ತನ್ನು ಮರೆತು ನಿಮ್ಮೊಳಗೇ ನೀವಾಗಿ ನೃತ್ಯದಲ್ಲಿ ತಲ್ಲೀನರಾಗಿ ಎಂದು ಹೇಳಿದ್ದರಿಂದ ಬರೀ ಸಂಗೀತದ ಕಡೆಗೇ ಗಮನ ಹರಿಸಿ ಅದರ ಜೊತೆಗೆ ತನ್ನಿಂತಾನೇ ಓಲಾಡುವ ತನ್ನ ದೇಹವನ್ನೂ ಗಮನಿಸುತ್ತಾ ನಿಧಾನವಾಗಿ ಕುಣಿಯತೊಡಗಿದ. ಬರಬರುತ್ತಾ ಅವನಿಗೆ ಸುತ್ತಲಿನ ಪರಿವೆಯೂ ಇಲ್ಲದಂತಾಯಿತು. ಅಷ್ಟು ದೊಡ್ಡ ಸಭಾಂಗಣದಲ್ಲಿ ತಾನೇ ಒಬ್ಬನೇ ಇರುವೆನೆಂದೆನಿಸಿತು. ಅದಾದನಂತರ ಅದೂ ಮರೆತುಹೋಗಿ ತಾನ್ಯಾರೋ. ತಾನೇಲ್ಲಿರುವೆನೋ ಎಂಬುದೇ ಗಮನಕ್ಕೆ ಬರಲಿಲ್ಲ. ಆದರೆ ಮನಸ್ಸು ಸುಪ್ತವಾಗಿ ಮತ್ತು ಪ್ರಜ್ಞಾಪೂರಕವಾಗಿ ಕೆಲಸ ಮಾಡುತ್ತಿತ್ತು. ಅಲ್ಲಿ ಕುಣಿಯುತ್ತಿರುವ ಎಲ್ಲ ಜನರ ಕೇಕೆ, ಸಂತಸದ ಆಕ್ರಂದನ ಎಲ್ಲಾ ಕೇಳುತ್ತಿತ್ತು. 

ಥಟ್ಟನೆ ತಾನು ಅಲ್ಲಿ ಬಂದ ಸಂದರ್ಭ ನೆನಪಾಯಿತು!! ತಾನೊಬ್ಬ ತಾರ್ಕಿಕ ವ್ಯಕ್ತಿ. ತನಗೆಲ್ಲ ಇಂಥ ಹಿಪ್ನಾಟಿಸಂ ಥರ ಇರುವದೆಲ್ಲ ಶೋಭೆ ತರುವದಿಲ್ಲ, ತಾನು ಶಿವಗುರುಗಳನ್ನು ಮೊದಲು ನಂಬಿ ನಂತರ ಅವರ ಬಗ್ಗೆ ತನ್ನ ಗೆಳೆಯ ಮನೀಷ ಅವರ ವಿರುಧ್ಧವಾಗಿ ಹೇಳಿದ್ದನ್ನು ಖಾತ್ರಿ ಪಡಿಸಲು ಬಂದವನು. ಇದೇನು ಸಮ್ಮೋಹನಕ್ಕೆ ಒಳಗಾದವರ ರೀತಿ ಆಡುತ್ತಿದ್ದೇನೆ ಎಂದುಕೊಂಡ. ಎಲ್ಲರೂ ಕಣ್ಣು ಮುಚ್ಚಿ ಕುಣಿಯುತ್ತಿದ್ದರು. ರಾಜೀವ ಮೆಲ್ಲನೆ ಕಣ್ಣು ತೆಗದು ಇತರರನ್ನು ಮತ್ತೊಮ್ಮೆ ನೋಡಹತ್ತಿದ. ಎಷ್ಟೊಂದು ಸಂತೋಷದ ಅಲೆ ಇತ್ತು ಅಲ್ಲಿ! ಜೀವನದ ಬೇರೆ ಬೇರೆ ಕ್ಷೇತ್ರಗಳಿಂದ ಬಂದ, ಬೇರೆ ಬೇರೆ ಕೆಲಸ, ಹುದ್ದೆ ಗಳಲ್ಲಿದ್ದ ಜನರು, ವಯಸ್ಸಾದವರು, ಹೆಂಗಸರು, ಯುವಕ ಯುವತಿಯರು ಎಲ್ಲರೂ ತಮ್ಮ ತಮ್ಮ ಒತ್ತಡ, ದುಃಖ ಇತ್ಯಾದಿಗಳನ್ನು ಮರೆತು ಕುಣಿಯುತ್ತಿದ್ದರು. ಆ ಕುಣಿತದಲ್ಲಿ ನಲಿವಿತ್ತು, ಮರೆವಿತ್ತು, ಅರಿವು ಇತ್ತು, ಬರೀ ಜಗತ್ತು ಇರಲಿಲ್ಲ, ಅಂತರಿಕ್ಷವಿತ್ತು! ಇಷ್ಟೆಲ್ಲಾ ಜನರಗೆ ಷರತ್ತು ರಹಿತ ಪರಮಸುಖ ಕೊಟ್ಟಿರುವದರ ಹಿಂದೆ ಶಿವಗುರುಗಳ ಸ್ವಾರ್ಥ ಏನಾದರೂ ಇದ್ದೀತು? ತನ್ನಂಥ ಇಲ್ಲಾ ತನಗಿಂತಲೂ ಜಾಣ ಜಾಣೆಯರಿರುವ ಇಂಥ ದೊಡ್ಡ ಸಮಾವೇಷದಲ್ಲಿ ಒಬ್ಬರೋ ಇಬ್ಬರೋ ಮರಳು ಹೋದರೆ ಸರಿ, ಎಲ್ಲಕ್ಕೆಲ್ಲಾ (ತನ್ನನ್ನೂ ಸೇರಿ) ಹೋಗುವದು ಹೇಗೆ ಸಾಧ್ಯ? ಇದ್ದಕ್ಕಿದ್ದಂತೆ ಇವನ್ನೆಲ್ಲಾ ನೋಡಿ ಧೀರ್ಘ ಟ್ರಾನ್ಸ್ನಲ್ಲಿದ್ದ ರಾಜೀವನ ಕಣ್ಣಲ್ಲಿ ಬಳಬಳನೆ ಕಣ್ಣೀರು ಹರಿಯತೊಡಗಿದವು. ಅದೇನು ಆನಂದವೋ, ಉನ್ಮಾದವೋ, ದುಃಖವೋ ತಿಳಿಯದೆ ಹಾಗೆ ಸುಮಾರು ಹೊತ್ತು ಅಳುತ್ತಲೇ ಹೋದ. ಇವನ ಕಡೆ ಯಾರಿಗೂ ಗಮನವಿರಲಿಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಕುಣಿಯುತ್ತ ಹೋಗುತ್ತಿದ್ದರು. ಸಾಕಷ್ಟು ಹೊತ್ತು ಆದಮೇಲೆ ಸಂಗೀತ ಶಾಂತವಾಯಿತು. ಎಲ್ಲರೂ ಸುಸ್ತಾಗದ್ದರೂ ಮುಖದಮೇಲೆ ಕಳೆ ಇತ್ತು. ಏನೋ ಸತ್ಯದ ಅರಿವು ಆದ ಸಂತೋಷವಿತ್ತು. ರಾಜೀವನ ಮುಖದಲ್ಲೂ ಸಹ. ಇಷ್ಟು ದಿನ ಅವನು ಅತ್ತಿದ್ದು ಬರೀ ನೋವಾದಾಗ ಮಾತ್ರ, ತನ್ನ ಸ್ವಾರ್ಥದ ಕಾಲು ಮುರಿದಾಗ ಮಾತ್ರ. ಆದರೆ ಇವತ್ತು ಹಾಗಾಗಿರಲಿಲ್ಲ. ಅವನು ಅತ್ತಿದ್ದು ಯಾಕೆ ಎಂದು ಅವನಿಗೆ ಮಾತ್ರ ಗೊತ್ತಾಗಿತ್ತು.

ಕಾರ್ಯಕ್ರಮದ ಕೊನೆಯ ಅಂಗವಾಗಿ ಪ್ರಶ್ನೋತ್ತರ ಸೆಷನ್ನು ಇತ್ತು. ಕೆಲವು ಜನ ಹಲವಾರು ಪ್ರಶ್ನೆ ಶಿವಗುರುಗಳಿಗೆ ಕೇಳಿ ಅವರು ಮನದಟ್ಟಾಗುವಚಿತೆ ಸುಧೀರ್ಘವಾಗಿ ಉತ್ತರಿಸಿದ ಬಳಿಕ ಇವನೂ ಕೈ ಎತ್ತಿದ. ಮೈಕು ಬಂತು. ರಾಜೀವ ಪ್ರಶ್ನೆ ಕೇಳುವದನ್ನೇ ಮರೆತು ಶಿವಗುರುಗಳನ್ನೇ ದಿಟ್ಟಿಸಿ ನೋಡುತ್ತಾ ನಿಂತ. ಅತೀತ ಏನನ್ನೋ ಕೇಳ ಬಯಸಿತ್ತು, ಭವಿಷ್ಯದ ಬಇಸಿಲಗುದುರೆಯೇರಿ ವರ್ತಮಾನ ಮುಗುರಿ ಬಿದ್ದಿತ್ತು. ಮನಸ್ಸು, ಬುಧ್ಧಿಗಳ ನಡುವಿನ ಅನ್ಯೋನ್ಯತೆ ತಪ್ಪಿ ಹೋದಂತಿತ್ತು. ಧೈರ‍್ಯ ಮಾಡಿ ಕ್ಷೀಣ ಧ್ವನಿಯಲ್ಲಿ ಕೇಳಿದ. ಸತ್ಯವೆಂದರೇನು? ಗುರುಗಳು ಮೌನವಾದರು. ಎಲ್ಲೆಲ್ಲೂ ಮೌನ. ತಾವಿರುವದರ ಬಗ್ಗೆಯೇ ಸಂಶಯವಾಗುವಂತಹ ಭೀಷಣವಾದ ಮೌನ. 

ಎಲ್ಲರೂ ಯಾವಾಗ ಎದು ಹೋದರೋ ರಾಜೀವನಿಗೆ ಗೊತ್ತಾಗಲಿಲ್ಲ. ತಾನೊಬ್ಬನೇ ಬಹಳ ಹೊತ್ತು ಅಲ್ಲಿಯೇ ಕುಳಿತಿದ್ದ.

----------------------------------------------------------------------------------------------------------



Monday, 27 January 2014

Business

"What is in it for me?" Is pretty much everyone asks. What you get can either be transactional or transformational, depending on your clarity of getting it.
-VV

Privilege

The one who can not give love, embrace, smile to oneself, can not expect these things from others.

- VV

Adhesive

Love is the natural adhesive to 'stick' to some one. There are many synthetic available in the market, such as, compulsion, responsibility and obligation.

-VV

Pain

Last step to know what we don't know is to know we don't know.

First one is being humble.

-VV

ಅಪ್ಪ ತಂದ ಕನ್ನಡಿ


ನನಗೆ ಸರಿಯಾಗಿ ನೆನಪಿಲ್ಲ
ತಿಳಿಯಲೂ ಇಲ್ಲ
ಕೂಸಾಗಿದ್ದೆ, ಬರೀ ಅಳುವೇ ನನ್ನ ಭಾಷೆ
ಕಣ್ಣು ಮಂಜು ಮಂಜು
ಅದಾಗ ಮೊದಲ ಬಾರಿ
ಅಪ್ಪ ಹಿಡಿದ ಕನ್ನಡಿ ನೋಡಿದ್ದೆ

ಹುಡುಗನಾದಾಗಲೂ ಅಷ್ಟೇ
ಕನ್ನಡಿ ನೋಡುವದು
ಕ್ರಾಪ್ ತಿದ್ದಿಕೊಳ್ಳಲಿಕ್ಕೆ ಮಾತ್ರ
ನನ್ನ ಕಣ್ಣಿನ ಬಣ್ಣವನ್ನೂ
ನೋಡಲಿಲ್ಲ ನಾನು
ಅಪ್ಪ ಕನ್ನಡಿ ಹಿಡಿದು ಓಡುತ್ತಿದ್ದ

ಬರಬರುತ್ತಾ ನಾನು ಬೆಳೆದ್ಹಾಗೆ
ಕನ್ನಡಿಯೂ ದೊಡ್ಡದಾಗುತ್ತಾ ಹೋಯಿತು
ಆದರೆ ಕಾಣುತ್ತಿದ್ದುದು ಮುಖ ಮಾತ್ರ

ಯೌವ್ವನ ದಲ್ಲಿ ಕೆಲವರು
ಪಕ್ಕಕ್ಕೆ ಬಂದು ನಿಂತರು
ಪರಿಚಯವೂ ಕೂಡ
ಪರಸ್ಪರ ಕನ್ನಡಿಯಲ್ಲಿ ಮುಖ
ನೋಡಿಕೊಳ್ಳುವದರಲ್ಲೇ.

ಆಗದವರು ಮಾತ್ರ
ಇದಿರು ನಿಂತವರು
ಅವರ ಬೆನ್ನು ಮಾತ್ರ ನನಗೆ ಕಂಡಿತ್ತು
ಅವರಿಗೆ ಕನ್ನಡಿಯಲ್ಲಿನ ನನ್ನ ಮುಖ
ಕಾಣಲೇ ಇಲ್ಲವೇನೋ

ಅಪ್ಪ ಹಿಂದೆ ಉಳಿಯ ಹತ್ತಿದ
ಅವನು ಹಿಡಿದ ಕನ್ನಡಿಯೂ

ಎಲ್ಲಿ ಹೋದಲ್ಲೂ ಕನ್ನಡಿ
ಅದರ ಜೊತೆಗಿನ ಅಪ್ಪ
ಕೆಲವೊಮ್ಮೆ ಹಿಂದೆ
ಕೆಲವೊಮ್ಮೆ ನನ್ನ ಜೊತೆ
ಇನ್ನೂ ಕೆಲವೊಮ್ಮೆ
ನನಗಿಂತ ಮುಂದೆ, ತುಂಬಾ ಮುಂದೆ
ನನ್ನ ವಯಸ್ಸಿಗೆ ತಕ್ಕಂತೆ
ಅವನ ವೇಗ ವಿರುದ್ಧವಾಗಿತ್ತು

ಎಲ್ಲರಿಗೂ ಇರುವ ಹಾಗೆ
ಅಪ್ಪನ ಮೇಲೆ ಕೋಪ ನನಗೂ ಇತ್ತು
ಅವನು ಹಿಡಿದ ಕನ್ನಡಿಯ ಮೇಲೂ

ಓದಿ, ಓಡಿ ಕೆಲಸ ಮಾಡಿ
ಸುಸ್ತಾಯ್ತಿದ್ಧಂಗೆ
ಕನ್ನಡಿ ಅಪ್ಪ ಪ್ರತ್ಯಕ್ಷವಾಗುತ್ತಿದ್ದರು
ಅಪ್ಪನ ಕನ್ನಡಿಯೋ, ಕನ್ನಡಿಯ ಅಪ್ಪನೋ

ಅದೊಂದು ದಿನ ಸುಸ್ತಾಗಿರಲು
ಹೊತ್ತು ಹೋಗಲಿಕ್ಕೆಂದು
ಕನ್ನಡಿಯ ಮಾತನಾಡಿಸಿದೆ
ಹಾಗೆ ಮಾತನಾಡಿದ್ದು ಅದೇ ಮೊದಲು

ಅವನ ಧ್ವನಿಯೂ ನನ್ನ ಹಾಗೇ ಇತ್ತು
ಕಣ್ಣುಗಳ ಬಣ್ಣ ಕಡುಗಪ್ಪು
ಕೈ ಕಾಲುಗಳೆಲ್ಲ ನನ್ನವೇ
ಆದರೆ ಮುಖದ ಮೇಲೆ ಮಾತ್ರ
ಅಕಾಲಿಕ ಮುಪ್ಪು
ಅದೆಷ್ಟು ಜನರ ಬೆನ್ನು ನೋಡಿದ
ನನ್ನ ಬೆನ್ನೂ ಗೂನು
ಕಣ್ಣುಗಳಲ್ಲಿನ ಕ್ರೌರ್ಯ ಯಾರೂ ಅರ್ಥ ಮಾಡಿಕೊಳ್ಳದ
ನೋವಾಗಿ ಕಂಡಿತ್ತು
ಖುಷಿ ಕಂಡ ಮುಖದ ಮೇಲೆ
ಖುಷಿ ಉಗುಳಿ ಹೋದಂತಿತ್ತು

ಮುಖ ಒರೆಸಿಕೊಂಡೆ.
ಇದು ನೀನೆ ಎಂದ ಅಪ್ಪ
ಹೌದಲ್ಲ ಇದು ನಾನೇ
ನಿನಗ್ಹೇಗೆ ಗೊತ್ತಪ್ಪ ?

ನಾನು ಕನ್ನಡಿಯ ಹೊತ್ತಿದ್ದು ಮಾತ್ರ,
ನೋಡುತ್ತಿದ್ದುದು ನಿನ್ನನ್ನೇ ಎಂದನಪ್ಪ

ಇನ್ನಾದರು ಸುಧಾರಿಸಿಕೋ,
ಎಂದು ಒಂದು ಕಡೆ ಕುಳಿತುಬಿಟ್ಟ

ನಾನೂ ಕುಳಿತೆ, ಹಾಗೆಯೇ ಜೊಂಪು ಹೋದೆ.
----------------------------

'ಸಮಯ' ಅಂತ ಯಾರೋ ಕರೆದದ್ದು ಕೇಳಿತು
ಅಪ್ಪ ಕನ್ನಡಿ ಎತ್ತಿ ಹೊರಟು ಹೋದಂತಿತ್ತು

ಆ ಧ್ವನಿ ಬಂದಕಡೆ.

-VV


Baggage

For outward journey, you pack your stuff. For inward journey, you unpack your stuff. -VV

Smile

A genuine Smile is what you can see yourself from inside. -VV

Giving 100%

What is giving 100%? That one last push a woman gives without which the baby wouldn't come out. In that moment, the woman is neither alive nor dead. That is giving 100%. Your success depends on your intensity. -VV

Possibility

You don't even know what your efforts may produce when your goals become by product of your intensified efforts -VV

This is why

You know why 'nobody' understands you? Because nobody has time to understand you. - VV

ಬೆಳದಿಂಗಳ ರಾತ್ರಿ

ನಿನ್ನೆಯೂ ಎಂದಿನ ಹಾಗೆ ಬಾಲ್ಕನಿ ಯಲ್ಲಿ ಕಳೆದಿತ್ತು ರಾತ್ರಿ
ಬೆಳದಿಂಗಳ ಘಮದಲ್ಲಿ, ಬಾಗಿಲಲ್ಲಿ ನಿಂತ ನಿನ್ನ ಕಾಲ್ಗೆಜ್ಜೆ ಕೇಳಿಸಲೇ ಇಲ್ಲ.

ನನ್ನಾಸೆಗಳನ್ನು ನಿನ್ನಿಂದಾಚೆಯ ಚಂದ್ರನಿಗೆ ಕಳಿಸುತ್ತಿದ್ದೆ
ಅವು ಅವನ ಮೇಲೆ ಪುಟಿದು ಮರಳಿ ಬಂದವೇ?
ಯಾರ ಕೈಗೊ ಸಿಕ್ಕಿ ಅವರ ಧ್ವನಿ ಮಾರ್ದನಿಸುವದ ಕೇಳಿದೆ

ಕಾದ ಹಂಚಿಗೆ ನೀರು ಹುಯ್ಯುವ ನಿನ್ನ ನಗೆ
ಅದೊಂದು ದಿನ ಬಿಸಿಲ್ಗುದುರೆಯಾಗಿ ಕಂಡಿತ್ತು
ಸಹಾರಾದಲ್ಲಿ ಬಾಯಾರಿದವರಿಗೇನು ಕಡಿಮೆ?

ನನ್ನನ್ನಾಚೆ ದಬ್ಬಿದವಳು ನೀನಲ್ಲ, ನನ್ನ ಮೋಹದ ಬಲೆ
ಹುಚ್ಚು ಹುಡುಗಿ ನೀನೇಕೆ ಕ್ಷಮೆ ಕೇಳುತ್ತೀಯೆ?

ಕ್ಷಮಿಸು ಬಿಡು ನನ್ನ, ಕನಸು ತೋರಿದ್ದಕ್ಕೆ
ನನ್ನ ಕನವರಿಕೆಯೇ ಬೇರೆ, ತಡವಾಗಿ ಅರಿತುಕೊಂಡೆ

ಜೊತೆಯಾಗಿ ಬರಬೇಕಾದಲ್ಲಿ ಬಿಟ್ಟು ಬಾ,
ಎಲ್ಲವನ್ನೂ, ಎಲ್ಲರನ್ನೂ; ನನ್ನನ್ನೂ, ನಿನ್ನನ್ನೂ

ಹರಡಿಬಿಡೋಣ ನಿನ್ನೆಯ ಬೆಳದಿಂಗಳದಂತೆಯೇ
ಪ್ರೇಮಿಗಳ ನಿದ್ರೆ ಕೆಡಿಸಿ ಅವರನ್ನು ಎಚ್ಚರಿಸೋಣ
ಮತ್ತೆ ಮಲಗಲು, ಸುಪ್ತವಾಗಲ್ಲ, ಎಚ್ಚರದಿಂದ ಕಣ್ಮುಚ್ಚಲು.

- VV


Approach

Two ways to approach life are either to think everything is miracle or nothing is miracle. Two forms; one is to see everything as sacred. Other is to see everything as utter nonsense. Both are beautiful ways to live in their true sense. But the trap is what you like, you call as sacred and what you don't like, you call nonsense. ~ excerpts from Sadhguru's speech.

Sadhguru

ಬಹಳಷ್ಟು ಮನುಷ್ಯರಿಗೆ ಭ್ರಷ್ಟವಾಗಿಸಲು ಸಾಧ್ಯವಾಗದ ವಿಷಯಗಳೊಲ್ಲೊಂದಾದದು ಸಾವು. ಅವರು ಪ್ರಯತ್ನಿಸಿದರೂ ಸಾವನ್ನು ಅಶುಧ್ಧಗೊಳಿಸಲು ಸಾಧ್ಯವಿಲ್ಲ ಯಾಕೆಂದರೆ ತಮಗೆಷ್ಟೇ ಗೊತ್ತಿದೆಯೆಂದುಕೊಂಡರೂ ೯೯.೯೯೯% ಮನುಷ್ಯರು ಸಾವಿನ ಬಗ್ಗೆ ಅರಿಯಲಾರರು.

ಇದೇ ರೀತಿ ಅಶುಧ್ಧವಾಗಿರದ ಉತ್ಕೃಷ್ಟತೆ ಜೀವನದಲ್ಲಿ ಅಳವಡಿಸಿಕೊಳ್ಳುವದೇ ಒಂದು ಉದ್ದೇಶ. ಈ ಉದ್ದೇಶವನ್ನು ಸಾಧಿಸಲು ನಿದ್ರೆ ಒಂದು ಒಳ್ಳೆಯ ಸಂಗತಿ. ನಿದ್ರೆಯಲ್ಲಿ ನೀವು ಸಾವನ್ನು ಅನುಕರಿಸುತ್ತಿರುತ್ತೀರಿ. ಅಂಥ ನಿದ್ರೆಯನ್ನು ಕನಸು ಕಂಡು ಭ್ರಷ್ಟಗೊಳಿಸಲು ಹೋಗದಿರಿ.

'ಸುಮ್ಮನೆ ಇರು'ವದು ಎಂದರೆ ನಿಮ್ಮ ಭೌತಿಕ ಇರುವಿಕೆ ಅತೀತದ ದ್ವಾರ ಇದ್ದ ಹಾಗೆ. ಅತೀತವು ಈ ದ್ವಾರದ ಮೂಲಕ ತನ್ನ ಅಭಿವ್ಯಕ್ತಿಯನ್ನು ಪಡೆಯಲೂಬಹುದು. ಇಲ್ಲದಿದ್ದರೆ, ಒಬ್ಬ ವ್ಯಕ್ತಿಯಾಗಿ ನೀವೇ ನಿಮ್ಮ ಭೌತಿಕತೆ ಮತ್ತು ಅತೀತದ ಮಧ್ಯ ಅಡ್ಡಗೋಡೆಯಾಗಬಹುದು. ಅಂಥ ಸಂದರ್ಭದಲ್ಲಿ ಜೀವಿಸುವದು ಕಷ್ಟ, ನಿದ್ರಿಸುವದು ಕಷ್ಟ - ಎಲ್ಲವೂ ಕಷ್ಟ.

ಈ ವೇಳೆ, ನಿಮ್ಮ ಅರಿವು ಎಷ್ಟರಮಟ್ಟಿಗೆ ಇದೆಯೆಂದರೆ, ನಿಮ್ಮನ್ನು ಅಕಸ್ಮಾತ್ತಾಗಿ ಅಂತರಿಕ್ಷದಲ್ಲಿ ಬಿಟ್ಟರೆ, ಎಲ್ಲಿ ನೀವು ನೋಡಲು, ರುಚಿ ಸವಿಯಲು, ಕೇಳಿಸಿಕೊಳ್ಳಲು, ಸ್ಪರ್ಷಿಸಲು, ಆಘ್ರಾಣಿಸಲು ಅಸಮರ್ಥರಾದದ್ದಾದರೆ, ನೀವು ಅಸ್ತಿತ್ವದಲ್ಲಿದ್ದೀರೋ ಇಲ್ಲವೋ ನಿಮಗೆ ಗೊತ್ತಾಗುವದಿಲ್ಲ. ನಿಮ್ಮ ಇರುವಿಕೆ ಸಂದರ್ಭೋಚಿತ ಅಥವಾ ಪ್ರಸಂಗಕ್ಕೆ ಸಂಬಂಧವುಳ್ಳದ್ದು, ನೈಜ ಅಸ್ತಿತ್ವದ್ದಲ್ಲ. ಅದ್ದರಿಂದ, ನೀವು ನಿಮ್ಮ ಜೀವನದ ಉದ್ದೇಶ ಅಥವಾ ಇಂದ್ರಿಯ ಜನಿತ ಗ್ರಹಿಕೆಗಳ ಅನುಪಸ್ಥಿತಿಯಲ್ಲಿ ನೀವು ಜೀವಿಸಿರುವಿರೋ ಇಲ್ಲವೋ ಅರಿಯಲಾರಿರಿ. ನಿಮಗೆ ನೀವೇ ಕಲ್ಪಿಸಿಕೊಂಡ ಸನ್ನಿವೇಶಗಳಾದ - ನಿಮ್ಮ ನೌಕರಿ, ಸಂಪತ್ತು, ಮನೆ ಅಥವಾ ಸಂಬಂಧಗಳು, ಇವೆಲ್ಲಾ ಇರದೇಹೋದರೆ- ಒಮ್ಮೆಲೇ ನೀವು ಬದುಕಿರುವದಾದರೂ ಯಾಕೆ ಎಂದೆನಿಸಿಬಿಡುತ್ತದೆ. ನೀವು ಸಂದರ್ಭೋಚಿತ ಪ್ರಾಣಿ, ನೈಜ ಅಸ್ತಿತ್ವದ ಪ್ರಾಣಿಯಲ್ಲ. ಇಡೀ ಆಧ್ಯಾತ್ಮಿಕ ಪ್ರಕ್ರಿಯೆ ನಮ್ಮ ಅಸ್ತಿತ್ವದಲ್ಲಿ ಧೃಢವಾಗಿ ಕಾಲಿಡುವದರ ಬಗ್ಗೆ ಹೊರತು ನಮ್ಮ ಪೂರ್ವಾಪರ ಸಂದರ್ಭಗಳಲ್ಲಿ ಮೇಲಿಂದ ಮೇಲೆ ತೇಲುವದರ ಬಗ್ಗೆ ಅಲ್ಲ.

(ಈ ಕೆಳಗಿನ ಲೇಖನದ ಆಯ್ದುಕೊಂಡ ಭಾಗದ ಅನುವಾದ)


http://blog.ishafoundation.org/lifestyle/role-of-sleep-for-a-spiritual-seeker/

Sachin Tendulkar

Nov 16, 2013

Billions watch cricket, millions play, thousands got in teams, hundreds made it special, tens were extra ordinary but one man surpassed them all. Sachin Tendulkar. A life beyond life.


Self start

Some people do the things without thinking. But when you ask them to do the things, they start thinking. - VV

Happy Deepavali

Nov 2, 2014

Trees,plants, birds, animals everything in nature take things only to give back in largesse. Diya, takes in the oil only to give back light. Animate and inanimate things with or without help of humans only give back. Why would man be such a black hole of favours he receives? Tradition has given opportunities to mankind to give back, in the form of festivals. Deepavali is one such occasion. Happy Deepavali!!


Game

People who can not play the game of truth, play all other games. - VV

Love

Love is in listening to self; not in saying to others.

Love is in giving to others; not in taking for self.

Love is in experiencing; not in expressing.

Love is in letting go; not in holding on.

-VV