Friday, 10 June 2016

Moringa masala

Hi all,

This is the first time i'm cooking with Moringa (Drumstick) leaves. The very smell of moringa says that it is so healthy food. I feel great when i pluck the branches of moringa in my farm as if the plant is offering itself to me with whole heart.

One thing about moringa leaves is that they start detaching from the branch within 2-3 hours as they are drying. There are many recipes made of drumstick leaves powder and it is used as children supplement also.

Coming back to our recipe, well it's too simple.

Ingredients:

Moringa leaves - 150-200 gms.
Onion - 1 medium
Tomato - 1 medium
Red chillies - 2 nos.
Garlic - 1 bulb (please note that i have used Desi garlic which is more strong and excellent in taste)
Ginger - a small piece
pepper corns - 2-3
Ajwain (ajowan caraway) - 1 leaf.
Cocunt grated - a handful.
Tur dal - one cup, boiled.



First boil tur dal, mash it and keep aside.

Chop onion in small and keep aside.

Put grated coconut, cut tomatoes, garlic, ginger, ajwain leaf, red chilli, pepper corns in a mixer and grind them to paste by adding water.

Take a kadhai, put some oil (we use rice bran oil for cooking). Add mustard seeds, cumin seeds, curry leaves as usual.


Put chopped onion, sauté for 2 mins. Then add cut moringa leaves, stir for another 2 mins till the moringa leaves shrink completely and leave a nice aroma. Add turmeric powder and mix.

Add the paste and stir for another 2 mins.


Add mashed tur dal. Add a spoon of chilli powder, salt to taste and some home masala + kitchen king masala. Add some water and cook for 5 mins in slow flame.


I put 3-4 drops of virgin coconut oil. Definitely this was the magic ingredient that added to taste.

Your Moringa masala is ready. If you put more water, it can become sambar. If it's thick, can be eaten as side dish for chapathi/paratha.


Wednesday, 2 March 2016

Mogra Karela

Namaste.

Bitter gourd is my most favourite vegetable. I used to hate it as a child but I clearly remember, once in a Mumbai restaurant, just to take revenge on myself for some reason, i had ordered Karela masala. To my astonishment, I just loved the dish! Ever since I've become addicted to it. We cook karela at least 3 times a week.

I and my wife together have learnt many recipes of Karela. Today's is fresh one. Here it is..

For better results, use only naturally grown vegetables. (For me, thanks to Ground to Earth)

Ingredients:

Bitter gourd - 3 to 4
Grated Coconut - half portion. 
Ground nuts - half a fistful. 
Green chilli - 3
Coriander leaves.
Curry leaves.
Coconut oil - 3-4 spoons.

Recipe is pretty simple. 

Cut Bitter gourd in bigger sections, take out the centre portion and keep only the thick skin part. Grind it along with raw ground nuts to a very coarse powder. 

In a pan, put coconut oil. Add mustard seeds, cumin seeds, urad dal and curry leaves. Allow them to splutter in their respective time period.

Cut green chilli in frustum shape small sizes. Add green chilli in to the oil and saute a bit.

Now add ground karela in to it. Add asafoetida about 3 pinches. Stir well in high flame.

Add a little coriander and fenugreek powder. Add salt to taste, stir well.

Cook for about 3-5 mins. Squeeze lemon in to it. Add a pinch of sugar. Add coriander leaves.

Serve hot or cold, it tastes good anyway. :)

Bye the way I called it as Mogra Karela because the white grated coconut looked like jasmine flowers in the bush to me. 



Savji Gavar

Namaskar.

I had these beautiful looking, smaller than usual size, native variety of Cluster Beans, brought from our farm - Ground To Earth (https://www.facebook.com/Groundtoearth/)

I have always been a fan of jawari variety (what we call for native variety) of vegetables against hybrid variety. Reasons being, greater taste, free from pesticides and adulteration.

So here is what i tried, combining what i have learnt listening to various Savji food cooks at my native place and this humble vegetable.

Ingredients:

Cluster beans - 250 gms.
Grated Coconut - half portion.
Onion - 1 1/2
Garlic - 4-5 cloves.
Coriander leaves - a fistful.
Green chilli - 1

For dry masala:
Dry roast - rock flower(1), fennel seeds(1/2 spoon), bay leaf(1/2), cumin seeds (1/2 spoon) coriander seeds (1Spoon), clove(3), cardamom(2), cinnamon(1/2), pepper corns (7-8), dry red chilli (3) together in low flame, grind it to powder and keep aside.

Cut onions in big cubes, sauté in oil along with garlic for a minute till golden in colour, allow to cool. Grind to smooth paste.

Grind tomatoes + grated coconut together to make a fine paste.

Boil washed cluster beans, cut in to 2-3 smaller pieces, in water separately. I didn't use cooker as I feel it sucks away all the nutrients. Boiling outside will retain the crunchiness of the skin i believe. Keep aside.



In a pan, put oil, add mustard seeds, cumin seeds, curry leaves and green chilli cut in slightly bigger pieces. This is only for the aroma of the green chilli.

Now add onion paste and saute for a while. Then add tomato paste and saute even more.

Add dry fresh masala, half spoon of garam masala, half spoon of kashmiri red chilli powder, salt to taste and mix well.

Pour lots of water and allow it to boil. Reduce the flame and cook more. If the water evaporates, add more water again. The crux of Savji food's taste is in it's boiling.



After 7-10 mins, add pre boiled cluster beans and cook for another 5-6 minutes.

Add a pinch of sugar and red chilli powder on the top. This will give extra colour and spice to the dish.

Close the lid for few minutes to allow the aroma to settle in.

Serve hot.

I prepared it today and it was very tasty.







Sunday, 28 February 2016

Desi Coriander Pesto

Hi,

I had lot of coriander leaves left at home. Didn't want to let it go dry and waste. So searched for some recipes of coriander leaves and Pesto recipe attracted my attention. But how would I continue without adding my own ingredients in this to make it a desi one? So here it is..

Ingredients:

Coriander leaves - a bunch.
Green Chilli - 3
Ginger - a small cube.
Sesame seeds - around half a spoon.
Garlic cloves - 3 to 4.
Mustard oil - 3 to 4 spoons.
Mint leaves - if you have.

Chop coriander leaves after washing and after removing the stems.

Add a little oil in a pan, heat it. Add sesame seeds and stir for half a minute.

Add green chillies, garlic, ginger and sauté for half a minute.

Quickly add coriander leaves and don't fry for much time. Just about 20-25 seconds and remove it from the flame.

Let it cool.

Now in a grinder, add all the above and add mustard oil. (you may add olive oil also) Add salt to taste.

Grind to thick or thin paste depending on your choice, by adding more oil.

Yummy desi pesto is ready!

(No pic available :(  )


Protein stuffed ridge gourd

Hello all,

This week we had lot of ridge gourd and beans at home. Didn't want to waste them and couldn't find a recipe on the net to cook them together. So here I am, made my own.

This is called by me as Protein stuffed ridge gourd. What is this is nothing but beans ground and filled in ridge gourd and cooked. Did I spill the beans so fast? Read on further...

Ingredients:

Beans : around 200 gms.
Ridge gourd: 1 or 2, enough to make cylindrical shape of 2-3 inches long.
Ground nuts - around 50 gms.
Red chilli - 3
Pepper corns - 7-8
Carrot - 2
Tomatoes - 2
Coriander leaves
Curry leaves

I have made this food without onion and garlic. So you may call it as Jain food. :)

Peel ridge gourd off it's edges on the skin, cut in to cylindrical shapes of 2-3 inches long. Remove the seeds inside and make it hollow. But don't remove too much as much of its nutrition value is in it's core.

In a grinder, grind these together:- Red chilli, Beans -washed and chopped coarsely,  pepper corn, ground nuts (we haven't roasted them here), coriander. little masala powder Let this be a paste, not too smooth, not too coarse.

Fill the above paste in to the ridge gourd cylinders.






Chop tomatoes finely.

Grind carrot and some more groundnuts together and make a powder. This gives great colour to the dish along with tomatoes and red chilli powder.



In a pressure cooker, pour 3-4 spoons of oil. Add mustard seeds, cumin seeds and curry leaves, as per the custom. Add chopped tomatoes and stir for a while. Add Carrot powder and stir.


Add a pinch each of coriander powder and fenugreek powder. Add a spoon of garam masala and a spoon of red chilli powder. Add Salt as per taste.



Now place the filled ridge gourd in to the pressure cooker. Close the lid and let it whistle two times.

Your protein stuffed ridge gourd is ready!



Thursday, 11 February 2016

Saag marswala

Red saag sabzi recipe:

For those who do not know what to do with red saag, here's a new recipe I have tried. In bonus, there's a red saag sharbat also comes free!!

Ingredients:
Green chilies-3-4
Red dry chillies-2
Ginger
Coriander
Pepper corns
Tamarind
Red saag
Fresh cream

Take out the leaves of saag, wash and dry them, chop them coarsely.

Soak tamarind in water.

In a vessel, boil water and boil red saag in the water for about 5 mins till it's tender and leaves an aroma.

Filter the red saag and don't throw the red water.

Grind boiled red saag, coriander leaves, ginger, paper corns together in a grinder.

(I haven't used onion and garlic here. If you want, you can grind raw onion and garlic separately, to be added in the tadka later on)

In a pan, take little oil, put mustard, cumin seeds, curry leaves and red chillies. If you want, you can put either chana daal a little or pre soaked toor dal (just a little). Add urad daal to tadka. Add asafoetida and turmeric, saute for a minute. Add a little coriander powder.

Add boiled red saag, a little, very little garam masala, salt to taste and mix. Cook for 2 mins and add tamarind water. Cook for another 2 mins, adding some water.

Finally add fresh cream a little.

Great smelling red saag sabzi is ready!

I call it Saag marswala. :P

By the way, the red water that you had kept aside, boil it again with dry 2-3 kokam fruits and adding sugar to it. Put some cardamom if you want. Boil for 3-4 mins and allow it to cool. Keep in the refrigerator for an hour or so. Healthy and yummy red saag sharbat is ready!

Aam ke aam, gutliyonke bhi daam!

Thanks for reading.


Tuesday, 27 October 2015

ಅಖ್ಲಾಕ್

(ಈ ಕಥೆಯ ಪಾತ್ರ, ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದರೆ ಚೆನ್ನ, ಎಂದು ಹಾರೈಸಿ..)
ಅಖ್ಲಾಕ್:
ಆತ್ಮಹತ್ಯೆಯ ಮೆಟ್ಟಿಲೇರಿ ಅದಾಗಲೇ ಬಂಡೆಪ್ಪ ಇಳಿದಾಗಿತ್ತು. ಎರಡು ಮಕ್ಕಳ ಪಾಪದ ಮುಖಗಳು ತನ್ನ ಕರ್ತವ್ಯವನ್ನು ಪದೇ ಪದೇ ನೆನಪಿಸಿಕೊಡುತ್ತಿದ್ದವು. ಕಳೆದ ವರ್ಷದ ಹಾಗೆ ಈ ವರ್ಷವೂ ಇರುವ ಒಂದೇ ಒಂದು ಎಕರೆಯ ಹೊಲ ಬರಡಾಗಿತ್ತು. ಇದ್ದ ಒಂದು ಹಸುವನ್ನು ಸಾಲ ತೀರಿಸಲು ಯಾವಾಗಲೋ ಮಾರಿಯಾಗಿತ್ತು. ಕೊಟ್ಟ ಸಾಲ ಕೇಳಲು ಊರ ಗೌಡ ಹಲವಾರು ಬಾರಿ ಧಮಕಿ ಕೊಟ್ಟಿದ್ದ. ಅವನೇನಾದರೂ ಅಸಲಿಗೇ ಕೊಲ್ಲಿಸಿದರೂ ಅವನ ಕೈಯಲ್ಲಿ ಸಾಯುವದಕ್ಕಿಂತ ತಾನೇ ತನ್ನ ಪ್ರಾಣ ತೆಗೆದುಕೊಳ್ಳುವದು ಒಳ್ಳೆಯದೆನಿಸಿತ್ತು.
ಆದರೆ ಅದೆಲ್ಲಿಂದಲೋ ಕೇಳಿದ್ದ, ಪಕ್ಕದ ಊರಿನ ಸಿರಿವಂತ ಹೆಂಗಸೊಬ್ಬಳು ತನ್ನ ಹುಟ್ಟುಹಬ್ಬಕ್ಕೆ ಗೋದಾನ ಮಾಡುತ್ತಿದ್ದಾಳೆಂದೂ, ತನ್ನ ಅದೃಷ್ಟವಿದ್ದರೆ ತನಗೂ ಒಂದು ಹಸು ಸಿಗಬಹುದೆಂದೂ. ಹೊಲಕ್ಕಾಗದಿದ್ದರೆ ತನ್ನ ಮಕ್ಕಳಿಗಾದರೂ ಹಾಲಿನ ಭಾಗ್ಯ ಸಿಗಬಹುದೆಂದು, ತನ್ನ ಅದೃಷ್ಟ ಪರಿಶೀಲಿಸಲು ಆ ಊರಿಗೆ ಬೆಳಿಗ್ಗೆಯೇ ಹೋಗಿದ್ದ.
ತನಗೇ ನಂಬಿಕೆಯಾಗದಂತೆ ಆ ಹೆಂಗಸು ಇವನನ್ನು ಆದರದಿಂದ ಮಾತನಾಡಿಸಿ ವಿಧಿವಿಧಾನದಿಂದ ಗೋಪೂಜೆ ಮಾಡಿ ಅದನ್ನು ದಾನವಾಗಿ ಇವನಿಗೆ ಕೊಟ್ಟಳು. ಇಷ್ಟು ದಿನಗಳಲ್ಲಿ ಅವನಿಗೆ ನಂಬಿಕೆಯ ಕಿರಣ ಕಂಡಿದ್ದು ಮೊದಲಬಾರಿಗೆ. ಹುಮ್ಮಸ್ಸಿನಿಂದ ಹಸುವನ್ನು ಇನ್ನು ತನ್ನ ಊರಿಗೆ ಸಾಗಿಸುವದು ಹೇಗೆಂದು ಬಂಡೆಪ್ಪ ವಿಚಾರಿಸಹತ್ತಿದ.
ಹೀಗೆಯೇ ವಿಚಾರಿಸಲು, ಅದ್ಯಾವದೋ ಒಂದು ಟ್ರಕ್ಕು ಇನ್ನಷ್ಟು ಸ್ವಲ್ಪ ಹಸುಗಳನ್ನು ಹೊತ್ತುಕೊಂಡು ತನ್ನ ಊರಿನ ಮೇಲೆಯೇ ಹಾಯ್ದು, ಮುಂದೆ ಹೋಗುತ್ತಿರುವದು ಗೊತ್ತಾಯಿತು. ಸರಿ, ಹಿಂದೆ ಮುಂದೆ ನೋಡದೆ ಡ್ರೈವರನ ಕೈಯಲ್ಲಿ ತನ್ನ ಕೊನೆಯ ಐನೂರರ ನೋಟನ್ನು ತುರುಕಿ, ಅವನ ಕೈಯನ್ನು ಕಣ್ಣಿಗೆ ಒತ್ತಿಕೊಂಡು ತನ್ನನ್ನೂ, ತನ್ನ ಹಸುವನ್ನೂ ಊರಿಗೆ ತಲುಪಿಸೆಂದು ಅಂಗಲಾಚಿದ. ಅದ್ಯಾಕೋ ಆ ಡ್ರೈವರನ ವಕ್ರ ನಗು ಇವನು ಗಮನಿಸಲೇ ಇಲ್ಲ.
ಊರು ಹತ್ತಿರವಿರಬಹುದು. ಆ ಸಣ್ಣ ಘಾಟ್ ಬಂದಾಗಲೇ ಬಂಡೆಪ್ಪನಿಗೆ ಎಚ್ಚರವಾಗಿತ್ತು. ಡ್ರೈವರ್ ತನ್ನ ಗುಂಗಿನಲ್ಲಿ ಗಾಡಿ ಓಡಿಸುತ್ತಿದ್ದು, ಮುಂದೆ ಒಮ್ಮೆಲೇ ಬಂದ ತಿರುವನ್ನು ನೋಡದೆ ಸರಕ್ಕನೆ ತಿರುಗಿಸಲು ನೋಡಿ ಪಕ್ಕದ ಮರಕ್ಕೆ ಗುದ್ದಿದ್ದ. ಹಿಂದೆ ನಿಂತ ಹಸುಗಳು ಕಿರಿಚಿಕೊಂಡವು. ಕ್ಯಾಬಿನ್ ನಲ್ಲಿ ಕುಳಿತ ಇವರೀರ್ವರಿಗೂ ಸ್ವಲ್ಪ ಗಾಯ ಆಯಿತು. ಹೇಗೋ ಸುಧಾರಿಸಿಕೊಂಡು ಹೊರಗಿಳಿದು ಹಿಂದೆ ಬಂದು ನೋಡಲಾಗಿ, ಇವನ ಹಸುವಿನ ಹಸುವಿನ ಕಾಲಿಗೆ ತುಂಬಾ ರಕ್ತ ಬಂದು ಸೋರಲಾರಂಭಿಸಿತ್ತು. ಇನ್ನೇನು ಊರು ಬಂದೇಬಿಟ್ಟಿದೆಯಲ್ಲ, ಮನೆಗೆ ಹೋಗಿ ಅದಕ್ಕೆ ಆರೈಕೆ ಮಾಡಿದರಾಯಿತು ಎಂದು ಡ್ರೈವರ್ ನಿಗೆ ಹೊರಡಲು ಅವಸರ ಮಾಡಿದ. 
ತುಸು ದೂರ ಬಂದಿರಬಹುದು, ಗಾಡಿಯ ಬೆಳಕಿನಲ್ಲಿ ಕೆಲವು ಜನರು ರಸ್ತೆಗೆ ಅಡ್ಡ ನಿಂತು ಗಾಡಿ ನಿಲ್ಲಿಸಲು ಕೈ ಮಾಡುತ್ತಿರುವದು ಕಾಣಿಸಿತು. ಇವರು ಗಾಡಿ ನಿಲ್ಲಿಸಿದಾಗ ಒಬ್ಬಿಬ್ಬರು ಹಿಂದೆ ಹೋಗಿ ಅದೇನೋ ಪರಿಶೀಲಿಸಿದರು. ಬಂಡೆಪ್ಪನಿಗೆ ಒಮ್ಮೆಲೇ ಕೆಲವು ಸಂಗತಿಗಳು ಮನಕ್ಕೆ ಅಪ್ಪಳಿಸಿದವು. ಇತ್ತೀಚಿಗೆ ಹಸುಗಳನ್ನು ಸಾಗಿಸುವದನ್ನು ಸಂಶಯದಿಂದ ನೋಡಲಾಗುತ್ತಿದೆಯೆಂದೂ, ಅದು ಕಸಾಯಿ ಖಾನೆಗೇ ಕರೆದೊಯ್ಯಲಾಗುವುದೆಂದು ಜನರು ಭಾವಿಸುವರೆಂದೂ ಮತ್ತು ಅದಾಗಲೇ ಆದ ಅಪಘಾತದಲ್ಲಿ ತನ್ನ ಹಸುವಿನ ಕಾಲಿಗೆ ನೋವಾಗಿ ರಕ್ತ ಸೋರಲಾರಂಭಿಸಿದ್ದು. ತಕ್ಷಣ ಏನೋ ಹೊಳೆದು ಗಡಗಡ ನಡುಗಲಾರಂಭಿಸಿದ. ತನ್ನನ್ನೂ ಕಸಾಯಿ ಎಂದು ಇವರು ಭಾವಿಸಿದರೆ? ಆ ಕಲ್ಪನೆಯೇ ಅವನ ಬೆನ್ನ ಹುರಿಯನ್ನು ಕಂಪಿಸುವಂತೆ ಮಾಡಿತು. ಅದೆಲ್ಲೋ ಉತ್ತರದಲ್ಲಿ ಆದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದ. ಅಷ್ಟೊತ್ತಿಗಾಗಲೇ ಅವರು ಅವನನ್ನು ಗಾಡಿಯಿಂದ ಹೊರಗೆಳೆದಿದ್ದರು. ಯಾವನೋ ನೀನು, ಎಲ್ಲಿಗೆ ಹೋಗ್ತಾ ಇದ್ದೀಯಾ ಸೂ ಮಗನೆ.... ಇತ್ಯಾದಿ ಬೈಗಳುಗಳು ಇವನ ಕಿವಿಯಲ್ಲಿ ಬಂದು ಅಪ್ಪಳಿಸಹತ್ತಿದವು. 
ತಾನು ಕಸಾಯಿಯಲ್ಲ ಎಂದು ಅವರಿಗೆ ಮನವರಿಕೆ ಮಾಡಲೆಂದು ಕನಸಲ್ಲಿ ಉಚ್ಚರಿಸುವಂತೆ ಗಾಯತ್ರಿ ಮಂತ್ರ ಪಠಿಸಿ ತೋರಿಸಹತ್ತಿದ. ಜೊತೆಗೆ ಎಲ್ಲ ದೇವರ ನಾಮವನ್ನೂ ಹುಚ್ಚು ಹಿಡಿದವರ ಹಾಗೆ ಕೂಗುತ್ತ ಕುಣಿಯತೊಡಗಿದ. ಅವನಿಗೆ ಆದ ಭಯಕ್ಕೆ ಅವನು ಇಷ್ಟೆಲ್ಲಾ ಮಾಡುತ್ತಿರುವದು ಒಂದು ಪವಾಡವೇ ಸರಿ. ಆದರೆ ಅವರಿಗೇಕೋ ಇವನು ಮಾಡುತ್ತಿರುವದು ಇಷ್ಟವಾದ ಹಾಗೆ ಕಾಣಲಿಲ್ಲ. ಆ ಡ್ರೈವರ್ರೂ ಅವರಲ್ಲಿ ಒಬ್ಬನಾಗಿ ಹೋದಂತಿದ್ದ. ಆವಾಗಲೇ ಅವನು ಆ ಡ್ರೈವರ್ ನನ್ನು ಸರಿಯಾಗಿ ಗಮನಿಸಿದ್ದು. ತಕ್ಷಣ ತಾನು ಗಾಯತ್ರಿ ಮಂತ್ರ, ದೇವರ ನಾಮ ಜಪಿಸಿದ ತಪ್ಪಿನ ಅರಿವಾಯಿತು. ಆ ಜನರೆಲ್ಲಾ ಸೇರಿ ಬಂಡೆಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸತೊಡಗಿದರು. ಆ ಹೊತ್ತಿನಲ್ಲಿ ಬುಲೆಟ್ ಶಬ್ದ ಹತ್ತಿರವಾದಂತೆ ಕೇಳಿಸಿತು. ತಕ್ಷಣ ಇವನನ್ನು ಹೊಡೆಯುತ್ತಿರುವವರೆಲ್ಲ ಪರಾರಿಯಾದರು. ಬಂಡೆಪ್ಪನಿಗೆ ಇದಾಗಲೇ ಸುಮಾರು ಏಟು ಬಿದ್ದಿದ್ದು, ಅವನ ಪ್ರಜ್ಞೆ ತಪ್ಪಲಾರಂಭಿಸಿತ್ತು. ಹತ್ತಿರ ಬಂದ ಬೂಟುಗಳ ಸಪ್ಪಳ ಕಿವಿ ಮೇಲೆ ಬೀಳುತ್ತಿತ್ತು ಅಷ್ಟೇ ಹೊರತು ಆ ಬೂಟುಗಳನ್ನು ಹಾಕಿ ಕೊಂಡವರ್ಯಾರು ಎಂದು ನೋಡಲು ಕಣ್ಣನ್ನು ತೆರೆದಿಡಲಾಗದೇ ಬಂಡೆಪ್ಪ ಅಲ್ಲಿಯೇ ಕುಸಿದ. 
******
ಪ್ರಜ್ಞೆ ಬಂದು ಕಣ್ಣು ತೆರೆದು ಸುತ್ತಲೂ ನೋಡಿದಾಗ ಆಸ್ಪತ್ರೆಯಂತಿತ್ತು. ತಾನು ಮಂಚದ ಮೇಲೆ ಮಲಗಿರುವದು, ತನ್ನ ಮೈತುಂಬ ಬ್ಯಾಂಡೇಜ್ ಹಾಕಿರುವದು ಗೊತ್ತಾಯಿತು. ಕಷ್ಟದಿಂದ ಪೂರ್ತಿ ಕಣ್ಣು ತೆರೆದು ಸುತ್ತಲೂ ನೋಡಿದ. ಪಕ್ಕದಲ್ಲಿ ಒಬ್ಬ ಇನ್ ಸ್ಪೆಕ್ಟರ್ ಕುಳಿತಿದ್ದ. ಇವನು ಕಣ್ತೆರೆಯುವದನ್ನು ನೋಡಿ, ಈಗ ಹೇಗಿದ್ದೀರಾ, ಮೈಗೆ ಹುಶಾರಾಗಿದೆಯೇ, ನಾನೇ ನಿಮ್ಮನ್ನು ಇಲ್ಲಿ ದಾಖಲಿಸಿದ್ದು, ನಿಮ್ಮ ಆರೈಕೆಯನ್ನು ಸರಕಾರ ನೋಡಿಕೊಳ್ಳುತ್ತೆ, ತಾವು ಯಾವುದೇ ರೀತಿಯ ಯೋಚನೆ ಮಾಡಬಾರದೆಂದು ಮುಗುಳ್ನಗುತ್ತಾ ಹೇಳಿದ. ತನಗೇಕೆ ಅವರು ಹೊಡೆದರು ಎಂದು ವಿಚಾರಿಸಿದಾಗ, "ನೋಡಿ ಇವರೇ, ಸಮಾಜದಲ್ಲಿ ಕೆಲವು ಸಮಾಜವಿರೋಧಿ ಜನರು ಯಾರನ್ನೋ ಬಲಿಪಶು ಮಾಡಿ ಅವರ ಬಲಿಯನ್ನು ತಮ್ಮ ಸ್ವಾರ್ಥಕ್ಕೋಸ್ಕರ ತೆಗೆದುಕೊಳ್ಳುತ್ತಾರೆ. ನಿಮ್ಮ ವಿಷಯದಲ್ಲೂ ಹಾಗೆ ಆಗುತ್ತಿತ್ತು, ನಾನು ಸಮಯಕ್ಕೆ ಸರಿಯಾಗಿ ಆ ಕಡೆಯಿಂದ ಹೋಗುತ್ತಿದ್ದೆ, ನನ್ನನ್ನು ನೋಡಿ ಅವರೆಲ್ಲ ಓಡಿಹೋದರು" ಎಂದ. ಬಂಡೆಪ್ಪನಿಗೇನೂ ಅರ್ಥವಾಗಲಿಲ್ಲ. 
"well-done myboy! ಒಳ್ಳೆಯ ಸಮಯಕ್ಕೆ ಹೋಗಿ ನೀನು ಈ ಬಡ ರೈತನ ಜೀವನ ಉಳಿಸಿದ್ದೀಯ, ಇಲ್ಲದಿದ್ದರೆ ಆ ಹಂತಕರು ಇವನನ್ನು ಮುಗಿಸಿ ಅವನ ಹಸುವಿನಜೊತೆಗೆ ಪರಾರಿಯಾಗುತ್ತಿದ್ದರೆನೋ. ನಂತರ ಕಸಾಯಿ ಖಾನೆಗೆ ಸಾಗಿಸುವ ವ್ಯಕ್ತಿಯ ಬರ್ಬರ ಹತ್ಯೆ ಎಂದು ಸುದ್ದಿಯಾಗುತ್ತಿತ್ತು. ಆ ಸುದ್ದಿಯನ್ನು ಎರಡೂ ಕೋಮಿನವರು ತಮ್ಮ ಮನಸ್ಸಿಗೆ ಬಂದಂತೆ ಬಳಸುತ್ತಿದ್ದರು" ಆ ಇನ್ ಸ್ಪೆಕ್ಟರಿನ ಮೇಲಿನ ಅಧಿಕಾರಿ ಇರಬಹುದು, ಅದೇ ತಾನೇ ತಾನಿದ್ದ ಮಂಚದ ಕಡೆಗೆ ಬಂದು ಇನ್ ಸ್ಪೆಕ್ಟರಿನ ಬೆನ್ನು ಚಪ್ಪರಿಸಿ "well-done ಅಖ್ಲಾಕ್ myboy, well-done !" ಎನ್ನುತ್ತಿದ್ದರು.



Wednesday, 23 September 2015

ವಿಕಲ್ಪ

ಮೈಯೆಲ್ಲಾ ಭಾರ. ಹಣೆಯ ಮೇಲೆ ಸಣ್ಣಗೆ ಬೆವರು. ಬರುಬರುತ್ತಾ ಇಡೀ ದೇಹ ಬೆವರಿನಿಂದ ಒದ್ದೆಯಾಗಿದೆ ಎನಿಸಿತು. ಹೆಜ್ಜೆ ಮುಂದಿಡಲೂ ಪ್ರಯಾಸ ಪಡುತ್ತಿದ್ದೆ. ಬಲಗೈ ತನ್ನಂತಾನೇ ನಡದ ಮೇಲೊಮ್ಮೆ, ಹೊಟ್ಟೆಯ ಮೇಲೊಮ್ಮೆ ಸವರಿಕೊಳ್ಳುತ್ತಿತ್ತು. ಯಾವಾಗಲೂ ಹಾಕಿಕೊಳ್ಳುವ ೪೦ ಇಂಚಿನ ಶರ್ಟ್, ೩೨ ಇಂಚಿನ ಪ್ಯಾಂಟ್ ಹಾಕಿಕೊಳ್ಳಲಾರದೆ ಯಾವದೋ ಬಾಬಾ ನ ನೈಟಿ ಥರ ಹಾಕಿಕೊಂಡಿದ್ದೆ. ನನ್ನ ಉಬ್ಬಿದ ಹೊಟ್ಟೆ ನೋಡಲು ನನಗೇ ನಾಚಿಕೆ. ಗಂಡಸರು ಗರ್ಭದಿಂದ ಆಗುತ್ತಾರೆ ಎಂದು ಮೊದಲು ಎಲ್ಲಿಯಾದರೂ ಕೇಳಿದ್ದೀರಾ?

ನಾನೂ ಕೇಳಿರಲಿಲ್ಲ. ಆದರೆ ಈಗ ನಾನೇ ಸ್ವತಃ ಆಗಿರುವೆ. ಆದದ್ದಕ್ಕೆ ಅನುಭವಿಸುತ್ತಿದ್ದೇನೆ. ನನ್ನವಳು "ನಿಧಾನ ರೀ, ಮೆಲ್ಲಗೆ ಮೆಟ್ಟಿಲು ಹತ್ತಿ, ಒಂದೊಂದೇ ಕಾಲು ಎತ್ತಿ ಇಡಿ, ತುಂಬಾ ಆಯಾಸ ಆಗುತ್ತಿದೆಯಾ?" ಎನ್ನುತ್ತಿದ್ದಳು. ಅವೆಲ್ಲಾ ಕಾಳಜಿಯ ಪ್ರಶ್ನೆಗಳ ಹೊರತಾಗಿಯೂ ಯಾಕೋ ಅವಳಲ್ಲಿ ಕುಹಕದ ನಗೆಯನ್ನೂ ಹುಡುಕಲು ಪ್ರಯತ್ನಿಸಿದೆ. ಬಹುಶಃ ನಗುತ್ತಿದ್ದಳೋ ಏನೋ. ನನಗೆ ಅವಳಿಗೆ ಒಪ್ಪಂದ ಆವಾಗಲೇ ಆಗಿತ್ತು. ಬಹಳ ವರ್ಷಗಳೇ ಕಳೆದಿದ್ದವು ಅನಿಸುತ್ತೆ. ಪ್ರೀತಿ ಶುರು ಮಾಡಿದಾಗಿನ ಮೊದಲ ದಿನಗಳು. ನನ್ನ ಸುಖ ನಿನಗೆ, ನಿನ್ನ ದುಃಖ ನನಗೆ ಎನ್ನುವಂತಹ ದಿನಗಳು. "ಅಯ್ಯೋ ಪಾಪ, ನೀವು ಹೆಣ್ಣುಗಳೆಷ್ಟು ತೊಂದರೆ ಅನುಭವಿಸಬೇಕು. ತಿಂಗಳಲ್ಲೊಮ್ಮೆ ನೋವಿನ ೩-೪ ದಿನಗಳಲ್ಲದೆ ಗರ್ಭಿಣಿಯರಾದರೆ ೯ ತಿಂಗಳುಗಳ ಕಷ್ಟ ಬೆರೆ. ಸಾಲದ್ದಕ್ಕೆ ಹೆರಿಗೆಯ ಮೂಲಕ ಪುನರ್ಜನ್ಮ. ನಿನ್ನೆಲ್ಲ ಕಷ್ಟಗಳನ್ನೂ ಆ ದೇವರು ನನಗೆ ಕೊಡುವಂತೆ ಆಗಿದ್ದರೆ? " ಅಂತೆಲ್ಲ ನಾನು ಅವಳಿಗೆ ಮುದ್ದು ಮಾಡುತ್ತಾ ಹೇಳುತ್ತಿದ್ದೆ. ಅವಳು impress ಆಗುವದಲ್ಲದೆ ಅವಳಿಗೆ ಅದಾಗಲೇ ನನ್ನ ಹೆಂಗರುಳಿನ ಪರಿಚಯವೂ ಆಗಿತ್ತು. "ಮುಂದಿನ ಜನ್ಮದಲ್ಲಿ ನೀನು ಗಂಡನಾಗು, ನಾನು ಹೆಂಡತಿಯಾಗುತ್ತೇನೆ" ಎಂದು ಸುಮ್ಮ ಸುಮ್ಮನೆ ಭಾಷೆ ತೆಗೆದುಕೊಂಡಿದ್ದು ಆಗ ಮಕ್ಕಳ ವರ್ತನೆ ಅನ್ನಿಸಲೇ ಇಲ್ಲ.

ಆ ದೇವರು ನನ್ನ ಮಾತುಗಳನ್ನೆಲ್ಲ ಈಗ ನಿಜ ಮಾಡಿದ್ದಾನೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗಿಬಿಡುತ್ತದೆ. ಇಷ್ಟು ತಿಂಗಳು ಹೊರಲಾರದೆ ಹೊಟ್ಟೆ ಹೊತ್ತು ಹೊತ್ತು ಸಾಕಾಗಿದೆ. ನಾನೂ ಅಂದುಕೊಂಡಿದ್ದೇನೆ, ನನಗೆ ಮಗು ಹೆತ್ತು ಕೊಡುವದಷ್ಟೇ ಕೆಲಸ. ಅದನ್ನು ಸಾಕುವದು ನೀನೆ ಎಲ್ಲ ಹೆಂಗಸರ ತರಹ ಮಾಡು. ಅದನ್ನೂ ನನಗೇ ಒಪ್ಪಿಸಬಿಡಬೇಡ, ಒಪ್ಪಂದ, ನಾನು ನಿನ್ನ ಕಷ್ಟ ಹೊರುವದು ಆಗಿತ್ತು. ಹೊತ್ತು ಹೆತ್ತು ಕೊಟ್ಟರೆ ನನ್ನ ಜವಾಬ್ದಾರಿ ಮುಗಿದಂತೆ. ಈ ಮಾತುಗಳನ್ನು ಹೆರಿಗೆ ಆಗುವದರೊಳಗಾಗಿ ಅವಳಿಗೆ ಹೇಳಿಬಿಡಬೇಕು ಎಂದುಕೊಂಡಿದ್ದೇನೆ.

ಅದ್ಯಾಕೋ ಹೊಟ್ಟೆಯಲ್ಲಿ ತುಂಬಾ ಪ್ರೆಷರ್ ಬಂದ ಹಾಗೆ ಆಯಿತು. ಇವಳಿಗೆ ಕಿಚಾಯಿಸುವ ರೀತಿಯಲ್ಲೇ ಕೇಳಿದೆ "ಅಲ್ವೇ, ಹೆಂಗಸರು ಹೆರುವಾಗ ನಂಬರ್ ಟೂ ಬಂದರೆ ಏನು ಕತೆಯೇ? ತಮಾಷೆಗಾಗಿದ್ದರೂ ನನ್ನ ಕುತೂಹಲ ಕೃತಕವಾಗಿರಲಿಲ್ಲ. ಅವಳು "ಥೂ ನಿಮ್ಮ, ಎಂಥ ಪ್ರಶ್ನೆ ಕೆಳ್ತೀರಾರೀ" ಎಂದುಗಿದಳು. ನನಗೂ ನಗು ಬಂತು. ಬರುತ್ತಾ ಬರುತ್ತಾ ಮುಗುಳ್ನಗು ದೊಡ್ಡ ನಗೆಯಾಗಹತ್ತಿತು. ನಗೆ ಜಾಸ್ತಿಯಾದಂತಲೇ ಹೊಟ್ಟೆಯಲ್ಲಿಯ ಒತ್ತಡವೂ ಜಾಸ್ತಿಯಾಗತೊಡಗಿತು. ಅಬ್ಬಾ ಇನ್ನು ಸಹಿಸಲಾರೆ ಎನ್ನುವಷ್ಟರಲ್ಲಿಯೇ ......

ಫ್ಲಷ್ ಮಾಡಿ ಬಾತ್ರೂಮಿಂದ ಹೊರಗೆ ಬಂದಾಗಲೇ ಟೈಮ್ ನೋಡಿದ್ದು. ರಾತ್ರಿಯ ೨.೩೬ ಆಗಿತ್ತು. ಇದೇಕೆ ಇಷ್ಟೊತ್ತಿಗೆ ಬಾಥ್ ರೂಮಿಗೆ ಹೋಗುವ ಪ್ರಮೇಯ ಬಂದಿತು ಅಂತ ಯೋಚಿಸಿದೆ. ಚೆನ್ನಾಗಿವೆ ಅಂತ ಸ್ವಲ್ಪ ಜಾಸ್ತಿಯೇ ತಿಂದ ಇಡ್ಲಿಗಳ ನೆನಪಾಯಿತು. ಮತ್ತೆ ಹೊದೆದುಕೊಂಡು ಮಲಗಿದೆ.

***********
ಮರುದಿನ ಪರೀಕ್ಷೆ ಇದೆ. ಅದೂ ಮಾಥ್ಸ್ ! ನನಗೋ ಆ ಕ್ಯಾಲ್ಕುಲಸ್, ಟ್ರಿಗೊನೋಮೆಟ್ರಿ, ಫಾರ್ಮುಲಾಗಳನ್ನು ಮಾಡೀ ಮಾಡೀ ಸಾಕಾಗಿಹೋಗಿತ್ತು. ಅಂದರೂ ಈ ಸಲ ತುಂಬಾ ಕಷ್ಟಪಟ್ಟು ಅಭ್ಯಾಸ ಮಾಡಿ ಒಂಚೂರು ಆತ್ಮ ವಿಶಾಸ ಮೂಡಿತ್ತು. ಪರೀಕ್ಷೆಗೆ ಸ್ವಲ್ಪ ಮೊದಲೇ ಹೋಗಿ ಇನ್ನೊದು ಸ್ವಲ್ಪ ಅಲ್ಲಿಯೇ ಕುಳಿತು ಓದಿದರಾಯಿತು ಎಂದುಕೊಂಡೆ. ಬೇಗನೆ ಸ್ನಾನ, ಟಿಫಿನ್ ಮುಗಿಸಿ ಬಟ್ಟೆ ಹಾಕಿಕೊಂಡು ಕಾಲೇಜಿನತ್ತ ಹೊರಟೆ. ದಿನವೂ ನಡೆದುಕೊಂಡೇ ಹೋಗಿ ರೂಢಿ. ಪ್ರತಿ ಸಲದಂತೆ ಸುತ್ತು ಹಾಕಿ ಒಳ್ಳೆಯ ರೋಡಿರುವ ಕಡೆಯ ದಾರಿ ತೆಗೆದುಕೊಳ್ಳಲಾರದೇ ಇವತ್ತು ಬೇಗ ಹೋಗ ಬೇಕೆಂದು ಸಮೀಪದ ಅಂಕುಡೊಂಕಾದ, ಗುಡ್ಡದ ದಾರಿ ಹಿಡಿದೆ. ಮಧ್ಯೆ ಕೆಲವುಮಾತ್ರ ಮನೆಗಳಿದ್ದವು. ಜನರು ತುಂಬಾ ಕಡಿಮೆ. ಇದೇನು ಇಷ್ಟು ಹೊತ್ತಿನಲ್ಲಿ ಜನರೇಕೆ ಕಾಣುತ್ತಿಲ್ಲ ಎಂದುಕೊಂಡೇ ದಾಪುಗಾಲು ಹಾಕುತ್ತಿದ್ದೆ. ಥಟ್ಟನೆ ಕಾಲಿಗೆ ಏನೋ ತಗುಲಿ ಉರುಳಿಹೋದಂತಾಯಿತು. ಕೆಳಗೆ ನೋಡಿದಾಗ ಮಿರಿ ಮಿರಿ ಮಿಂಚುವ ಗೋಲಿ!

ಒಂಥರಾ ಆಕರ್ಷಕವಾದ ನೀಲಿ, ಹಸಿರು ಬಣ್ಣದ, ಇಡೀ ಬ್ರಹ್ಮಾಂಡವನ್ನೇ ತನ್ನೊಳಗೆ ಅಡಕ ಮಾಡಿಕೊಂಡಷ್ಟು ಸುಂದರವಾದ ಗೋಲಿ ಗುಂಡ! ಅಯ್ಯೋ ಎಷ್ಟು ಸುಂದರವಾಗಿದೆ ಎಂದು ಅದನ್ನು ಕೈಗೆತ್ತಿಕೊಂಡೆ. ಕೈಯಲ್ಲಿ ತಿರುಗಿಸುತ್ತಾ ಅದನ್ನೇ ನೋಡುತ್ತಾ ಮುಂದೆ ನಡೆದು ನೋಡಿದರೆ ಅಲ್ಲಿ ಇನ್ನೊಂದು ಗೋಲಿ ಬಿದ್ದಿತ್ತು! ಅದು ಗೋಲಿಯೇ ಹೌದಲ್ಲವೋ ಎಂದು ನೋಡಲಿಕ್ಕೆ ಕಾಲಿನಿಂದ ಒದ್ದೆ. ಬಿಸಿಲಿಗೆ ಮಿಂಚುತ್ತಾ ಅದು ಉರುಳಿತು. ಚಿಕ್ಕಂದಿನಲ್ಲಿ ಗೋಲಿ ಆಟಕ್ಕಿಂತ ಆ ಬಣ್ಣ ಬಣ್ಣದ ಗೋಲಿಗಳು ಮೋಹಕವಾಗಿ ಉರುಳುವದನ್ನು ನೋಡುವದೇ ಕಣ್ಣಿಗೆ ಹಬ್ಬ. ಹಲವು ಸಲ ನನ್ನ ಹತ್ತಿರ ಇರುವದಕ್ಕಿಂತ ಬೇರೆಯವರ ಹತ್ತಿರ ಇರುವ ಗೋಲಿಗಳನ್ನು ನೊಡಿ ಅಸೂಯೆ ಪಟ್ಟಿದ್ದುಂಟು. ಬೇರೆಯವರ ಗೋಲಿಗಳು ನನ್ನವುಕ್ಕಿಂತ ಅದೇಕೆ ಸುಂದರ? ಅವಷ್ಟೂ ನನ್ನ ಕಡೆ ಬಂದರೆಷ್ಟು ಚೆನ್ನ! ಎಂತೆಲ್ಲಾ ಆಸೆಯಾಗುತ್ತಿತ್ತು. ಕಾಲಿನ ಬಳಿಯಿರುವ ಗೋಲಿಯನ್ನು ಎತ್ತಿಕೊಂಡೆ. ಯಾರೋ ಪಾಪ ಚಿಕ್ಕ ಮಕ್ಕಳು ಆಟವಾಡುತ್ತ ಮರೆತು ಹೋಗಿರಬೇಕು. ಮುಂದೆ ಹೆಜ್ಜೆ ಹಾಕಿದೆ.

ಅರೆರೆ! ಇನ್ನೊಂದು ಗೋಲಿ! ಅದರ ಪಕ್ಕದಲ್ಲಿನ್ನೊಂದು! ಅಲ್ಲಿ ಮೂರ್ನಾಲ್ಕು! ಒಂದೊಂದೇ ಗೋಲಿ ಎತ್ತಿಕೊಳ್ಳುತ್ತ ಹೋದೆ. ಕೈಗಳು ತುಂಬಿದಾಗ ಯಾರಿಗಾದರೂ ಚಿಕ್ಕ ಮಕ್ಕಳಿಗೆ ಕೊಟ್ಟರಾಯಿತು ಎಂದುಕೊಂಡು ಜೇಬಲ್ಲಿಟ್ಟುಕೊಳ್ಳುತ್ತಾ ಹೋದೆ. ಬರಬರುತ್ತಾ ಜೇಬುಗಳೂ ತುಂಬಹತ್ತಿದವು ಆದರೆ ಗೋಲಿಗಳು ಮುಗಿಯಲಿಲ್ಲ. ಒಂದಕ್ಕಿಂತ ಒಂದು ಸುಂದರ, ಚಿತ್ತಾಕರ್ಷಕ, ರಂಗು ರಂಗಿನ ಗೋಲಿಗಳು. ಇಂಥವನ್ನು ಇಲ್ಲಿಯೇ ಬಿಟ್ಟು ಹೋಗಲು ಮನಸ್ಸಾಗಲೇ ಇಲ್ಲ. ಜೇಬು ಪೂರ್ತಿ ತುಂಬಿದಾಗ ಅವುಗಳನ್ನೆಲ್ಲ ತೆಗೆದು ಕೈಯಲ್ಲಿದ್ದ ಚೀಲದಲ್ಲಿ ಹಾಕಿಕೊಳ್ಳೋಣವೆಂದು ಜೇಬಿನಿಂದ ತೆಗೆದೆ. ಕೆಳಗೆ ಇನ್ನೂ ಸುಮಾರು ಗೋಲಿಗಳು ಬಿದ್ದಿದ್ದವು. ಅವನ್ನೆಲ್ಲ ಬೇಗ ಆರಿಸಿಕೊಬೇಕು ಎನ್ನುತ್ತಾ ಬ್ಯಾಗಲ್ಲಿ ಹಾಕಲು ನೋಡಿದರೆ ಕೆಳಗೆ ಬಿದ್ದು ಎಲ್ಲ ಚೆಲ್ಲಾಪಿಲ್ಲಿ! ಬ್ಯಾಗಿನ ಜಿಪ್ ತೆರೆಯಲಾರದೇ ಅದರಲ್ಲಿ ಹಾಕಲು ಹೋಗಿದ್ದೆ, ಥೋ ಎಂಥವನು ನಾನು! ನನ್ನನ್ನು ನಾನೇ ಬೈದುಕೊಳ್ಳುತ್ತಾ, ಅಷ್ಟು ಗೋಲಿಗಳು ಸಿಕ್ಕಿದ ಅದೃಷ್ಟ ಮೆಚ್ಚಿಕೊಳ್ಳುತ್ತಾ ಮತ್ತೆ ಗೋಲಿಗಳನ್ನು ಹೆಕ್ಕತೊಡಗಿದೆ. ಒಂದು, ಎರಡು, ಮೂರು.. ಅದೋ ಅಲ್ಲೊಂದು... ಇನ್ನೊಂದು... ಗೋಲಿಗಳ ಹೆಕ್ಕುವಿಕೆಯಲ್ಲಿ ಪರೀಕ್ಷೆಯ ಟೈಮಾದದ್ದೇ ತೋಚಲಿಲ್ಲ........

********

ಅವಸರದಲ್ಲಿ ಬೆಟ್ಟ ಹತ್ತತೊಡಗಿದ್ದೆ. ಕಲ್ಲು ಮುಳ್ಳುಗಳಿಂದ ಕೂಡಿರುವ ಹಸಿರು ಬೆಟ್ಟ. ಅಲ್ಲಲ್ಲಿ ಪೊದೆಗಳು. ಅವುಗಳಲ್ಲಿ ನೀಲಿ, ಬಿಳಿಯ ಹೂವುಗಳು. ಆ ಹೂಗಳಲ್ಲಿ ಕೇಸರಿಯ ಕೇಸರಗಳು. ಮುಂಜಾವಿನ ಮಂಜು ಅದೇ ತಾನೆ ಕರಗಲಾರಂಭಿಸಿತ್ತು. ಪ್ರಕೃತಿಯು ಸ್ನಾನ ಮಾಡಿ ಹೊರಬಂದು ತನ್ನ ಕೂದಲು ರಾಶಿಯನ್ನು ಪಟಕ್ಕನೆ ಝಾಡಿಸಿದಾಗ ಉದುರುವ ಹನಿಗಳಂತೆ ಇಬ್ಬನಿಯ ಬಿಂದುಗಳು ಆ ಹೂಗಳನ್ನು ಮುತ್ತಿಟ್ಟಿದ್ದವು. ನಿನ್ನೆ ತಿಂದು ಅರ್ಧ ಬಿಟ್ಟಿದ್ದ ಕೆಂಪಾದ ಹಣ್ಣುಗಳು ಪಕ್ಷಿಗಳ ಕಚ್ಚುವದರಲ್ಲಿನ ಪ್ರೀತಿ ಸಾರಿ ಹೇಳುತ್ತಿದ್ದಂತೆ ಬಿದ್ದಿದ್ದವು. ಭೂಮಿ ತಿರುಗುವಷ್ಟೇ ನಿಧಾನದ ವೇಗದಲ್ಲಿ, ತನಗೇನೂ ಅವಸರವಿಲ್ಲಂದತೆ ಅಲ್ಲೊಂದು ಬಸವನ ಹುಳು ನಡೆಯುತ್ತಾ, ತಾನು ಹೋದ ದಾರಿಯನ್ನು ಹಸಿಯಾಗಿಸಿತ್ತು. ಹೂಗಳು ದುಂಬಿಯ ದಾರಿಯನ್ನೇ ನೋಡುತ್ತಿದ್ದಂತೆನಿಸಿತು. ಬೆಟ್ಟದ ತುದಿಯಲ್ಲಿ ಕೆಂಪು ಸೂರ್ಯ ಬಿಸಿಲ್ಗುದೆರೆಯೇರಿ ಹತ್ತುತ್ತಿದ್ದ. ಸೂರ್ಯನೂ ಎಲಾ! ಬಣ್ಣ ಬದಲಿಸುವ ಗೋರಂಟಿಯೇ ಎಂದುಕೊಂಡೆ.

ಬೇಗ ಹೆಜ್ಜೆಯಿಡಲಾರಂಭಿಸಿದ್ದರಿಂದ ಸೆಕೆಯೂ, ಸ್ವಲ್ಪ ನಿಂತೊಡನೆ ಮುಂಜಾವಿನ ತಂಗಾಳಿಗೆ ಆಹ್ಲಾದವೂ ಆಗತೊಡಗಿತ್ತು. ಪುಪ್ಪುಸ ಉಬ್ಬಿಸಿದಷ್ಟೂ ಸಿಗುವ ಆಕ್ಸಿಜನ್, ಕಿವಿ ಕೊಟ್ಟಷ್ಟೂ ಇಂಪಾದ ನಾದ, ಹೊರಟ ಕೆಲಸವೇ ಮರೆತಷ್ಟು ಮತ್ತು ಮರೆಯುವದರ ಬಗ್ಗೆ ಚಿಂತೆಯಿರದಷ್ಟು ಆನಂದ. ಇವೆಲ್ಲವದರ ಇರುವಿಕೆಯ ಮುಂದೆ ತನ್ನ ಇರುವಿಕೆ ಇರುವಿಕೆಯೇ ಎನಿಸಲಿಲ್ಲ.

ಎಲ್ಲೆಲ್ಲೋ ನೋಡಿ ಪ್ರಕೃತಿಯ ಸೌಂದರ್ಯ ಸವಿಯುವಷ್ಟು ನನ್ನ ಹತ್ತಿರ ಸಮಯವಿಲ್ಲ ಎಂದು ಅರಿವು ಬರುವಷ್ಟರಲ್ಲೇ ಬೆಟ್ಟದ ತುದಿ ತಲುಪಿದ್ದೆ. ಅರೆ, ನಾನು ಹೋಗಬೇಕಾದ ಜಾಗವೆಲ್ಲಿ ಹೋಯಿತು? ನಾನೇನಾದರೂ ದಾರಿ ತಪ್ಪಿದೆನೇ? ಬೆಟ್ಟದ ತುದಿಯಿಂದ ಸುತ್ತಲೂ ಬರೀ ಕಾಡು ಕಾಣಿಸುತ್ತಿತ್ತು. ಎಲ್ಲಿಯೂ ನಾಗರಿಕತೆಯ ಲವಲೇಶವೂ ಇರಲಿಲ್ಲ. ನಾನೆಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೆ? ನಾನ್ಯಾರು? ಈಗೆಲ್ಲಿದ್ದೇನೆ ? ಪ್ರಶ್ನೆಗಳು ಆ ಹೂಗಳು ಕಾಯುತ್ತಿರುವ ದುಂಬಿಗಳಂತೆ ತಲೆಯ ತುಂಬಾ ಹಾರಾಡಿ ಗುಂಯ್ ಗುಡ ತೊಡಗಿದವು. ಹಾಗೆಯೇ ಕಿವಿಯ ತುಂಬಾ ಹತ್ತಿರ ಒಂದು ದುಂಬಿಯನ್ನು ಓಡಿಸುವದಕ್ಕೋಸ್ಕರ ಕೈ ಮಾಡಿದ್ದಷ್ಟೇ.....

ಸರಕ್ಕನೇ ಕಾಲು ಜಾರಿತು. ಒಮ್ಮೆಲೇ ತಲೆ ತಿರುಗಿದ ಅನುಭವ. ಏನನ್ನೂ ಹಿಡಿದುಕೊಳ್ಳುವ ಪ್ರಶ್ನೆಯೇ ಇಲ್ಲ. ಇನ್ನೇನು ತಳ ಸೇರಿಬಿಡುತ್ತೇನೆ. ತಲೆ ಮೊದಲಪ್ಪಳಿಸುತ್ತದೆಯೋ ಅಥವಾ ಬೆನ್ನ ಮೇಲೆ ಬೀಳುತ್ತೇನೋ ಬಿದ್ದ ಮೇಲೆಯೇ ಗೊತ್ತಾಗುತ್ತದೆ. ಚಿಕ್ಕವನಿದ್ದಾಗ ನಿರ್ಮಾಣದ ಹಂತದಲ್ಲಿದ್ದ ಒಂದೇ ಮಜಲಿನ ಪುಟ್ಟ ಮನೆಯ ಮಾಳಿಗೆಯಿಂದ ಕೆಳಗಡೆಯಿದ್ದ ಮರಳಿನ ಮೇಲೆ ಹಾರಿದ್ದೆ. ಪೆಟ್ಟೇನೂ ಆಗುವದಿಲ್ಲ ಎಂದುಕೊಂಡಿದ್ದವನು ಮರಳಿಗೆ ಅಪ್ಪಳಿಸಿ ತಲೆ ಎದೆಯವರೆಗೂ ಹೊಡಿದುಕೊಂಡಾಗಲೇ ಅದರ ನೋವಿನ ಅರಿವಾದದ್ದು. ಅದೆಷ್ಟೋ ಸಲ ಅಂದುಕೊಂಡಿದ್ದೆ. ಎತ್ತರದ ಬೆಟ್ಟದಮೇಲಿನಿಂದ ಧುಮುಕಿದಾಗ ಎಲ್ಲಿಂದಲೋ ಗರಿಕೆದರಿ ನಮ್ಮ ರೆಕ್ಕೆಗಳು ತೆರೆದುಕೊಂಡರೆ? ಜೀವನ ಪೂರ್ತಿ ಯಾರಿಗೂ ಹೇಳುವದಿಲ್ಲ, ಪುನಃ ಹಾರುವ ಅದೃಷ್ಟ ಇರದಿದ್ದರೂ ಪರವಾಗಿಲ್ಲ, ಒಂದು ಸಲ ರೆಕ್ಕೆ ಕೊಡಪ್ಪ ದೇವರೇ ಎಂದು ಎಷ್ಟು ಸಲ ದೇವರ ಜೊತೆ ಸರಸವಾಡಿಲ್ಲ ನಾನು ? ಇದೋ, ಈಗ ಬೀಳುತ್ತಿದ್ದೇನೆ. ಜಗತ್ತಿನ ಸೆಳೆಯುವ ಪಾತಾಳದಂಥ ಶೃಂಗದಿಂದ, ಜಗತ್ತಿನ ಎಲ್ಲ ಮೋಹ ಮಾಯಗಳಿಂದ ಮುಕ್ತನಾಗಿ, ರೆಕ್ಕೆಗಳು ತೆರೆದುಕೊಳ್ಳಬಹುದೇನೋ ಎನ್ನುವ ಅಮಾಯಕ ಆಸೆಯೂ ಇರದೇ ಕಂದರವನ್ನಪ್ಪುವ ಕಂದನಾಗಿ ....

ಅಷ್ಟರಲ್ಲಿ ದೂರದಲ್ಲೊಂದು ಆಕೃತಿ ಕಂಡಿತು. ಬಿಳಿಯ ಗಡ್ಡ, ತಲೆಯ ಮೇಲೊಂದು ಮುಂಡಾಸು, ಮೈಮೇಲೆ ಲುಂಗಿ, ಜುಬ್ಬಾ ಮೇಲೊಂದು ಅಂದದ, ಬಣ್ಣದ ಶಾಲು, ಮೊದಲು ಅಸ್ಪಷ್ಟವಾಗಿ ಕಾಣುತ್ತಿದ್ದದ್ದು ಈಗ ದಿಗ್ಗನೆ ಸ್ಪಷ್ಟವಾಗಿ ಕಾಣತೊಡಗಿತ್ತು. ನಾನು ಬೀಳುತ್ತಿದ್ದ ವೇಗವೇ ಅಂಥದ್ದಿರಬೇಕೆನೋ. ಅವರೊಬ್ಬ ಯೋಗಿ. ಮುಖದ ಮೇಲಿನ ಮಂದಹಾಸ ಎಂಥದೇ ನೋವನ್ನು ಮರೆಸುವಷ್ಟು. ಗಾಳಿಗೆ ಹಾರುವ ಬಿಳಿಯ ಮುಂಗುರುಗಳು ಜಗತ್ತಿನ ಎಲ್ಲ ಕಷ್ಟಗಳ ಹಗುರತನವನ್ನು ತೋರುತ್ತಿದ್ದವು. ಮುಖದ ಮೇಲಿನ ಕಳೆ ಜೀವಿಸುವ ಹುಮ್ಮಸ್ಸನ್ನು ಬೆಳಗುವಷ್ಟು ಕಾಂತಿಯುತವಾಗಿತ್ತು. ಅವರು ನನ್ನ ಕಡೆಯೇ ನೋಡುತ್ತಿದ್ದರು. ನಾನು ಅವರಿಗೆ ಎರಡೂ ಕೈಯಿಂದ ನಮಸ್ಕರಿಸಿದೆ. ಅವರು ಕಣ್ಣಲ್ಲೇ ಸನ್ನೆ ಮಾಡಿ ಅಂಗೀಕರಿಸಿದರು. ನಾನು ಬೀಳುತ್ತಿದ್ದೇನೆ ಉಳಿಸಿರಿ ಎಂದೆ. ಅವರು ನಸುನಕ್ಕರು. ಇನ್ನೇನು ಅಪ್ಪಳಿಸುತ್ತಿದ್ದೇನೆ ಎಂದೆನಿಸಿತು. ಜೀವಿಸುವ ಹಂಬಲವೂ ಒಮ್ಮಿಂದೊಮ್ಮೆಲೇ ಬತ್ತಿಹೋಗಿತ್ತು. ಸಾವನ್ನೇ ಆನಂದಿಸುತ್ತ ಸತ್ತರೆ ಹೇಗೆ ಎನಿಸಿತು. ಸುಮ್ಮನೆ ಅವರೆಡೆಗೆ ಎರಡೂ ಕೈ ಚಾಚಿದೆ. ಅವರೂ ತಮ್ಮ ಕೈಗಳನ್ನು ನನ್ನೆಡೆಗೆ ಚಾಚಿದರು....

ಬಿಳಿ ಹೊಗೆ. ತಂಪು ತಂಪಾದ ವಾತಾವರಣ. ಮೈಯೆಲ್ಲಾ ಹಗುರವೆನಿಸಿತು. ಕೈಕಾಲು ನೋಡಿಕೊಂಡೆ, ಏನೂ ಆಗಿರಲಿಲ್ಲ. ಕೆಳಗೆ ನೋಡಿದೆ. ನೆಲವಿರಲಿಲ್ಲ. ನಾನು ಹಾರತೊಡಗಿದ್ದೆ.
**********

ಇರು ಇರು ಇರು ಕಾಲವೇ, ಇಷ್ಟು ಬೇಗ ಗತಿಸಬೇಡ. ಜೀವನ ಕೆಲವೊಂದು ಸಲ ಕನಸಿನಷ್ಟೇ ಸುಂದರ, ಅವುಗಳಷ್ಟೇ ಗೆಲುವಿನ, ಅವುಗಳಷ್ಟೇ ಮೋಜಿನ, ಅವುಗಳಷ್ಟೇ ಅಸಹಾಯಕ, ಅವುಗಳಷ್ಟೇ ಅಮಾಯಕ. ಕನಸನ್ನೊಮ್ಮೆ ಪೂರ್ತಿ ಜೀವಿಸಲೇ? ಈ ಕನಸು ಜೀವನವಲ್ಲವೇ? ಅಥವಾ ಜೀವನವೇ ಒಂದು ಕನಸೇ?




Tuesday, 27 May 2014

Bharwan Alu Tiranga

Nope, i'm not back at cooking after a long but back at writing down the recipes I try out. In the meantime, i had made several one timer dishes only to forget the quicker than remembering to writing them down.

The name is suggested by my better half, Bharwan Alu Tiranga. Also the preparation and helping done by her. I only told her what to do and took pictures for your reference.

Let me tell you before you read the recipe or even try to cook it, it was yummy! :-)

Now the details.

Ingredients: 

Onions : 2 big ones, one small one.
Tomato : 2 medium ones.
Jeera, saumf powders
Methi leaves - a couple of handful
Roasted peanut powder.

Method:

Boil potato in pressure cooker for 2 whistles. Take them out, allow them to cool down and scoop the inner portion to leave enough potato outside with their skin on.


Grind onion to a fine paste

Chop onions and tomato. Take 4 table spoons of oil on a pan, heat and pour chopped onions and tomatoes in it. Add chilly flakes, salt and Saute till its fully done. Before turning off the flame, pour a handful of roasted peanut powder (make it little coarse though) and keep aside.




Finely chop methi and saute in oil along with finely chopped garlic and jeera+saumf powder for some time, keep aside.


Now fill potato first with onion tomato filling and then with methi filling.


Take a pan, pour oil and heat it. Add mustard seeds and curry leaves. Add onion paste and sauté till golden colour. Add the removed potato portion to make gravy, add garam masala, chilli powered and salt to taste, add water and let it boil.


Put the stuffed potato one by one on this gravy making sure they don't spill or burst. Close the lid and cook for 7-10 minutes in low flame.



(I chose the lid of cooker because i couldn't find anything else to close. A dome shape lid is better to close while you cook, instead of flat one. This allows the aroma to settle in the potatoes.


Finally the dish looks like this :-



You can omit putting potato in the gravy if you do not like potato gravy. instead you can make tomato gravy or even coconut gravy.

Enjoy the food!




Monday, 14 April 2014

ನನ್ನವಳು ಆಗಬೇಕಿದ್ದವಳು

ನಾ ಕೈ ತೂರಿ ಗುಡ್ಡೆ ಮಾಡಿದ
ಮರಳು ಮನೆಯಲ್ಲಿ
ಕಿರುಬೆರಳು ಹಾಕಿ
ಬೆಳಕಿಂಡಿ ಮಾಡಿದವಳು
ಜೊತೆಗೇ ಕಚಗುಳಿ ಇಟ್ಟವಳು

ನಾ ಬಿಟ್ಟ ಕಾಗದದ ದೋಣಿ
ಮುಂದೆ ಸಾಗಿಸಲು
ಬೆರಳ ಹುಟ್ಟು ಹಾಕಿದವಳು
ಅದು ಕೊಚ್ಚಿ ಹೋಗಲು
ಮಳೆಯಲ್ಲಿ ನನ್ನ ಕಣ್ಣೊರೆಸಿದವಳು

ಕುಂಟಾಟ ಆಡುವಾಗ
ಬೇಕೆಂತಲೇ ಕೈಗೆ ಸಿಕ್ಕಿ
ನನ್ನ ಕೈಗೂ ಮನಸ್ಸಿಗೂ
ಮುದಗೊಳಿಸಿದವಳು
ಕೈ ಕೊಸರಿಕೊಳ್ಳುವ
ಹುಸಿ ಕೋಪ ತೋರಿಸಿದವಳು

ಹರೆಯದ ಹುಚ್ಚು ಹಿಡಿಸಿ
ಕಣ್ಣಿಂದಲೇ ಜೀವ ಮಿನುಗಿಸಿದವಳು
ಪ್ರಾಣ ನನ್ನಲ್ಲಿದೆಯೋ ಅವಳಲ್ಲಿದೆಯೊ
ಅರಿವು ಮರೆಸಿದವಳು

ನನ್ನವಳು ಆಗಬೇಕಿದ್ದವಳು
ಕನಸಿನಲ್ಲೇ ಉಲಿದವಳು
ಬದುಕ ಮಾಯೆ, ಸೊಬಗಿನ ಜೊತೆ
ಮನಸಿನಲ್ಲೇ ಉಳಿದವಳು

-VV


Ignorance

ನನಗ್ಗೊತ್ತಿಲ್ಲವಾದದ್ದು ಬಹಳವಿದೆಯಾದರೂ
ಗೊತ್ತಿಲ್ಲದ್ದು ಗೊತ್ತಾಗುವವರೆಗೆ ಕಾಯಬಹುದು
ಗೊತ್ತಿಲ್ಲ-ಇದು ಗೊತ್ತಾಗಬೇಕೀಗಲೇ.

-VV

I know not, a lot.
What I don't know can
wait to be known.
'I don't know'-this
I need to know now!

-VV

untouchable

ಮನುಷ್ಯ.ರಿಗಿಂತ ಬೇರೆಯಾಗಿ ನೋಡಿದವರೇ
ತಮ್ಮ ದೇವರನ್ನು ಅಸ್ಪೃಶ್ಯನನ್ನಾಗಿ ಮಾಡುವದು
-VV

Why separate your God from the human, and make him untouchable?
-VV

Pretention

ನೀನಲ್ಲದೇ ಇರುವುದನ್ನು ಇಲ್ಲವಾಗಿಸುವದು ನೀನಿದ್ದ ಹಾಗಿರುವದಕ್ಕಿಂತ ಸುಲಭ. ಪ್ರಯತ್ನಿಸಿ ನೋಡು. - VV

Not being what you are not is easier than being yourself. So try it. - VV

ಪ್ರೀತಿ

ಅವನ ಪ್ರೀತಿ ಎಂತಹದು ಅಂತೀರಾ?
ಇಷ್ಟು ದಿವಸ ತಾನಿಲ್ಲದೆ ಬದುಕದವಳು ಏನೋ ಒಂದು ತಪ್ಪು ಮಾಡಿದಳು ಎಂದ ಮಾತ್ರಕ್ಕೆ ತನ್ನನ್ನು ತಾನೇ ದೂರ ಮಾಡಿ ತಾನಿರದೇ ಅವಳಿಗಾಗುವ ಚಿತ್ರಹಿಂಸೆಯನ್ನು ನೆನೆಸಿಕೊಂಡು ಸುಖಿಸುವ ವಿಚಿತ್ರ ಮ್ಯಾಸೋಕಿಸಂ.

ಅವಳದೂ ಕಡಿಮೆಯೇನಿಲ್ಲ.
ಅವನಿಗಾಗುವ ಅಂತಹ ಖುಷಿಗಾಗಿಯೇ ತಾನು ಇನ್ನೂ ಸ್ವಲ್ಪ ಕಷ್ಟ ಅನುಭವಿಸಿ ಅವನಿಗೇ ತೋರಿಸುವ ವಿಲಕ್ಷಣ ಏಕ್ಸಿಬಿಶನಿಸಂ!

Whip

It is best to endure the words; because silence can hit you harder

- VV

Friday, 21 March 2014

ವ್ಯಾಪಾರ

ಎಲ್ಲರದೂ ಒಂದೊಂದು ತರಹದ ವ್ಯಾಪಾರ
ಪ್ರಾಮಾಣಿಕತೆಯ, ಕಪಟದ,
ನೀತಿವಂತಿಕೆಯ, ಲಂಪಟತನದ,
ಕುತೂಹಲದ, ಅಸಡ್ಡೆಯ,
ಪ್ರೀತಿಯ, ಹಗೆತನದ
ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳುವ ಹಂಬಲ
ಯಾರೂ ನಷ್ಟ ಸಹಿಸಲೊಲ್ಲರು
ಇದು ಹೀಗೇ, ತೆಗೆದುಕೊಳ್ಳಿ ಎಂದು
ಕೆಲವರು ತಮ್ಮ ಸಾಮಾನು ಮಾರಿದರೆ
ಇದು ಹೀಗಲ್ಲ ಎಂದು ಮಾರುವವರೂ ಉಂಟು
ಹೌದು ನಾನು ವ್ಯಾಪಾರಿ ಎಂದು ಒಪ್ಪಿಕೊಳ್ಳುವ ಕೆಲವರಾದರೆ
ಹಾಗಂತ ಒಪ್ಪಿಕೊಳ್ಳ ದಿರುವ ವ್ಯಾಪಾರಿಗಳೂ ಉಂಟು
ಬೇಕು ಎಂದು ಕೇಳುವ, ಕೇಳದೆ ಇತರಿರಗೆ ಕೊಡುವ
ಎಲ್ಲಾ ಒಂದು ರೀತಿ ವ್ಯಾಪಾರವೇ.

ಎಲ್ಲಿವರೆಗೆ ಮಾರುಕಟ್ಟೆ ಇರುವದೋ
ಅಲ್ಲಿವರೆಗೆ ಈ ವ್ಯಾಪಾರ.

ಯಾವತ್ತು ಇದು ಇರದಾಗುವದೋ
ಮತ್ತೊಂದು ವ್ಯವಹಾರ ಶುರುವಾಗುವದೋ ?

-VV




Words

Words are neither in the mouth nor on the paper.
They are in the minds of the writer and the reader. -VV

Why

When anything you do with absolute conviction, love and passion or lack of them; then 'what, where, how and when' you do it will disappear. Only 'why' you do it remains. -VV

Belief

When I believe in something, I know I have to fight for it. Either with self or with others.

Man, with certain beliefs, is home for constant tussle. - VV

lie

In the state of confusion, whatever you speak is a lie; deliberate or otherwise. -VV

Idea

Contrary to what you think by thinking ideas strike, stop thinking and see them really do! -VV


Tuesday, 25 February 2014

Impulse and Stupidity


No one commits stupidity, it happens. Only when something we do, goes wrong, we call it as stupidity. When the things go as per our plans or for that matter some action that we take impromptu succeeds, we do not call that as stupidity. But only when the plans do not work or worse, sudden action taken at that time, fails, we curse it as stupidity.

Stupidity need not be in the eye of the beholder. It is something that is not desired by the event itself. It is not a relative term. It is not the stupidity a person calls for the action of another person. It is the stupidity in nature. When stupidity takes place, things do go wrong as an event and not as pertaining to that event.

Whenever things do go wrong, we either justify the act saying I did what I thought was appropriate that time or we simply regret our act. In either case, the stupidity stands stall, glaring at us. If we are honest enough and do not wish to repeat the same or similar act in the future, we would develop certain intelligence towards handling such things.

Now look at the intelligence. Intelligence has to be committed, it doesn’t happen on its own.

Intelligence is also an absolute thing. This does not belong to one person. When enough of intelligence exists around the events, things go the way they are supposed to go. Our endeavor should be to merge with the intelligence around us and help ourselves get the desired result. The desire also should have intelligence and not be stupid to ask for unimaginable things to happen.

When we merge ourselves with the existing intelligence, we already know how to handle the situation. The appropriateness is decided by the requirement of the event and not by our convenience. The intelligence doesn’t necessarily accumulate by past experience and learning. Of course they can be referred to, but there are always surprises. Life offers situations beyond all experiences and cognition.

When we do the things as the situation demands without recognizing necessary intelligent thought around it, it may anyway go wrong. How do we react to any given situation depends on the thought we give around the situation and not only to the situation. Taking time at the time of the situation may help us think. Revisiting the set goals and objectives might help. Or overall understanding of the situation will lead to the required action.

Intelligence comes with clarity of the mind. Confusion is not stupidity but lack of intelligence is. In the state of confusion, we do not do things that come to our mind. In stead, we seek clarity in ourselves. Clarity comes by merging ourselves with intelligence. Sincere, patient and truthful efforts take us to this path of merging with intelligence.

- VV


Monday, 24 February 2014

Exclusivity:

between memories and forgetfulness,
just in order not to break
the thin string of breath,
do i have to take life's toll?

between speech and silence,
just in order to solve and resolve
the crossword of thoughts,
should i be counting days and nights?

love and selfishness
are as limited as the wide ravine
that i need to jump.
do i have to save my energy for that?

renouncement and thirst -
it's all the commotion of beliefs.
should I be saying the unseen
to convince others?

-VV

ಧಾರಣೆ

ನೆನಪು - ಮರೆವಿನ ನಡುವೆ
ಉಸಿರಾಟದ ತೆಳು ದಾರ
ಹರಿದು ಹೋಗದಿರಲೆಂದು
ಬಸವಳಿದು ಬದುಕಲೆ ?

ಮಾತು - ಮೌನದ ಮಧ್ಯೆ
ಯೋಚನೆಗಳ ನುಡಿವತ್ತು
ಬಿಡಿಸಿ ಜೋಡಿಸಲೆಂದು
ಹಗಲಿರುಳು ಎಣಿಸಲೆ ?

ಪ್ರೀತಿ - ಸ್ವಾರ್ಥದ ಮಿತಿ
ಅತಿ ದೀರ್ಘ ಕಾಲುವೆಯ
ನೆಗೆದು ಪಾರಾಗಲೆಂದು
ಕಸುವನ್ನು ಕೂಡಿಡಲೆ ?

ತ್ಯಾಗ - ತೃಷೆ ಗಳ ನಂಟು
ನಂಬಿಕೆಗಳ ಗಲಿಬಿಲಿ
ಜನರ ಒಪ್ಪಿಸಲೆಂದು
ಕಾಣದ ಮನಗಾಣಲೆ ?

-VV


Tuesday, 4 February 2014

ಸೆಳೆತ

The story of going inwards, can not be written in words. -VV

ವಯಸ್ಸು ಮೂವತ್ತೆಂಟು. ಒಳ್ಳೆಯ ನೌಕರಿ, ಪ್ರತಿಷ್ಠಿತ ಹುದ್ದೆ, ವಿದೇಶದಲ್ಲೂ ಸೇರಿಸಿ ತನ್ನ ಹದಿನೇಳು ವರುಷದ ಕೆಲಸದಲ್ಲಿ ಸಾಕಷ್ಟು ಹಣ  ಗಳಿಸಿಯೂ ಆಗಿತ್ತು. ಸುಶೀಲ ಹೆಂಡತಿ, ಎರಡು ಮುದ್ದಾದ ಹೆಣ್ಣು ಮಕ್ಕಳು, ಒಟ್ಟಿನಲ್ಲಿ ಸುಖಿ ಸಂಸಾರ ಅವನದು. ಹೊರಗಿನಿಂದ ನೋಡಿದವರಿಗೆ ಯಾವದೇ ಕೊರತೆ ಕಾಣದಿರುವಂತಹ, ಕೆಲವಬ್ಬರು ಹೊಟ್ಟೆ ಕಿಚ್ಚು ಪಡುವಂತಹ ಜೀವನ ರಾಜೀವನದು. ಆದರೂ ಏನೋ ಕೊರತೆ. ಒಳಗೊಳಗೇ ಸೆಲ್ಫ ಪಿಟಿ ಮಾಡಿಕೊಳ್ಳುವ ಸ್ಯಾಡಿಸಂ. ಎಲ್ಲದರಲ್ಲೂ ದಾರ್ಶನಿಕ ಸಿಧ್ಧಾಂತ ಕಂಡುಕೊಳ್ಳುವ ವಿಚಿತ್ರ ಹುಕ್ಕಿ. ದಿನನಿತ್ಯದ ಆಗು ಹೋಗುಗಳ ಕಾರಣ ಮತ್ತು ಪರಿಣಾಮಗಳ ಬುಡಕ್ಕೆ ಹೋಗುವಹುಚ್ಚು. ತನ್ನ ಮೇಲೆ ತನಗಿರುವ ಹುಂಬ ಆತ್ಮವಿಶ್ವಾಸ. ಇದೆಲ್ಲರ ಪರಿಣಾಮವಾಗಿಯೋ ಏನೋ, ಆಗಾಗ್ಗೆ ಜಗತ್ತಿನ ಇರುವಿಕೆ, ಸತ್ಯ-ಮಿಥ್ಯ ದ ಬಗೆಗಿನ ಗೊಂದಲ. ಮಿಡ್ ಲೈಫ್ ಕ್ರೈಸಿಸ್ ನ ಪರಮಾವಧಿ.

ಈ ನಡುವೆ ಸ್ವಂತಕ್ಕೆ ಖುಷಿ ಕೊಡುವ ಎಲ್ಲಾ ಚಟುವಟಿಕೆಗಳನ್ನೂ ಶುರುಮಾಡಿಯಾಗಿತ್ತು. ಯಾವ ನೌಕರಿ, ಸಂಸಾರದ ನೆಪದಲ್ಲಿ ಇಷ್ಟು ವರುಷ ತನ್ನ ಆಸಕ್ತಿಗಳನ್ನು ಪಕ್ಕಕ್ಕಿಡುತ್ತಾ ಬಂದಿದ್ದನೋ ಅವುಗಳನ್ನೆಲ್ಲ, ತನ್ನ ವಯಸ್ಸು ಮತ್ತು ಸಾಮರ್ಥ್ಯಕ್ಕನುಗುಣವಾಗಿ ಒಂದೊಂದಾಗಿ ಮಾಡುತ್ತಾ ಬಂದಿದ್ದ. ಲೈಫ್ ಬಿಗಿನ್ಸ್ ಆಟ್ ಫಾರ್ಟಿ ಎನ್ನುವಂತೆ ಇಷ್ಟು ವರುಷ ಮಾಡದೆ ಇರುವಂಥ ಎಲ್ಲವನ್ನು ಮಾಡಿ ನೋಡುವ ಹುಮ್ಮಸ್ಸು ಹೊಕ್ಕಿತ್ತವನಿಗೆ. ಆದರೆ ಅದಕ್ಕೂ ಮಿತಿಯಿತ್ತು. ಮಾಡುತ್ತಾ ಮಾಡುತ್ತಾ ಕೊನೆಗೆ ಅವಕ್ಕೂ ಬೇಸತ್ತ. ಇನ್ನು ಉಳಿದಿರುವುದೊಂದೇ, ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದಾಗಬೇಕು ಎಂದುಕೊಂಡು ಅದರ ಹತ್ತಿರಕ್ಕೂ ಹೋಗದೇ ಇದ್ದ ಒಂದು ಸಂಗತಿ ಎಂದರೆ ಆಧ್ಯಾತ್ಮ. ಆಧ್ಯಾತ್ಮ, ದೇವರು-ದಿಂಡರುಗಳಿಗೆ ಹತ್ತಿರವಾದುದ್ದೇನೋ ಎಂದು ಅದರಿಂದ ಅರ್ಧಂಬರ್ಧ ನಾಸ್ತಿಕನಾದ ಇವನು ದೂರವೇ ಇದ್ದ. ಜಾಸ್ತಿ ಅದರ ಬಗ್ಗೆ ಯೋಚನೆಯಾಗಲಿ, ಆಸಕ್ತಿ ತೋರಿಸುವದಾಗಲಿ ಮಾಡಿರಲಿಲ್ಲ. ಆದರೆ ಇತ್ತೀಚಿಗೆ ಜೀವನದ ಬಗ್ಗೆ ಜುಗುಪ್ಸೆಗೆ ಹತ್ತಿರವಾದ ಭಾವನೆಗಳು ಬರತೊಡಗಿದ್ದರಿಂದ ಅವನ ಮನಸ್ಸು ಆಧ್ಯಾತ್ಮದತ್ತ ವಾಲಿತ್ತು.

ಬರ ಬರುತ್ತಾ ಅವರವರ ಸಿಧ್ಧಾಂತಗಳಿಗೆ ಸಂಪೂರ್ಣವಾಗಿ ಒಪ್ಪದೇ ಹೋದರೂ ರಾಜೀವ ಸುಮಾರು ಆಧ್ಯಾತ್ಮಿಕ ಗುರುಗಳ ಪುಸ್ತಕಗಳನ್ನ ಓದುತ್ತಾ ಬಂದಿದ್ದ. ದಿನಾಲೂ ಅವನ ದಿನಚರಿಯಯ ಪ್ರಕಾರ ತಾಯಿಯ ಮೇಲಿನ ಗೌರವಕ್ಕಾಗಿ ಮಾತ್ರ ಮಾಡಿಕೊಂಡ ರೂಢಿಯಂತೆ ಸ್ನಾನವಾದ ತಕ್ಷಣ ದೇವರಿಗೆ ನಮಸ್ಕಾg ಮಾಡುವ ಬದಲು ಬೆಡ್‌ರೂಂ ಗೆ ಹೋಗಿ ಯೂ ಟ್ಯೂಬ್ ಹಾಕಿಕೊಂಡು, ಆಫೀಸಿಗೆ ರೆಡಿ ಅಗುತ್ತಾ ಅನೇಕ ಆಧ್ಯಾತ್ಮಿಕ ಪ್ರವಚಗಳನ್ನುಕಿವಿಯ ಮೇಲೆ ಬೀಳಿಸಿಕೊಳ್ಳಲು ಶುರುಮಾಡಿದ್ದ.ತಾನು ಇಷ್ಟು ದಿನ ಕಲಿತಿದ್ದದ್ದಕ್ಕೆ ಸಂಪೂರ್ಣವಾಗಿ ವಿರುಧ್ಧವಾದ ವಿಚಾರಸರಣಿಗಳು ಅವನ ತಲೆಯಲ್ಲಿ ಗುಂಯ್ಯಿಗುಡುತ್ತಿದ್ದವು. ಅದು ಹಾಗಿರದೇ ಹೋದರೆ ಹೀಗೇಕಿದೆ, ಹೀಗಿದೆ ಅಂದುಕೊಂಡಿದ್ದೆಲ್ಲಾ ಹಾಗಿದೆಯಲ್ಲ, ನಿರ್ಲಿಪ್ತತೆಯೆಂದರೆ ವೈರಾಗ್ಯವೇ? ಹೀಗೆ ಕೇಳಿದ್ದಷ್ಟು ಇನ್ನಷ್ಟು ಗೊಂದಲ ಉಂಟಾಗುತಿತ್ತು. ಮೊದಲಿದ್ದ ಅರಿವೇ ಸುಳ್ಳು ಎನ್ನುಷ್ಟು ಹತಾಶೆಯ ಮನೋಭಾವ ಬರತೊಡಗಿತು. ಕೆಲವು ಜೀವನದ ಯಾವುದೇ ಸಂಗತಿಗಳ ಬಗ್ಗೆ ಸ್ಪಷ್ಟ ಧೋರಣೆಯಿಲ್ಲದ ಗೆಳೆಯರಿಂದ ತನ್ನ ಹೊಸ ಗೊಂದಲಗಳ ಕುರಿತಾಗಿ ಉಗಿಸಿಕೊಂಡದ್ದೂ ಆಗಿತ್ತು, ಅವರಿಗೆ ಮರಳಿ ಅಸ್ಪಷ್ಟವಾಗಿ ಉಗಿದಿದ್ದೂ ಆಗಿತ್ತು.

ಒಂದು ದಿವಸ ಹೀಗೇ ಯೂ ಟ್ಯೂಬ್ ನಲ್ಲಿ ಹುಡುಕುತ್ತಾ ಇದ್ದಾಗ ಶಿವಗುರು ಎಂಬ ಒಬ್ಬರ ವಿಡಿಯೋ ಗಳ ಮೇಲೆ ಕಣ್ಣು ಹೋಯಿತು. ಆದಿನ ಆ ಗುರುಗಳ ಒಂದೆರಡು ವಿಡಿಯೋ ನೋಡಿದ. ಮಾಮೂಲಿನ ದಿನ ಕಳೆಯಬೇಕಾದರೆ ಅದೇಕೋ ಆ ಶಿವಗುರುಗಳ ಮುಖವೇ ಕಣ್ಣೆದುರಿಗೆ ಬಂದು ನಿಂತಂತಾಗುತಿತ್ತು. ಇಷ್ಟು ದಿನ ಹಲವು ತತ್ವಗಳನ್ನು ಕೇಳಿದ್ದಕ್ಕೂ ಇರಬಹುದು ಇವರ ವಿಚಾರಗಳು ಒಮ್ಮೆಲೇ ವಿರೋಧಾಭಾಸವಾಗೇನೂ ಕಾಣಲಿಲ್ಲ. ಬದಲಿಗೆ ಏನೋ ಒಂಥರಾ ಆಕರ್ಷಣೀಯವಾಗಿ ಕಂಡವು. ಅವರಲ್ಲೇನೋ ಇದೆ ಎಂದು ಅವನಿಗೆ ಭಾಸವಾಗಲು ಜಾಸ್ತಿ ಹೊತ್ತು ಬೇಕಾಗಲಿಲ್ಲ. ಮಾರನೇ ದಿನವೂ ಅವರ ಸಂವಾದವನ್ನೇ ಹಾಕಿಕೊಂಡು ಕೇಳಿದ. ಅದರ ಮಾರನೇ ದಿನವೂ. ಹೀಗೇ ಒಂದು ವಾರದಲ್ಲಿ ಶಿವಗುರು ಅವರ ಸುಮಾರು ಇಪ್ಪತ್ತಿಪ್ಪತ್ತೈದು ವಿಡಿಯೋಗಳನ್ನ ನೋಡಿದ. ಕಲಿಯಬೇಕಾಗಿದ್ದು ತುಂಬಾ ಇದೆ ಅನಿಸತೊಡಗಿತ್ತು. ಗೊಂದಲಗಳು ಕರಗಿ ಸ್ಪಷ್ಟತೆ ಮೂಡ ತೊಡಗಿತ್ತು, ತನಗೇನೂ ಸ್ಪಷ್ಟತೆ ಇಲ್ಲದರ ಬಗ್ಗೆ! ಅರಿವು ಮಾತ್ರ ನಿಜ, ನಂಬಿದ್ದೆಲ್ಲ ಸುಳ್ಳು ಎಂದರವರು ಶಿವಗುರು. ಹಾಗಾಗಿ ಇಷ್ಟು ದಿನಗಳ ತನ್ನ ನಂಬಿಕೆಗಳ ಮೇಲೆಯೇ ನಂಬಿಕೆ ಹಾರ ತೊಡಗಿತ್ತು.

ಈ ಮಧ್ಯೆ ಕಥೆ ಕಾದಂಬರಿ ಬರೆಯುವ ಹುಚ್ಚೂ ಅವನ ತಲೆಯಲ್ಲಿ ಹೊಕ್ಕಿತ್ತು. ಯಾವಾಗಲೂ ತಾನು ಎಂದೂ ಬರೆಯದೇ ಇರುವ ಕಥೆಗೆ ಏನಾದರೂ ಒಂದು ಹೊಸ ವಸ್ತು ಸಿಗುತ್ತದೋ ಎಂದು ನೋಡುತ್ತಲೇ ಇರುತ್ತಿದ್ದ. ಮೊದಲೇ ಊಹಾ ಪ್ರಪಂಚಕ್ಕೆ ಕಿರೀಟವಿರದ ಅಧಿಪತಿ, ಮಿಡ್ ಲೈಫ್ ಕ್ರೈಸಿಸ್ ನಲ್ಲಿ ಬಿಡ್ತಾನೆಯೇ? ಸರಿ, ಯಾವಾಗ ನೋಡಿದಾಗ ಅವನಿಗಿರುವ ಕೆಲಸ ಎರಡೇ, ಒಂದು, ತಾನು ನೋಡಿದ್ದೆಲ್ಲವನ್ನು ಆಧ್ಯಾತ್ಮಿಕ ಮಾಪಕದಲ್ಲಿ ಅಳೆಯುವದು. ಅದು ತನ್ನ ಕಥೆಯ ವಸ್ತುವಾಗುತ್ತದಾ ಅಂದು ನೋಡುವದು ಇನ್ನೊಂದು. ಶಿವಗುರುಗಳ ಪ್ರತಿ ಮಾತಿನಲ್ಲಿಯೂ ಅವರೇ ಅರ್ಥ ಹುಡುಕಬಾರದೆಂದು ಹೇಳಿದ್ದರೂ ಅರ್ಥ ಹುಡುಕಲಿಕ್ಕೆ ಶುರು ಮಾಡಿದ. ಅವರ ಜೀವನದ ಬಗ್ಗೆ ಜಾಸ್ತಿ ಮಾಹಿತಿಗಳನ್ನ ಸಂಗ್ರಹಿಸತೊಡಗಿದ. ಯಾರನ್ನೇ ಆಗಲಿ ಸಂಪೂರ್ಣವಾಗಿ ನಂಬಲಿಕ್ಕೂ ಮುನ್ನ ಅವರ ಬಗ್ಗೆ ಕೂಲಂಕುಷವಾಗಿ ಅಭ್ಯಾಸಿಸುವದು ಅವನಿಗೆ ಚಿಕ್ಕಂದಿನಿಂದಲೇ ಬಂದಿದ್ದ ಚಟ. ಅದೇ ಚಟವನ್ನು ಮುಂದುವರೆಸುತ್ತಾ ಶಿವಗುರುಗಳ ಬಗ್ಗೆ ಸಿಕ್ಕಷ್ಟು ಮಾಹಿತಿಗಳಿಸುತ್ತಾ ಹೋದ. ಒಂದು ಹಂತದಲ್ಲಿ ಅವರ ಬಗ್ಗೆ ಮಾಹಿತಿಗಳಿಸುವದೇ ಅವರು ಪ್ರಸ್ತಾಪಿಸುವ ಆಧ್ಯಾತ್ಮಕ್ಕಿಂತಲೂ ಮಹತ್ವಪೂರ್ಣವಾಗತೊಡಗಿತು. ಆದರೂ ಅವರ ಮೇಲಿನ ಆಕರ್ಷಣೆ ಕಡಿಮೆಯೇನೂ ಆಗಲಿಲ್ಲ.

ಹೀಗೊಂದು ದಿನ ಆಫೀಸಿನಲ್ಲಿ ಜಾಸ್ತಿ ಕೆಲಸ ಇರದಿದ್ದಾಗೊಂದು ಸಲ ಶಿವಗುರುಗಳ ವೆಬ್‌ಸೈಟ್ ಗೆ ಧಿಡೀರನೆ ಭೇಟಿಯಿತ್ತ. ಇಷ್ಟು ದಿವಸ ಅದರ ಬಗ್ಗೆ ಅವನಿಗೆ ಹೇಗೆ ಹೊಳೆದಿರಲಿಲ್ಲವೋ ಅವನಿಗೇ ಗೊತ್ತಿರಲಿಲ್ಲ. ಒಮ್ಮೆಲೇ ಅವನಿಗೆ ಶಿವಗುರುಗಳನ್ನು ನೋಡಲೇಬೇಕು ಎಂಬ ಉತ್ಕಟ ಆಸೆ ಆಯಿತು. ಆ ಆಸೆ ಅವನಿಗೆ ಬಂದಿದ್ದು ಶಿವಗುರುಗಳ ಮೇಲಿನ ಭಕ್ತಿಗಾಗಿ ಬಂದಿದ್ದೋ ಅಥವಾ ಅವರ ಮೇಲಿನ ಸಂಶಯ ಪರಿಹಾರದ ಉದ್ದೇಶಕ್ಕೋಸ್ಕರ ಬಂದಿದ್ದೋ ಅವನಿಗೂ ಹೊಳೆಯಲಿಲ್ಲ. ಅಂತೂ ಅವರ ವೆಬ್ ಸೈಟ್ ನೋಡುತ್ತಾ ಹೋದ ಹಾಗೆ ಹೊಸ ಹೊಸ ಸಂಗತಿಗಳು ಕಾಣುತ್ತಾ ಬಂದವು. ಶಿವಗುರುಗಳು ತಾನು ಎಣಿಸಿದಷ್ಟು ಸಣ್ಣ ಪ್ರಮಾಣದವರು ಅಲ್ಲವಂತಲೂ, ಅವರನ್ನು ಭೇಟಿ ಮಾಡುವದು ಅಷ್ಟು ಸುಲಭವಲ್ಲದಿರುವದೂ ಗೊತ್ತಾಯಿತು. ಅವರ ವೇಳಾಪಟ್ಟಿ ನೋಡಿದಾಗ ಅವರು ಏರ್ಪಡಿಸಿರುವ ಒಂದು ಕಾರ್ಯಕ್ರಮ ಕಂಡಿತು. ಆದರೆ ಆ ಕಾರ್ಯಕ್ರಮ ಮುಂದುವರೆದ ಮಟ್ಟದ್ದು ಇದ್ದುದಾದರಿಂದ ಅದರಲ್ಲಿ ಭಾಗವಹಿಸಲು ಕನಿಷ್ಠ ಒಂದಾದರೂ basic program ಅನ್ನು ಪೂರೈಸಿರಬೇಕಾಗಿದ್ದು ಅವಶ್ಯವಾಗಿತ್ತು. ಅವರನ್ನು ನೋಡುವ ಆಸೆ ಎಷ್ಟು ಜಾಸ್ತಿಯಾಗಿತ್ತೆಂದರೆ ಶಿವಗುರು ಅವರ ಸಂಸ್ಥೆ ಸಾಮಾನ್ಯ ಜನರಿಗಾಗಿ ಏರ್ಪಡಿಸುವ course ಗಳನ್ನು ಗಮನಿಸುತ್ತಾ ಹೋದ. ನಿಮ್ಮನ್ನು ನೀವೇ ಅರಿಯಿರಿ ಎಂಬ ಮೊದಲ ಹಂತದ course ಅದು. ಆ course ನಡೆಯುವ ಜಾಗ, ದಿನಾಂಕಗಳನ್ನು ಪರಿಶೀಲಿಸುತ್ತಾ ಬಂದ. ಚಂಡೀಗಢ... ದೆಹಲಿ... ಇತ್ಯಾದಿ... ಕೆಳಗೆ ನೋಡುತ್ತಾ ಬಂದ. ಹಾಂ! ಅಲ್ಲಿತ್ತು ಬೆಂಗಳೂರು! ಅವನ ತಲೆಯಲ್ಲೀಗಾಗಲೇ ಹಲವಾರು ಯೋಚನೆಗಳು ಬರತೊಡಗಿದ್ದವು. ತಾನೇನೋ ಈ course ಮಾಡಲು ಸಿಧ್ಧನಾಗಿದ್ದೇನೆ, ಆದರೆ ಬೆಂಗಳೂರಲ್ಲಿ ಆ ತರಬೇತಿ ನಡೆಯುವ ಜಾಗ ದೂರವಿದ್ದರೆ ಏನು ಗತಿ? ಬೆಂಗಳೂರಿನ traffic ನಲ್ಲಿ ಎಲ್ಲೂ ಹೋಗಲು ಮನಸ್ಸಾಗದು. ಇಲ್ಲೇ ಎಲ್ಲೋ ಹತ್ತಿರವಿದ್ದರೂ ಅದರ ಶುಲ್ಕ ತುಂಬಾ ಜಾಸ್ತಿ ಇದ್ದರೆ? ದುಡ್ಡಿನ ಸಮಸ್ಯೆ ತನಗಿರದಿದ್ದರೂ ಸುಮ್ಮ ಸುಮ್ಮನೇ ಯಾವದೋ ಒಂದು ತಲೆಕೆಡಿಸುವ ವಿಷಯಕ್ಕೋಸ್ಕರ ಖರ್ಚು ಮಾಡುವ ಹುಚ್ಚುತನವಲ್ಲ ಅವನದು. ಫೀಜು ಕಡಿಮೆ ಇದ್ದರೆ ಮಾತ್ರ ನೋಡೋಣ ಎಂದು ಮನದಲ್ಲೇ ತಲೆಗೆ ಹೊಳೆದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಹೌದು, ಬೆಂಗಳೂರಲ್ಲಿ ಇದ್ದು, ದುಡ್ಡೂ ಕಡಿಮೆ ಇದ್ದುದೇ ನಿಜವಾದರೆ ತನಗೆ ಸಮಯವೂ ಸಾಧಿಸಬೇಕಲ್ಲಾ? ತನ್ನ ಬಿಡುವಿಲ್ಲದ ದಿನಚರಿಯಲ್ಲಿ ಇಂಥದೇನಾದರೂ ಬಂದರೆ ಸುಮಾರು ದಿನಗಳ ಮೊದಲೇ ಕಾರ್ಯಕ್ರಮ ಯೋಜಿಸಿ ಇಡಬೇಕಾಗುತಿತ್ತು. ಬೆಂಗಳೂರು... ಬೆಂಗಳೂರಲ್ಲಿ ಎಲ್ಲಿ? ... ಹಾಗೇ ನೋಡುತ್ತಾ ಬಂದಾಗ ಅವನು ತನ್ನ ಕಣ್ಣುಗಳನ್ನೇ ನಂಬದಾದ! ತನ್ನ ಆಫೀಸ್ ಪಕ್ಕದಲ್ಲಿನದೇ ಅಡ್ರೆಸ್ಸು!! ಇವನ ಆಫೀಸಿಗೆ ಬರೀ ಎರಡು ನಿಮಿಷದ ನಡಿಗೆಯ ಹಾದಿಯಲ್ಲಿತ್ತು ಆ course ನಡೆಯುವ ಜಾಗ. ಯಾವಾಗ? ಸರಿಯಾಗಿ ಬರೀ ಎರಡೇ ದಿನ ಬಿಟ್ಟು! ಅದರ ವೇಳಾಪಟ್ಟಿಯೂ ತನ್ನ ಆಫೀಸ್ ಮುಗಿದ ಮೇಲೆಯೇ ಇದೆ. ಏನೋ ಒಂದು ಸಮ್ಮೋಹನಕ್ಕೊಳಪಟ್ಟಿರುವನಂತೆ ಸಣ್ಣಗೆ ಕಂಪಿಸಿ ಹೋದ!

ಅದಾಗಿ ಅವನಿಗೆ ಚೇತರಿಸಿಕೊಳ್ಳಲು ಸ್ವಲ್ಪ ಹೊತ್ತೇ ಬೇಕಾಯಿತು. ಹೊರಗೆ ಹೋಗಿ ಸಿಗರೇಟು ಹಚ್ಚಿ ಯೋಚಿಸತೊಡಗಿದ. ತಾನು ಆಧ್ಯಾತ್ಮದತ್ತ ಒಲಿಯುವದಕ್ಕೂ, ಶಿವಗುರುಗಳ ಕಡೆಗೆ ಆಕರ್ಷಿತವಾಗುವದಕ್ಕೂ, ತಾನು ಅವರನ್ನು ಭೇಟಿಯಾಗಬಯಸುವದಕ್ಕೂ, ಅವರ ವೆಬ್ ಸೈಟ್ ನೋಡುವದಕ್ಕೂ, ಆ courseನಲ್ಲಿ ಭಾಗವಹಿಸ ಬಯಸುವದಕ್ಕೂ ಇತ್ಯಾದಿ ಇವೆಲ್ಲವಕ್ಕೂ ಮತ್ತು course ನಡೆಯುವ ಸ್ಥಳ ತನಗೆ ಇಷ್ಟು ಹತ್ತಿರವಿದ್ದು ಇನ್ನೆರಡೇ ದಿನಗಳಲ್ಲಿ ಶುರುವಾಗಲಿದ್ದದ್ದಕ್ಕೂ ಏನೋ ಕಾಕತಾಳೀಯತೆ ಇದೆ ಎಂಬಂತೆ ತೋರಿತು. ಅಥವಾ ಕಾಕತಾಳೀಯ ಹೌದೋ ಅಲ್ಲವೋ ಎಂದು ಇನ್ನೊಮ್ಮೆ ಮೈ ಕಂಪಿಸಿತು! ಒಟ್ಟಿನಲ್ಲಿ ಈ ವಿಷಯದಲ್ಲಿ ಏನೋ ಇದೆ ಎಂದಾದರೂ ಖಚಿತವಾಯಿತು. ಸಿಗರೇಟು ಎಸೆದು ಒಳಗೆ ಬಂದು ಕೂಡಲೆ ಆ course ನ ಮಾಹಿತಿ ಪ್ರಕಾರ ಅದರಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದ. ಆ ಕಡೆಯಿಂದ ಅಷ್ಟೇನೂ ಆಸಕ್ತಿ ಇರಲಾರದ ಹೆಣ್ಣು ಧ್ವನಿಯೊಂದು ಮಾತನಾಡಿತು. ಸಾಮಾನ್ಯವಾಗಿ ಹೆಣ್ಣಿನ ಧ್ವನಿಯೆಂದರೆ ಏನೋ ಒಂದು ಕುತೂಹಲ, ಮೈ ಜುಂ ಜುಂ ಇವನಿಗೆ. ಇರುವ ವಿಷಯಬಿಟ್ಟು ಇನ್ನೇನೋ ಮಾತಾಡುವ ಮಹಾ ಪ್ರಣಯವಿಲಾಸಿ. ಆದರೆ ಅವತ್ತೇನಾಯಿತೋ ಏನೋ ಸುಮ್ಮನೆ ಮಾಹಿತಿ ಕೇಳಿ ಫೋನಿಟ್ಟ. ಏನಿಲ್ಲ, ಆ course ಗಾಗಿ ಏನೂ ಮುಂಗಡವಾಗಿ ಹಣ ಕೊಟ್ಟು ಜಾಗ ಕಾಯ್ದಿಡಬೇಕಾಗಿಲ್ಲ, ಅವತ್ತಿನ ದಿನವೇ ಅಲ್ಲಿ ಹೋಗಿ ಹೆಸರು ನೋಂದಾಯಿಸಿದರೆ ಸಾಕೆಂದು ಆ ಕಡೆಯ ಹೆಣ್ಣು ಹೇಳಿತ್ತು. ಒಟ್ಟಿನಲ್ಲಿ ಪ್ರವೇಶಕ್ಕೆ ಅನುಮತಿ ಸಿಕ್ಕರೆ ಸರಿ, ಇಲ್ಲಾ ಯಾಕಷ್ಟೊಂದು ಅದಕ್ಕೋಸ್ಕರ ಹಾತೊರೆಯುವದು ಎಂದು ಮನಸ್ಸಿನಲ್ಲೇ ತನಗೆ ತಾನೆ ಸಮಧಾನ ಹೇಳಿಕೊಂಡ. 

ಯಾವುದೇ ಸಣ್ಣ ವಿಷಯವಿರಲಿ, ದೊಡ್ಡ ವಿಷಯವಿರಲಿ, ಎಲ್ಲರ ಮುಂದೆ ಹೇಳಿಕೊಳ್ಳುವದು ಇವನ ರೂಢಿ. ಆದರೆ ಇಂಥ ವಿಷಯಗಳನ್ನು ತನ್ನ ಕೀಟಲೆ ಮಾಡುವ ಸ್ನೇಹಿತರಿಗೆ ಹೇಳುವದೆಂದರೆ ಹಾಸ್ಯಾಸ್ಪದಗೀಡಾಗಲಿಕ್ಕೆ ಬಲಿ ಯಾಗುವುದೇ ಅಂತ ಅರ್ಥ. ಆದರೆ ಇಂಥಾ ಕಾಕತಾಳೀಯತೆ? ಹೇಳದೇ ಇರುವ ಸೈರಣೆಯೂ ಇವನದಲ್ಲ. ಏನೇ ಇರಲಿ, ಹೆಂಡತಿಗಂತೂ ಹೇಳುವ ವಿಷಯ ಖಂಡಿತಾ ಅಲ್ಲ! ಅಂತೂ ತನ್ನೊಳಗೇ ವಿಷಯ ಇಟ್ಟುಕೊಂಡು ಆ ದಿನಕ್ಕಾಗಿ ಕಾಯತೊಡಗಿದ. 

ಕೊನೆಗೂ ಆ ದಿನ ಬಂದೇ ಬಿಟ್ಟಿತು. ಅವತ್ತು ಸಾಯಂಕಾಲ ಆಫೀಸ್ ಮುಗಿಸಿಕೊಂಡು ಹೇಗೂ ತನ್ನ ಆಫೀಸ್ ಪಕ್ಕದಲ್ಲೇ ಇತ್ತಲ್ಲ, ಆ course  ನಡೆಯುವ ಜಾಗಕ್ಕೆ ಹೋದ. ಮೊದಲಿನ ಒಂದೂವರೆ ಗಂಟೆಗಳ ಪರಿಚಯದ ನಂತರ ಹೆಸರು ನೋಂದಾಯಿಸಲು ಅವಕಾಶ ಕೊಟ್ಟರು. ಇವನು ಯಂತ್ರಮಾನವನ ಥರ ಹೆಸರು ನೋಂದಾಯಿಸಿದ್ದೂ ಆಯಿತು, ಒಳಗಡೆ ಹೋಗಿ ಕುಳಿತಿದ್ದೂ ಆಯಿತು. ಶಿವಗುರು ಅವರ ಶಿಷ್ಯರಲ್ಲೊಬ್ಬರಾದವರು ಅದನ್ನು ನಡೆಸಿಕೊಟ್ಟರು. ಅವರ ತೇಜಸ್ಸಿಗೂ ತಕ್ಷಣ ಅವನು ಮಾರುಹೋದ. ಶಿವಗುರುಗಳ ಪ್ರಭಾವ ಅಪೂರ್ವವಾದದ್ದು, ಅವರಲ್ಲದೆ ಅವರ ಶಿಷ್ಯರದೂ ಎಷ್ಟೊಂದು ಮನತಟ್ಟುವ ನಡತೆ ಇದೆ. ಆ ಪೂರ್ತಿ ಕಾರ್ಯಕ್ರಮ ನಡೆಸಿಕೊಡುವವರು ಏನೂ ಸಂಭಾವನೆ ಇರದೇ ಕೆಲಸ ಮಾಡುವ ಕಾರ್ಯಕರ್ತರು. ಅವರು ನಗುನಗುತ್ತಾ ಇವರಿಗೋಸ್ಕರ ಮಾಡಿದ ಎಲ್ಲ ಕೆಲಸಗಳನ್ನು ನೋಡಿ ಅವರದೂ ಎಂತಹ ನಿಸ್ವಾರ್ಥ ಸೇವೆ ಎನ್ನಿಸಿತು.

ಅದಾದ ಮೇಲೆ ಅವನನುಭವಕ್ಕೆ ಬಂದಿದ್ದು ಒಂದು ಅವಿವರಣೀಯ ಸಂಗತಿ. ಇವನು ಭಾಷೆಯಲ್ಲಿ ಎಷ್ಟೇ ಜಾಣನಿದ್ದರೂ ಆ ಅನುಭವವನ್ನು ವಿವರಿಸುವ ಧೈರ್ಯ ಮಾಡಲಾರ. ದಿನಕ್ಕೆ ಮೂರು ತಾಸಿನಂತೆ, ನಾಲ್ಕು ದಿನಗಳ ಸುಧೀರ್ಘ ಸೆಷನ್ನುಗಳು ಆದನಂತರ ರವಿವಾರ ಪೂರ್ತಿ ದಿನದ ತರಬೇತಿಯ ನಂತರ ಎಲ್ಲರಂತೆ ಆ course ನಲ್ಲಿ ಇವನಿಗೂ ದೀಕ್ಷೆ ಕೊಡಲಾಯಿತು. ಅಬ್ಬಾ! ಅದೆಂಥ ಅನುಭೂತಿ! ಅದೆಂಥ ಅಗಾಧತೆಯ ಅರಿವು! ಇಡೀ ಬ್ರಹ್ಮಾಂಡದ ಅಂಥ ಅಗಾಧತೆಯ ಮುಂದೆ ತಾನೆಂಥ ಹುಲ್ಲು ಕಡ್ಡಿ ಎನಿಸಿತು. ತನ್ನ ಸೊಕ್ಕು, ತನ್ನ ಆಸೆ-ಅಪೇಕ್ಷೆ, ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ ಹೀಗೆ ತನ್ನ ಲಕ್ಷಣಗಳ ಬಗ್ಗೆ ಅನೇಕ ಪರ್ಯಾಯ ಪದಗಳು, ವಿಶೇಷಣಗಳು ತೋಚುತ್ತಾ ಹೋದ ಹಾಗೆ ಅವೆಲ್ಲಾ  ಕ್ಷುಲ್ಲಕ ಅನಿಸಿಬಿಟ್ಟವು. ಎಲ್ಲಾ ಬಿಟ್ಟು ಓಡಿ ಹೋಗಲೇ ಎಂದೂ ಅನಿಸಿತು. ಎಂದೂ ಭಾವುಕನಾಗಿ ಅಳದೇ ಇರುವವನ ಕಣ್ಣುಗಳು ಕಣ್ಣೀರ ಕೋಡಿ ಹರಿಸಿದ್ದವು. ಯಾವದೋ ವಿಚಿತ್ರ ಸಂಕಟ. ಸಂಕಟವಲ್ಲ, ಒಂಥರಾ ಭಾವೋದ್ವೇಗ. ಅಳುತ್ತಿರುವುದಾದರೂ ಏಕೆ, ದುಃಖಕ್ಕಾಗಿಯೋ ಸುಖಕ್ಕಾಗಿಯೋ, ಭಯಕ್ಕೋ, ಉನ್ಮಾದಕ್ಕೋ ಒಂದೂ ತೋಚದ ಥರ ಒಂದೇ ಸಮನೆ ಅಳುತ್ತಾ ಹೋದ. ಆಳುತ್ತಾ ಅಳುತ್ತಾ ಹೋದಂತೆ ಏನೇನೋ ವಿಚಿತ್ರ ಸಂಗತಿಗಳು ಗೋಚರಿಸುತ್ತ ಹೋದವು......

ಮನೆಯಲ್ಲೂ ಬರಬರುತ್ತಾ ಇವನ ನಡವಳಿಕೆ ಒಂಥರಾ ವಿಚಿತ್ರವಾಗ ತೊಡಗಿತು. ಕೆಲವೊಮ್ಮೆ ಏನೂ ಸ್ಪಷ್ಟವಾಗಿ ಕಾಣದ ಥರ, ಕೆಲವೊಮ್ಮೆ ಏನೋ ಹೊಸತು ಕಂಡುಕೊಂಡ ಥರ. ಕೆಲವೊಮ್ಮೆ ಎಲ್ಲಾ ಕಳೆದುಕೊಂಡ ಥರ, ಇನ್ನೂ ಕೆಲವೊಮ್ಮೆ ಯಾರಿಗೂ ಇರಲಾರದ್ದನ್ನು ಪಡೆದುಕೊಂಡ ಥರ. ಚಿತ್ರ ವಿಚಿತ್ರವಾದ ಅನುಭವ, ಅನಿಸಿಕೆಗಳು. ಯಾರಲ್ಲಿ ಹೇಳಿಕೊಂಡರೂ ಅವರು ಅರ್ಥ ಮಾಡಿಕೊಳ್ಳಲಾರೆಂಬ ಮುನ್ನೆಣಿಕೆ. ಖುಷಿಯೂ ಹೌದು, ಗೊಂದಲವೂ ಹೌದು. ಹೀಗೆಯೇ ವಿವರಿಸಲಾಗದ ದಿಗಿಲಿನಲ್ಲಿ ಇನ್ನೆರಡು ದಿನ ಉಳಿದ course ಮುಗಿಸಿದ. ಅದರಲ್ಲಿ ಕೊನೆಯ ದಿನ ಅವನು ಈ ಮೊದಲೇ ನೋಡಿದ ವೆಬ್ ಸೈಟ್ ಮಾಹಿತಿ ಪ್ರಕಾರ ಶಿವಗುರು ಅವರ ವಿಶೇಷ ಕಾರ್ಯಕ್ರಮದ ಬಗ್ಗೆ ಪ್ರಕಟಣೆಯನ್ನು ಮಾಡಲಾಯಿತು. ತಕ್ಷಣ ಇವನು ಹೋಗಲೇ ಬೇಕೆಂದು ನಿರ್ಧಾರ ಮಾಡಿದ. 

ಅಂದು ರಾತ್ರಿ ಸುಮಾರು ದಿವಸಗಳಿಂದ ಕೆಲಸ ಮತ್ತು ಯೋಗದ course ನಲ್ಲಿ ಮಗ್ನವಾಗಿದ್ದರಿಂದ ಭೇಟಿಮಾಡಲಿಕ್ಕಾಗದೇ ಇರುವ ತನ್ನ ವಾಡಿಕೆಯ ಗೆಳೆಯನನ್ನು ಕಾಣಲು ಹೋದ. ಬಹಳ ದಿವಸಗಳ ನಂತರ ಸಿಕ್ಕ ಗೆಳೆಯ ಹೇಳದೇ ಕೇಳದೇ ವ್ಹಿಸ್ಕಿಗೆ ಅಣಿವು ಮಾಡತೊಡಗಿದ. ರಾಜೀವನೂ ಬೇಡವೆನ್ನಲಿಲ್ಲ. ಅವನ ತಲೆಯೂ ಮಿತಿಮೀರಿ ದುಡಿದ ಕಾರ್ಯಾಗಾರ ವಾಗಿತ್ತು. ಸ್ವಲ್ಪ ಪುನರುಜ್ಜೀವನ ವ್ಹಿಸ್ಕಿಯ ರೂಪದಲ್ಲಿ ಬೇಕಾಗಿತ್ತು. ಇಬ್ಬರೂ ಗೆಳೆಯರು ಕುಡಿಯತೊಡಗಿದರು. ಒಂದೆರಡು ಪೆಗ್ಗು ಒಳಗೆ ಹೋದ ಮೇಲೆ ಒಳಗಿನ ಮನುಷ್ಯರು ಪ್ರಕಟವಾದರು. ರಾಜೀವ ತುಂಬಾ ಭಾವುಕನಾಗಿ ತನ್ನ ಅಳಲನ್ನು ಹೇಳಿಕೊಂಡ. ಅಷ್ಟರಲ್ಲೇ ತನ್ನ ಮೇಲ್ಮೆಯನ್ನು ತೋರಿಸಿಕೊಳ್ಳಲೂ ಮರೆಯಲಿಲ್ಲ. ತನಗಾದ ಅನುಭವಗಳ ಬಗ್ಗೆ, ತಾನು ಹೊಸದಾಗಿ ಕಂಡುಕೊಂಡ ದಾರ್ಶನಿಕತೆಯ ಬಗ್ಗೆ. ಶಿವಗುರುಗಳ ಪ್ರಕಾಂಡತೆ ಬಗ್ಗೆ ಅವರು ತನ್ನ ಮಾವನೋ ಎನ್ನುವ ರೀತಿ ಹೇಳಿಕೊಳ್ಳಲಾರಂಭಿಸಿದ. ಅವನ ಗೆಳೆಯ ಮನೀಷ್‌ನೂ ಸಾಮಾನ್ಯ ಪ್ರತಿಭೆಯವನಲ್ಲ. ಸಾಕಷ್ಟು ತರ್ಕವನ್ನು ತನ್ನ ವ್ಯಾವಹಾರಿಕ ಜೀವನಶೈಲಿಯಲ್ಲಿ ಕಂಡುಕೊಂಡಿದ್ದ. ಯಾರೇ ಒಂಚೂರು ದಾರ್ಶನಿಕತೆಯ ಬಗ್ಗೆ ಮಾತನಾಡಿದರೂ ಅದಕ್ಕೆ ವಿರುಧ್ಧವಾಗಿ ತನ್ನದೇ ಶೈಲಿಯಲ್ಲಿ ವಾದವನ್ನು ಮಂಡಿಸುತ್ತಿದ್ದ. ರಾಜೀವನ ಕಥೆ ಕೇಳಿ ಒಂಥರಾ ಸೊಕ್ಕಿನ ನಗು ನಗತೊಡಗಿದ. 

"ಯಾರು? ಶಿವಗುರು ಅವರಾ? ಅವರ ಬಗ್ಗೆ ನಾನು ಎನೇನೋ ಓದಿದ್ದೀನಲ್ಲಪ್ಪಾ?"

"ಏನೋ ನೀನು ಓದಿರೋದು? ಅಂಥದ್ದಿಂಥದ್ದೇನಾದರೂ ಇದೆಯಾ? ನಾನೂ ಸುಮಾರಾಗೇ ಅವರ ಬಗ್ಗೆ ಓದಿದ್ದೇನಲ್ಲ? ಅಂಥದ್ದೇನೂ ನನ್ನ ಗಮನಕ್ಕೆ ಬರಲಿಲ್ಲವಲ್ಲ?"

"ಹೌದಾ, ಹಾಗಾದರೆ ಇದನ್ನು ನೀನು ಖಂಡಿತಾ ನೋಡಿರೊಲ್ಲ, ಇಗೊ, ಇದನ್ನ ಸ್ವಲ್ಪ ನೋಡು" ಎಂದು ಮನೀಷ ತನ್ನ ಐ ಪ್ಯಾಡ್ ನಲ್ಲಿ ಒಂದು ವಿಡಿಯೊ ಹಾಕಿ ತೋರಿಸಿದ. ಅದರಲ್ಲಿ ನೋಡಿ ರಾಜೀವ ತನ್ನ ಕಣ್ಣುಗಳನ್ನೇ ನಂಬದಾದ! ಅದೊಂದು ಸಾಕ್ಷ್ಯ ಚಿತ್ರ. ಶಿವಗುರು ಅವರ ಬಗ್ಗೆ ಯಾರೋ ಒಂದಿಬ್ಬರು ಮೂವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು. ಶಿವಗುರು ಅವರಿಗೆ ಮದುವೆಯಾಗಿತ್ತೆಂದಲೂ, ಅವರೂ ಸಹ ಶೋಕಿಯ ಜೀವನ ಸಾಗಿಸಿದ್ದಾರೆಂದಲೂ, ಅವರಿಗೆ ಒಬ್ಬ ಮಗನಿದ್ದಾನೆಂತಲೂ ಇತ್ಯಾದಿ ರಾಜೀವನಿಗೆ ಗೊತ್ತಿದ್ದ ವಿಷಯಗಳೇ ಇದ್ದರೂ ಕೊನೆಯಲೊಂದು ಪ್ರಶ್ನೆ ಹದ್ದಿನ ಹರಿತ ಕೊಕ್ಕು ಚುಚ್ಚಿದ ಹಾಗೆ ಚುಚ್ಚಿತು. "ಶಿವಗುರು ಅವರ ಹೆಂಡತಿ ಚಿಕ್ಕ ವಯಸ್ಸಿನಲ್ಲೇ ಮರಣಕ್ಕೀಡಾಗಿದ್ದು ಆ ಅಕಾಲಿಕ ಮರಣದ ಹಿಂದೆ ಏನಾದರೂ ಶಿವಗುರುಗಳ ಕೈವಾಡವಿದೆಯೆ?" ಎಂಬುದು. 

ಅರೆ ಕ್ಷಣ ಏನೂ ಮಾತನಾಡದೆಹೋದ ರಾಜೀವ. ಮೊದಲಿನ ಎಲ್ಲ ಸಂಗತಿಗಳು ರಾಜೀವನಿಗೆ ಹೆಚ್ಚು ಕಡಿಮೆ ಗೊತ್ತಿದ್ದವು. ಶಿವಗುರು ಅವರು ಮದುವೆ ಯಾಗಿದ್ದು, ಸಂಸಾರಿಯಾಗಿದ್ದುಕೊಂಡೇ ಯೋಗಿಯಾಗಿ ಜನರಿಗೆ ಸಾಧನೆ ಹೇಳಿಕೊಡಲಾರಂಭಿಸಿದ್ದು, ಅವರ ಬಗ್ಗೆ ಆ ಕೋರ್ಸಲ್ಲಿ ನೋಡಿದ ವಿಡಿಯೋದಲ್ಲೇ ಇದ್ದವು. ಇವನಿಗೆ ಕಷ್ಟವೆನಿಸಿದ ವಿಷಯ ಅದಾಗಿರಲಿಲ್ಲ. ಅವರ ಪತ್ನಿಯ ಮರಣದ ಬಗ್ಗೆ ತಾನು ಯೋಚಿಸದೇ ಹೋದ ಒಂದು ಆಯಾಮ ನೆನೆಸಿಕೊಂಡೇ ತಾನು ಮಾಡಿದ ಕೋರ್ಸ ಬಗ್ಗೆ ಮತ್ತು ತನ್ನ ಬಗ್ಗೆಯೇ ಒಂಥರಾ ಜುಗುಪ್ಸೆ ಉಂಟಾಯಿತು. ಇದಕ್ಕೂ ಮುಂಚೆ ತಾನು ನೋಡಿದ ಸ್ವ ಘೋಷಿತ ದೇವ ಮಾನವರ ಜೀವನದಲ್ಲಿ ಒಂದಲ್ಲಾ ಒಂದು ವಾದವಿವಾದ ಇದ್ದೇ ಇತ್ತು. ಯಾರೊ ಲೈಂಗಿಕ ಹಗರಣದಲ್ಲೋ, ಇನ್ನೂ ಕೆಲವರು ದುಡ್ಡು, ರಾಜಕಾರಣಿಗಳ ಸಾಂಗತ್ಯದ ವಿವಾದಗಳಲ್ಲೋ ಸಿಕ್ಕಿಕೊಂಡಿದ್ದರು. ರಾಜಕಾರಣಿಗಳಿಗಿಂತ ಪ್ರಬಲ ಶಕ್ತಿಯ ಆಗಾರವಾದವರೂ ಸುಮಾರು ಜನ ಸ್ವಾಮಿಗಳಿದ್ದೇ ಇದ್ದರು. ಅವೆಲ್ಲರನ್ನು ನೋಡಿಯೇ ರಾಜೀವನಿಗೆ ಆಧ್ಯಾತ್ಮದ ಬಗ್ಗೆ ಸಂಶಯ ಮೂಡಿದ್ದೂ ನಿಜ. ಆದರೂ ಶಿವಗುರುವಿಗೆ ಅವನು ಮಾರು ಹೋದದ್ದು ಅವರ ವಾಕ್ ಪಾಂಡಿತ್ಯಕ್ಕೆ, ಅವರ ಪ್ರೌಢಿಮೆಗೆ. ಇಷ್ಟೆಲ್ಲ ಗೊತ್ತಿರುವವರು ಇಂಥದೆಲ್ಲ ಮಾಡುವ ಅವಕಾಶವೇ ಇಲ್ಲ ಎಂದೆಲ್ಲಾ ಅಂದುಕೊಂಡ. ಆದರೆ ಅಂಥದ್ದೇನಾದರೂ ನಿಜವಾಗಿಯೂ ಅಗಿದ್ದಾದರೆ? ಛೇ, ಎಂಥ ಕೆಲಸ ಮಾಡಿಬಿಟ್ಟೆ ಎಂದು ಹಲುಬಿದ. ವ್ಯಕ್ತಿಯ ತರ್ಕ, ಅವನು ಏನು ಹೇಳುತ್ತಾನೆ ಎನ್ನುವದಕ್ಕಿಂತಲೂ ಆ ವ್ಯಕ್ತಿಯ ಹಿನ್ನೆಲೆ ಅವನು ಹೇಳುವದರ ಪ್ರಭಾವದ ಮೇಲೆಯೇಪರಿಣಾಮ ಬೀಳಿಸುತ್ತದೆ ಎನ್ನುವದು ನಿಜಕ್ಕೂ ನಿರುಪಯೋಗಿ ವಿಡಂಬನೆ.

ಅವನ ಆ ಸ್ಥಿತಿ ನೋಡಿ ಮನೀಷನೇ ಅಲ್ಲಾ, ಯೋಚನೆ ಮಾಡಿ ನೋಡು, ಈಗಿನ ಕಾಲದಲ್ಲಿಯೂ ದೇಹ ಬಿಡುವದು ಅಂತ ಒಂದಿದೆಯೇ? ಯಾರಾದರೂ ಇಛ್ಛಾ ಮರಣ ಹೊಂದುವದು ಸಾಧ್ಯವಿದೆಯೇ? ಅವರ ಹೆಂಡತಿಯೂ ಸಹ ಅವರ ಹಾಗೆ ಯೋಗದಲ್ಲಿ ನಿಸ್ಸೀಮರಿದ್ದರಂತೆ ಅನ್ನುವದೇನೋ ನಿಜವಿರಬಹುದು. ಆದರೆ ಯಾರಿಗೆ ತಾನೆ ಅಂಥ ಚಿಕ್ಕ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಲಿಕ್ಕೆ ಧೈರ್ಯ ಅಥವಾ ಮಾಡುವ ಸಂಪೂರ್ಣ ಜ್ಞಾನ ಇರಲು ಸಾಧ್ಯ? ಏನೋ ಒಂದಿರಬೇಕಲ್ಲವೇ? ಒಬ್ಬರನ್ನು ಹೊಸಕಿ ತಾನು ಮುಂದೆ ಬರಲಿಕ್ಕೆ ಮನುಷ್ಯ ಏನೇನು ಮಾಡುತ್ತಾನೋ ಸ್ವತಃ ಮನುಷ್ಯ ಜನ್ಮಕ್ಕೇ ಅರಿಯದ ಸಂಗತಿ. ಎಂದೆಲ್ಲಾ ಒಳಗೆ ಹಾಕಿದ ಪರಮಾತ್ಮನ ಇರುವಿನ ಬಗೆಗೇ ಸಂಶಯ ತರುವಂತಹ ಮಾತು ಮಾತನಾಡಿದ. ರಾಜೀವನಿಗೆ ಇಲ್ಲದ ಗೊಂದಲ ಶುರುವಾಯಿತು. ಹಿಡಿದಿದ್ದನ್ನು ಸುಮ್ಮನೆ ಬಿಡುವ ಜಾಯಮಾನದವನಲ್ಲ ಅವನು. ಇಂಥದ್ದೇನೊ ಮಾಡಿ ಸುಮ್ಮನೇ ತನಗೆ ತಾನೇ ನಗೆಪಾಟಲಿಗೀಡಾದೆನಲ್ಲ ಎಂದು ಯೋಚಿಸತೊಡಗಿದ. ತನ್ನ ಮೇಲೆ ಕನಿಕರ, ಶಿವಗುರುಗಳ ಮೇಲೆ ಸಿಟ್ಟು, ಎರಡೂ ಉಂಟಾದವು. ಈ ಗದ್ದಲದಲ್ಲಿ ಪರಮಾತ್ಮ ಸ್ವಲ್ಪ ಜಾಸ್ತಿಯೇ ಒಳಗಡೆ ಹೋಗಿದ್ದು ಅವನ ಗಮನಕ್ಕೆ ಬಂದಿದ್ದು ಮಾರನೆ ದಿನ ಎಚ್ಚೆತ್ತಾಗಲೇ. ತಲೆ ಎನ್ನುವದು ದೇವಸ್ಥಾನದಲ್ಲಿ ಬಾರಿಸುವ ಜಾಗಟೆಯ ಹೊಳಲಾಗಿತ್ತು.
ಆ ಪೂರ್ತಿ ದಿವಸ ತನಗಾದ ಅನುಭವಗಳ ಬಗ್ಗೆ ಯೋಚಿಸುವದರಲ್ಲೇ ಹೋಯಿತು. ತಾನು ಅಲ್ಲಿ ಕಲಿತ ವಿಶಿಷ್ಠ ಸಂಗತಿಗಳು ಒಂದು ಹೊಸ ಅರಿವು ಮೂಡಿಸಿದ್ದೇನೋ ನಿಜ. ವ್ಯಕ್ತಿ ತನ್ನನ್ನು ತನಗಿಂತ ಹೊರಗಿಟ್ಟು ನೋಡಿದಾಗಲೇ ತಾನು ಬೇರೆಯವರನ್ನು ಯಾವ ದೃಷ್ಟಿಯಿಂದ ನೋಡುವನೋ ಹಾಗೆ ತಾರತಮ್ಯ ಇರದೆ ನೋಡಲು ಸಾಧ್ಯ. ಬೇರೆಯವರ blind spot ಗುರುತಿಸುವದು ಎಷ್ಟು ಸುಲಭವೋ ತನ್ನದನ್ನು ಕಂಡುಹಿಡಿಯುವದು ಅಷ್ಟೇ ಕಷ್ಟ. ಯಾವುದೇ ಸಂಗತಿ ಜೀವಕ್ಕೆ ಕುತ್ತು ಬರುವಷ್ಟು ಗಂಭೀರವಾಗಿಲ್ಲದಿದ್ದರೂ ನಾವು ಮಾತ್ರ ಅದರ ಮೇಲೆಯೇ ನಮ್ಮ ಜೀವನ ನಿಂತಿದೆ ಎನ್ನುವಷ್ಟು ಗಂಭೀರವಾಗಿ ಯೋಚಿಸುವದು, ಸಂಗತಿಗಳು ನಮಗೆ ಬೇಕಾದ ಹಾಗೆ ನಡೆಯದಿದ್ದಾಗ ಮಾತ್ರ. ಇನ್ನೂ ಹಲವಾರು ಸಂಗತಿಗಳು ಧುತ್ತೆಂದು ಕಣ್ಣ ಮುಂದೆ ಬಂದು ಮಾಯವಾಗುತ್ತಿದ್ದವು. ಇವೆಲ್ಲ ಅನುಭೂತಿಯ ಜೊತೆಗೆ ನಾನೇನಾದರೂ ಕಳ್ಳ ಸನ್ಯಾಸಿಗೆ ಮೋಸ ಹೋಗುತ್ತಿದ್ದೇನೆಯೇ ಎಂಬ ಸಂಶಯವೂ ಸುಳಿಯದೇ ಇರಲಿಲ್ಲ.ಆದರೆ ಅವನಿಗಾದ ಆಶ್ಚರ್ಯದ ಸಂಗತಿಯೆಂದರೆ ತಾನು ಮಾಡಿದ ಕೋರ್ಸಗಾಗಿ ಬರೀ ಒಂದು ಸಾವಿರ ಮಾತ್ರ ಖರ್ಚು ಮಾಡಿದ್ದ. ಏನು ಬರುತ್ತೆ ಈ ಕಾಲದಲ್ಲಿ? ದುಡ್ಡು ಮಾಡುವ ಸಂಸ್ಥೆಯೇನಾದರೂ ಆಗಿದ್ದಿದ್ದಲ್ಲಿ ಇಂಥ ಒಂದು ವಾರದ ಕೋರ್ಸಗೇ ಸುಮಾರು ಫೀಜು ಹೇರಬಹುದಿತ್ತಲ್ಲಾ? ಬರೀ ಶ್ರೀಮಂತರು ಮಾಡುವಂಥ ಧ್ಯಾನ ಸಂಕೂಟಗಳಿಗೇನು ಕಮ್ಮಿಯಿಲ್ಲ ಇಲ್ಲಿ.

ಇವೆಲ್ಲಾ ಪ್ರಶ್ನೆಗಳಿಗೆ ಪರಿಹಾರ ಸಿಗಬೇಕೆಂದರೆ ತನ್ನ ಕೋರ್ಸ ಮುಗಿದಇನ್ನೆರಡು ದಿನ ಬಿಟ್ಟು ಶುರುವಾಗಬೇಕಾಗಿದ್ದ ಶಿವಗುರು ಅವರು ಸ್ವತಃ ನಡೆಸಿಕೊಡಲಿದ್ದ ಒಂದು ಅಪರೂಪದ ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ನಿಶ್ಚಯಸಿದ್ದ. ಅದಕ್ಕೂ ಮುಂಗಡವಾಗಿ ಜಾಗೆ ಕಾಯ್ದಿಡಬೇಕಾಗಿತ್ತು. ಆದರೆ ಇವನ ನಿರ್ಣಯ ಧಿಡೀರನೇ ಆಗಿದ್ದರಿಂದ ತನ್ನಷ್ಟೆ ಧಿಡೀರ್ ಆಗಿ ಯೋಚಿಸಿ ತಯಾರಾಗಿದ್ದ ಇನ್ನೆರಡು ಜನರನ್ನು ಕೂಡಿಸಿಕೊಂಡು ತನ್ನ ಕಾರ್ ಒಡಿಸಿಕೊಂಡು ಹೋಗಲು ಅಣಿವಾದ. ಸುಮಾರು ಎಂಟು ತಾಸಿನ ಕಾರಿನ ಹಾದಿ ಅದು. ರಾತ್ರಿ ಇಡೀ ತಾನು, ಇನ್ನೊಬ್ಬನ ಜೊತೆ ಕಾರು ಓಡಿಸಿಕೊಂಡು ಶಿವಗುರುಗಳ ಆಶ್ರಮವಿರುವ ಊರಿಗೆ ಹೋದ. 

ಮರುದಿನ ಬೆಳಿಗ್ಗೆ ಆಶ್ರಮದಲ್ಲಿ ಕಾಲಿಡುತ್ತಿದ್ದಂತೆ ಅತೀ ಸುಂದರ ದೃಶ್ಯವೊಂದನ್ನು ನೋಡಿದ. ಆಹ್ಲಾದಕರ ಮುಂಜಾವು ಅದು, ಚುಮು ಚುಮು ಛಳಿ, ಹಿತವಾದ ನೆಲದ ವಾಸನೆ, ಪಕ್ಷಿಗಳ ಕಲರವ, ಎಲ್ಲೋ ಒಂದೆಡೆ ನವಿಲುಗಳ ಕೂಗು, ಎಷ್ಟೇ ಜುಗುಪ್ಸೆಗೊಂಡವನೂ ಜೀವನದ ಬಗ್ಗೆ ಪುಲಕಿತವಾಗುವಂಥ ವಾತಾವರಣವದು. ಪರ್ವತಗಳ ಅಡಿ ಇದ್ದ ಆಶ್ರಮದ ನೋಟವೇ ಒಂದು ದೈವೀ ಅನುಭವವಾಗಿತ್ತು. ಕಣ್ಣೆತ್ತಿ ಸಾಲು ಸಾಲಾಗಿ ಮಲ್ಲ ಯೋಧ್ಧರ ಹಾಗೆ ನಿಂತು ತಮ್ಮ ಸುಂದರ ಅಂಗಸೌಷ್ಠವ ತೋರಿಸುತ್ತಿರುವ ಪರ್ವತಗಳತ್ತ ನೋಡಿದ. ಅಂಥ ಅದ್ಭುತ ಪರ್ವತಗಳ ಶ್ರೇಣಿಯನ್ನು ಮುತ್ತಿಕ್ಕಲು ಮೋಡಗಳು ಸ್ಪರ್ಧಿಸುವ ರೀತಿ ತೋರುತ್ತಿತ್ತು. ನಂತರ ಮೋಡಗಳು ಸಾಲಾಗಿ ಎಲ್ಲಕ್ಕಿಂತ ಎತ್ತರವಿರುವ ಪರ್ವತದ ಸುತ್ತ ಸುತ್ತ ತೊಡಗಿದವು. ಅಂಥ ರಮಣೀಯ ದೃಶ್ಯ ರಾಜೀವನು ಪ್ರತ್ಯಕ್ಷವಲ್ಲ, ಟೀವಿಯಲ್ಲಿ ಕೂಡ ನೋಡಿರಲಿಲ್ಲ. ರಾತ್ರಿಯಿಡೀ ಕಾರು ನಡೆಸಿದ ಆಯಾಸ ಆವಿಯಾಗಿ ಹೋದಂತೆ ಅನಿಸಿತು. ತಾನು ಬಂದ ಉದ್ದೇಶವನ್ನೇ ಒಂದು ಘಳಿಗೆ ಮರೆತು ಎಲ್ಲರಿಗೆ ತಾನು ನೋಡಿ ಆನಂದಿಸುತ್ತಿದ್ದ ದೃಶ್ಯ ಬೆರಳುಮಾಡಿ ತೋರಿಸಿದ. 

ರಿಜಿಸ್ಟರಿನಲ್ಲಿ ತನ್ನ ಹೆಸರು ದಾಖಲಿಸಿ ಎಲ್ಲರ ಜೊತೆಗೆ ಒಳಗೆ ನಡೆದ. ಸಾವಿರಾರು ಜನರು ನೆರೆದಿದ್ದರಿಂದ, ನಿಧಾನವಾಗಿ ಶಿವಗುರುಗಳ ಪ್ರಭಾ ರಾಜೀವನಿಗೆ ಅರಿವಾಗತೊಡಗಿತ್ತು. ತುಂಬಾ ದೊಡ್ಡದಾದ ಆಶ್ರಮವದು, ಇಷ್ಟೆಲ್ಲಾ ಜನರಿಗೆ ಅತ್ಯಂತ ಸುಲಭವಾಗಿ ಮತ್ತು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿಯ ಅನಾನುಕೂಲತೆ, ಅಸಹ್ಯಕರವಾದ ಅನುಭವ ಆಗಲಿಲ್ಲ. ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡುವ ಕಾರ್ಯಕರ್ತರು ಅವನಿಗಾಗುವ ಒಳ್ಳೆಯ ಅನುಭವಕ್ಕೆ ನೆರವು ಮಾಡಿಕೊಡುತ್ತಿದ್ದರು. ತಣ್ಣೀರ ಸ್ನಾನವಾದರೂ ಹಿತವಾಗಿತ್ತು. ಯಾವಗಲೂ ತನ್ನದೇ ಮಾತು ಕೇಳುವಂತೆ ಒತ್ತಾಯಿಸುವ ದೇಹದಮೇಲೆ ಸೇಡು ತೀರಿಸಿಕೊಳ್ಳುವ ಮುದ್ದಾದ ಖುಷಿ ಅವನದು. 

ಸ್ನಾನ, ತಿಂಡಿಯಾದನಂತರ ಶಿವಗುರುಗಳ ಸಾನಿಧ್ಯದಲ್ಲಿ ಎರಡು ದಿನಗಳ ಕಾರ್ಯಕ್ರಮ ಶುರುವಾಯಿತು. ಮೊದ ಮೊದಲು ಸರಿಯಾಗಿ ಸ್ಪೀಕರ್‌ಗಳಲ್ಲಿ ಕೇಳದ್ದಕ್ಕೋ, ತನಗಾದ ಆಯಾಸ ಮೈಯಲ್ಲಾವರಿಸದ್ದಕ್ಕೋ ಏನೋ, ಶಿವಗುರುಗಳು ಮಾತುಗಳಿಷ್ಟವಾದರೂ ಜೊಂಪು ಹತ್ತ ತೊಡಗಿತು. ಆದರೆ ನಂತರ, ಬೇರೆ ಬೇರೆ ರೀತಿಯ ಕಸರತ್ತುಗಳು, ಮೋಜಿನ ಆಟಗಳು, ಶಿವಗುರುಗಳ ವಿನೋದದ ಆಖ್ಯಾಯಿಕೆಗಳು ಎಲ್ಲ ಒಟ್ಟಿನಲ್ಲಿ ಆ ಕಾರ್ಯಕ್ರಮದ ಬಗೆಗಿನ ಬೇಸರವನ್ನು ಹೋಗಿಸಿದ್ದವು. ವಿರಾಮದ ಸಮಯಗಳಲ್ಲಿ ಅಲ್ಲಿರುವ ಗುಂಪು ಹಾಡುವ ಹಾಡುಗಳು, ಮಂತ್ರಗಳ ಹಾಗೆ ಕೇಳಿಸುವ ಪಠನಗಳು, ಇಡೀ ವಾತಾವರಣವನ್ನು ಮೈ ನವಿರೇಳಿಸುವಂತೆ ಮಾಡಿದ್ದವು. ಮಧ್ಯಾಹ್ನ ರಾಜೀವ ತನ್ನ ಸ್ನೇಹಿತರೊಂದಿಗೆ ಅಲ್ಲಿರುವ ಕೊಂಡದಲ್ಲಿ ಮುಣುಗಿ ಎದ್ದು, ಶಿವನ ದೇವಸ್ಥಾನಕ್ಕೂ ಭೇಟಿಯಿತ್ತು ಬಂದ. ಅಲ್ಲಿಯೂ ಕೂಡ ರಾಜೀವನಿಗೆ ಹೇಳಲು ಅಸಾಧ್ಯವಾದ ಮೈ ಪುಳಕವಾಯಿತು. ದೇವರನ್ನು ನಂಬದ, ಈ ಜಗತ್ತಿನಲ್ಲಿ ತನಗೆ ಗೊತ್ತಿರುವ ಸಂಗತಿಗಳಿಗಿಂತ ಗೊತ್ತಿರದ ಸಂಗತಿಗಳೇ ಜಾಸ್ತಿ ಇವೆಯೆಂಬುದು ಅವನಿಗೆ ಮನದಟ್ಟಾಗಿದ್ದು ಆ ದೇವಸ್ಥಾನಕ್ಕೆ ಭೇಟಿ ಕೊಟ್ಟಮೇಲೆಯೇ. ಅರ್ಧ ದಿನ ಕಳೆದ ನಂತರ ಶಿವಗುರುಗಳು ಹೇಳಿದ ಪ್ರಕಾರ ನಾಲ್ಕು ತಾಸುಗಳವರೆಗೆ ಯಾರ ಜೊತೆಯೂ ಮಾತನಾಡದೆ ಮೌನವಾಗಿ ಕಳೆದ. ಇಷ್ಟು ಹೊತ್ತು ಅವನು ಮೌನವಾಗಿದ್ದು ಮಾತು ಬಂದ ಮೇಲೆ ಅಥವಾ ಮಲಗದಾಗ, ಮೊದಲ ಸಲ ಅನಿಸುತ್ತೆ. ಮಾತು ಬೆಳ್ಳಿ, ಮೌನ ಬಂಗಾರ ಎನ್ನುವದು ಬರೀ ಗಾದೆಮಾತಲ್ಲ, ಆ ಗಾದೆ ಮಾತಿಗಿಂತ ದೊಡ್ಡದು ಎಂಬುದು ಅವನಿಗೆ ಅರಿವಾಯಿತು. ಮನುಷ್ಯ ಮಾತನಾಡದೆ ಇದ್ದಾಗ ಬರು ಯೋಚನೆಗಳು ಮತ್ತು ಆ ಯೋಚನೆಗಳಿಗೆ ಹೊರಗೆಡಕದೆ ಹೋದಾಗ ಆಗುವ ಯಾತನೆಗಳು ಎಲ್ಲವೂ ತನ್ನ ಒಳಗಿನಿಂದ ಬಂದದ್ದೇ ಆದರೂ ಹೊಸವೆನಿಸಿದವು. ಮನುಷ್ಯ ತನ್ನನ್ನು ತಾನೇ ಅರಿತುಕೊಳ್ಳ ಬಯಸಿದರೆ ಮೊಟ್ಟ ಮೊದಲ ಕೆಲಸ ಮಾಡಬೇಕಾಗಿರುವದು - ಮೌನದಿಂದ ಇರುವದು ಎಂದು ಮನದಲ್ಲೇ ಅಂದುಕೊಂಡ. ಹೆಂಡತಿ, ಮಕ್ಕಳು, ಕೆಲಸ, ಗ್ರಾಹಕರು, ಸ್ನೇಹಿತರು ಇತ್ಯಾದಿ ಇತ್ಯಾದಿಯಾಗಿ ದೂರಲಿಕ್ಕೆ ನೂರಾ ಎಂಟು ನೆಪ ಹುಡುಕುವಾತನಿಗೆ ಅಂದು ಯಾರಾದರು ಮುಂದೆ ಬರಬಾರದೆ ಒಂಚೂರಾದರೂ ಮಾತನಾಡಲಿಕ್ಕೆ? ಎಂದೆನಿಸಿತು. ಆದರೆ ಬರುತ್ತಾ ಬರುತ್ತಾ ಆ ಮೌನದಲ್ಲಿನ ನೀರವತೆಯೇ ಆಪ್ತವಾಗತೊಡಗಿತು. ಜಗತ್ತಿನ ಬಗ್ಗೆ ವೈರಾಗ್ಯ ಬರತೊಡಗಿತು. ಮನುಷ್ಯರ ಹೊರತಾಗಿ ಎಷ್ಟೆಲ್ಲ ಜೀವಜಂತುಗಳು ಮಾತನಾಡಿಯೇ ಬದುಕುವದು? ಎಷ್ಟು ಚೆನ್ನಾಗಿ ಅವು ತಮ್ಮ ದಿನ ನಿತ್ಯದ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಹೋಗುತ್ತವೆ? ಹೌದು, ಮಾತು - ಮನಸ್ಸು ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಬೇರೆಯಾಗಿಸುವವೇನೋ ನಿಜ, ಆದರೆ ಅವೇ ಅವನ ದುಃಖಕ್ಕೂ ಮೂಲವಾಗುವವಲ್ಲವೆ? ಮಾರ್ಕೆಟಿಂಗ್ನಲ್ಲಿದ್ದ ತನ್ನ ವಾಕ್ಷಮತೆಗೆ ಬೀಗುತ್ತಿದ್ದ ರಾಜೀವನಿಗೆ ಮಾತೆಂದರೇ ವಾಕರಿಕೆ ಬರುವಂತಾಯಿತು. ಪುನಃ ಆ ದಿನದ ಬಾಕಿ ಕಾರ್ಯಕ್ರಮ ಶುರುವಾಗತೊಡಗಿದ ನಂತರ ಅವನ ತಲೆ ವಿಚಾರಗಳಿಂದ ಪೂರ್ತಿ ತುಂಬಿ ಹೋಗಿ ಒಂದು ಸಲ ಪೂರ್ತಿಯಾಗಿ ವಿಚಾರರಹಿತವಾಗಿಯೂ ಹೋಯಿತು. ಶಿವಗುರುಗಳು ಹೇಳಿಕೊಟ್ಟ ಯೋಗ, ಧ್ಯಾನವನ್ನು ಮಾಡಿದ ನಂತರವಂತೂ, ಶಿವಗುರುಗಳ ಕೊಂಚ ಧ್ವನಿ ಕೇಳುವದೇ ತಡ, ಹುಚ್ಚು ಹಿಡಿದಂತೆ ಭಾವಾವೇಶದಿಂದ ಚೀರಾಡುವ ಇತರ ಶಿಷ್ಯವೃಂದವನ್ನು ನೋಡಿ ರಾಜೀವನಿಗೆ ಅಮಲಿನ ಹುಚ್ಚು ಹಿಡಿಯುವದೊಂದೇ ಬಾಕಿ. ಆ ರಾತ್ರಿ ವಿಪರೀತ ದಣಿವು ಆಗಿದ್ದರೂ ಬಹಳ ಹೊತ್ತಿನವರೆಗೆ ರಾಜೀವನಿಗೆ ನಿದ್ರೆ ಬರಲಿಲ್ಲ. ಮರುದಿನ ಬೆಳಿಗ್ಗೆ ಬೇಗ ಎದ್ದು ತಣ್ಣೀರ ಸ್ನಾನ ಮಾಡಿ ಮುಂದಿನ ದೊಡ್ಡ ಮೈದಾನದಲ್ಲಿ ನೆರೆಯಬೇಕೆಂದು ಪ್ರಕಟಣೆ ಆಗಲೇ ಆಗಿತ್ತು. ಚಳಿಯಲ್ಲಿ ತಣ್ಣೀರ ಸ್ನಾನವಿರಲಿ, ಎದ್ದೇಳುವದೂ ಇಲ್ಲ, ಯಾರು ಬಂದು ಎಬ್ಬಿಸುತ್ತಾರೋ ನೋಡೋಣ ಎಂದು ಬಲವಂತವಾಗಿ ಕಣ್ಣು ಮುಚ್ಚಿ ಮಲಗಿದ. ಹೊತ್ತು ಆಗಲೇ ಮಧ್ಯರಾತ್ರಿ. 

ಮರುದಿನ ಬೆಳಿಗ್ಗೆ, ಸುಮಾರು ನಾಲ್ಕಾಗಿರಬಹುದು, ಜನರ ಕಲರವದಿಂದ ಯಾಂತ್ರಿಕವಾಗಿ ಎಚ್ಚೆತ್ತುಕೊಂಡು ಸ್ನಾನ ಮಾಡುವದಿಲ್ಲ ಎಂದು ಸ್ವಗತ ಘೋಷಿಸಿಕೊಂಡಿದ್ದನ್ನು ಮರೆತು ಪೂರ್ತಿ ಹುಮ್ಮಸ್ಸಿನಿಂದ ತಣ್ಣೀರ ಸ್ನಾನ ಮುಗಿಸಿ, ಅಲ್ಲಿಯ ಶಿವಗುರುಗಳ ಕೆಲವು ನುರಿತ ಶಿಷ್ಯರು ಹೇಳಿ ಕೊಡುವ ಸೂರ‍್ಯ ನಮಸ್ಕಾರ ಇತ್ಯಾದಿ ಯೋಗಗಳನ್ನು ಪ್ರಾಮಾಣಿಕನಾಗಿ ಮುಗಿಸಿದ. ಒಂಬತ್ತರ ನಂತರ ಶಿವಗುರುಗಳ ಎರಡನೇ ದಿನದ ಕಾರ್ಯಕ್ರಮ ಶುರುವಾಯಿತು. ನಿನ್ನೆಗಿಂತಲೂ ಇವತ್ತಿನ ಹುಮ್ಮಸ್ಸು ಇಮ್ಮಡಿಯಾಗಿತ್ತು ಅಲ್ಲಿ ನೆರೆದ ಎಲ್ಲರಿಗೂ. ವಾತವರಣದಲ್ಲಿ ಒಂಥರಾ ಖುಷಿಯ ಅಲೆಯೇ ಎದ್ದಿತ್ತು. ಆ ಅಲೆಯಲ್ಲಿ ಕೊಚ್ಚಿ ಹೋಗುವದನ್ನೇ ಕಾಯುತ್ತಿರುವಂತೆ ರಾಜೀವ ಕಂಡುಬಂದ. 

"ಎಲ್ಲರೂ ಐದು ಐದು ನಿಮಿಷ ತೆಗೆದುಕೊಳ್ಳಿ, ಹಲವು ಸಣ್ಣ ಗುಂಪುಗಳನ್ನು ಮಾಡಿಕೊಂಡು ಆ ಐದು ನಿಮಿಷಗಳಲ್ಲಿ ನೀವು ತುಂಬಾ ಖುಷಿಯಾಗಿದ್ದಾಗ ಏನು ಮಾಡಬಯಸುತ್ತೀರೊ ಅದನ್ನು ಮಾಡಿ. ಆ ಐದು ನಿಮಿಷಗಳ ನಂತರ ನೀವು ಜೀವಿಸುವದೇ ಇಲ್ಲ, ಅವು ನಿಮ್ಮ ಕೊನೆಯ ಐದು ನಿಮಿಷಗಳು ಎನ್ನುವ ಥರ ಖುಷಿಯಾಗಿ ಏನಾದರೂ ಗುಣುಗುಣಿಸಿ, ಕುಣಿಯಿರಿ ಅಥವಾ ಕುಪ್ಪಳಿಸಿರಿ" ಎಂದರು ಶಿವಗುರು. ರಾಜೀವ ತಾನು ಶುರು ಹಚ್ಚುವ ಮುನ್ನ ಇತರರನ್ನು ಗಮನಿಸಿದ. ಕೆಲವರು ಖುಷಿಯಲ್ಲಿರಲಿಕ್ಕೂ ಸಂಕೋಚಪಟ್ಟುಕೊಳ್ಳುತ್ತಿದ್ದರು. ಇನ್ನು ಕೆಲವರು ಖುಷಿ ಎಂದರೇನೆ ಗೊತ್ತಿಲ್ಲರದವರಂತೆ ಮುಖ ಕಿವಿಚಿ ಕಾಟಾಚಾರಕ್ಕೆ ಎನ್ನುವರ ಹಾಗೆ ಏನೋ ಒಚಿದು ಗುಣುಗುಣಿಸುತ್ತಿದ್ದರು. ಆವಾಗವನಿಗೆ ಅನ್ನಿಸಿತು, ಜೀವನದಲ್ಲಿ ನಾವೆಲ್ಲ ಇತರರ ಖುಷಿಗಾಗಿಯೋ ಇಲ್ಲಾ ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳುವದೇ ಇಲ್ಲ ಎನ್ನುವ ಸೆಲ್ಫ್ ಪಿಟಿ ಯಿಂದಲೋ ಅಥವಾ ಗಂಭೀರವಾಗಿರುವದೇ ಪ್ರಬುಧ್ಧತೆಯ ಲಕ್ಷಣವೋ ಎನ್ನುವಂತೆ ಯಾವಾಗಲೂ ಭೂಮಿಯ ಭಾರ ತಲೆಮೇಲೆಯೇ ಹೊತ್ತುಕೊಂದು ತಿರುಗುತ್ತಿರುತ್ತೇವೆ. ಯಾವಾಗಲಾದರೂ ನಮ್ಮ ಒಳಗಿನ ಮಗು ಹೊರಗೆ ಬರಲೆತ್ನಿಸಿ ಅಪ್ರಯತ್ನವಾಗಿ ನಗು ಬಂತೋ ಅಥವಾ ಹಾಗೇ ಏನೋ ಒಂದಕ್ಕೆ ಇಷ್ಟಪಟ್ಟು ನಕ್ಕೆವೋ ಎಂದುಕೊಳ್ಳಿ, ಆ ಸುಖ ಬಾಳಿಕೆ ಬರುವುದರೊಳಗಾಗಿ ಬಲವಂತದ ಪ್ರಜ್ಞೆ ತರಿಸಿಕೊಂಡು ನಮ್ಮಲ್ಲಿ ಪುನಃ ಗಂಭೀರವಾಗುವವರೇ ಜಾಸ್ತಿ. ರಾಜೀವನು ಇದೆಲ್ಲಾ ಅರಿತುಕೊಂಡು ಮತ್ತು ನಿಜವಾಗಿಯೂ ಜಗತ್ತನ್ನೇ ಪಕ್ಕಕ್ಕಿಡಬಯಸಿ ಕಣ್ಣುಮುಚ್ಚಿ ತನ್ನ ಅಚ್ಚುಮೆಚ್ಚಿನ ಹಾಡೊಂದನ್ನು ವ್ಹಿಸಲ್ ಮಾಡತೊಡಗಿದ. ಉಳಿದವರು ತಾವು ಮಾಡುತ್ತಿದ್ದುದನ್ನು ನಿಲ್ಲಿಸಿ ಇವನತ್ತ ಅವಕ್ಕಾಗಿ ನೋಡಿ ಅವನು ಸಿಳ್ಳೆ ಹಾಕುವದನ್ನು ಕೇಳತೊಡಗಿದರು. ರಾಜೀವ ನಿಜಕ್ಕೂ ಮೆಚ್ಚುವಂತಹ ರೀತಿ ಸೀಟಿ ಹೊಡೆಯುತ್ತಿದ್ದ. ಅವತ್ತಿನ ದಿನವಂತೂ ಅವನ ಭಾವನೆಗೆ ಮೇರೆ ಇಲ್ಲದಂತಾಗಿ ಅವನ್ನು ನೋಡಿ ನಿಜವಾದ ಆನಂದವೆಂದರೆ ಇದೇಯೇನೋ ಎನಿಸುತ್ತಿತ್ತು. ಅದನ್ನು ಸ್ವತಃ ರಾಜೀವನೂ ಗಮನಿಸಿದ. 

ಅನಂತರ ಕೆಲವು ಸಂವಾದಗಳಾದ ಮೇಲೆ, ಕೊನೆಯದಾಗಿ ಸಂಗೀತವನ್ನು ಹಾಕಿ ಶಿವಗುರುಗಳೂ ಸೇರಿದಂತೆ ಎಲ್ಲರೂ ಆನಂದದಲ್ಲಿ ಕುಣಿಯತೊಡಗಿದರು. ಶಿವಗುರುಗಳು ಜಗತ್ತನ್ನು ಮರೆತು ನಿಮ್ಮೊಳಗೇ ನೀವಾಗಿ ನೃತ್ಯದಲ್ಲಿ ತಲ್ಲೀನರಾಗಿ ಎಂದು ಹೇಳಿದ್ದರಿಂದ ಬರೀ ಸಂಗೀತದ ಕಡೆಗೇ ಗಮನ ಹರಿಸಿ ಅದರ ಜೊತೆಗೆ ತನ್ನಿಂತಾನೇ ಓಲಾಡುವ ತನ್ನ ದೇಹವನ್ನೂ ಗಮನಿಸುತ್ತಾ ನಿಧಾನವಾಗಿ ಕುಣಿಯತೊಡಗಿದ. ಬರಬರುತ್ತಾ ಅವನಿಗೆ ಸುತ್ತಲಿನ ಪರಿವೆಯೂ ಇಲ್ಲದಂತಾಯಿತು. ಅಷ್ಟು ದೊಡ್ಡ ಸಭಾಂಗಣದಲ್ಲಿ ತಾನೇ ಒಬ್ಬನೇ ಇರುವೆನೆಂದೆನಿಸಿತು. ಅದಾದನಂತರ ಅದೂ ಮರೆತುಹೋಗಿ ತಾನ್ಯಾರೋ. ತಾನೇಲ್ಲಿರುವೆನೋ ಎಂಬುದೇ ಗಮನಕ್ಕೆ ಬರಲಿಲ್ಲ. ಆದರೆ ಮನಸ್ಸು ಸುಪ್ತವಾಗಿ ಮತ್ತು ಪ್ರಜ್ಞಾಪೂರಕವಾಗಿ ಕೆಲಸ ಮಾಡುತ್ತಿತ್ತು. ಅಲ್ಲಿ ಕುಣಿಯುತ್ತಿರುವ ಎಲ್ಲ ಜನರ ಕೇಕೆ, ಸಂತಸದ ಆಕ್ರಂದನ ಎಲ್ಲಾ ಕೇಳುತ್ತಿತ್ತು. 

ಥಟ್ಟನೆ ತಾನು ಅಲ್ಲಿ ಬಂದ ಸಂದರ್ಭ ನೆನಪಾಯಿತು!! ತಾನೊಬ್ಬ ತಾರ್ಕಿಕ ವ್ಯಕ್ತಿ. ತನಗೆಲ್ಲ ಇಂಥ ಹಿಪ್ನಾಟಿಸಂ ಥರ ಇರುವದೆಲ್ಲ ಶೋಭೆ ತರುವದಿಲ್ಲ, ತಾನು ಶಿವಗುರುಗಳನ್ನು ಮೊದಲು ನಂಬಿ ನಂತರ ಅವರ ಬಗ್ಗೆ ತನ್ನ ಗೆಳೆಯ ಮನೀಷ ಅವರ ವಿರುಧ್ಧವಾಗಿ ಹೇಳಿದ್ದನ್ನು ಖಾತ್ರಿ ಪಡಿಸಲು ಬಂದವನು. ಇದೇನು ಸಮ್ಮೋಹನಕ್ಕೆ ಒಳಗಾದವರ ರೀತಿ ಆಡುತ್ತಿದ್ದೇನೆ ಎಂದುಕೊಂಡ. ಎಲ್ಲರೂ ಕಣ್ಣು ಮುಚ್ಚಿ ಕುಣಿಯುತ್ತಿದ್ದರು. ರಾಜೀವ ಮೆಲ್ಲನೆ ಕಣ್ಣು ತೆಗದು ಇತರರನ್ನು ಮತ್ತೊಮ್ಮೆ ನೋಡಹತ್ತಿದ. ಎಷ್ಟೊಂದು ಸಂತೋಷದ ಅಲೆ ಇತ್ತು ಅಲ್ಲಿ! ಜೀವನದ ಬೇರೆ ಬೇರೆ ಕ್ಷೇತ್ರಗಳಿಂದ ಬಂದ, ಬೇರೆ ಬೇರೆ ಕೆಲಸ, ಹುದ್ದೆ ಗಳಲ್ಲಿದ್ದ ಜನರು, ವಯಸ್ಸಾದವರು, ಹೆಂಗಸರು, ಯುವಕ ಯುವತಿಯರು ಎಲ್ಲರೂ ತಮ್ಮ ತಮ್ಮ ಒತ್ತಡ, ದುಃಖ ಇತ್ಯಾದಿಗಳನ್ನು ಮರೆತು ಕುಣಿಯುತ್ತಿದ್ದರು. ಆ ಕುಣಿತದಲ್ಲಿ ನಲಿವಿತ್ತು, ಮರೆವಿತ್ತು, ಅರಿವು ಇತ್ತು, ಬರೀ ಜಗತ್ತು ಇರಲಿಲ್ಲ, ಅಂತರಿಕ್ಷವಿತ್ತು! ಇಷ್ಟೆಲ್ಲಾ ಜನರಗೆ ಷರತ್ತು ರಹಿತ ಪರಮಸುಖ ಕೊಟ್ಟಿರುವದರ ಹಿಂದೆ ಶಿವಗುರುಗಳ ಸ್ವಾರ್ಥ ಏನಾದರೂ ಇದ್ದೀತು? ತನ್ನಂಥ ಇಲ್ಲಾ ತನಗಿಂತಲೂ ಜಾಣ ಜಾಣೆಯರಿರುವ ಇಂಥ ದೊಡ್ಡ ಸಮಾವೇಷದಲ್ಲಿ ಒಬ್ಬರೋ ಇಬ್ಬರೋ ಮರಳು ಹೋದರೆ ಸರಿ, ಎಲ್ಲಕ್ಕೆಲ್ಲಾ (ತನ್ನನ್ನೂ ಸೇರಿ) ಹೋಗುವದು ಹೇಗೆ ಸಾಧ್ಯ? ಇದ್ದಕ್ಕಿದ್ದಂತೆ ಇವನ್ನೆಲ್ಲಾ ನೋಡಿ ಧೀರ್ಘ ಟ್ರಾನ್ಸ್ನಲ್ಲಿದ್ದ ರಾಜೀವನ ಕಣ್ಣಲ್ಲಿ ಬಳಬಳನೆ ಕಣ್ಣೀರು ಹರಿಯತೊಡಗಿದವು. ಅದೇನು ಆನಂದವೋ, ಉನ್ಮಾದವೋ, ದುಃಖವೋ ತಿಳಿಯದೆ ಹಾಗೆ ಸುಮಾರು ಹೊತ್ತು ಅಳುತ್ತಲೇ ಹೋದ. ಇವನ ಕಡೆ ಯಾರಿಗೂ ಗಮನವಿರಲಿಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಕುಣಿಯುತ್ತ ಹೋಗುತ್ತಿದ್ದರು. ಸಾಕಷ್ಟು ಹೊತ್ತು ಆದಮೇಲೆ ಸಂಗೀತ ಶಾಂತವಾಯಿತು. ಎಲ್ಲರೂ ಸುಸ್ತಾಗದ್ದರೂ ಮುಖದಮೇಲೆ ಕಳೆ ಇತ್ತು. ಏನೋ ಸತ್ಯದ ಅರಿವು ಆದ ಸಂತೋಷವಿತ್ತು. ರಾಜೀವನ ಮುಖದಲ್ಲೂ ಸಹ. ಇಷ್ಟು ದಿನ ಅವನು ಅತ್ತಿದ್ದು ಬರೀ ನೋವಾದಾಗ ಮಾತ್ರ, ತನ್ನ ಸ್ವಾರ್ಥದ ಕಾಲು ಮುರಿದಾಗ ಮಾತ್ರ. ಆದರೆ ಇವತ್ತು ಹಾಗಾಗಿರಲಿಲ್ಲ. ಅವನು ಅತ್ತಿದ್ದು ಯಾಕೆ ಎಂದು ಅವನಿಗೆ ಮಾತ್ರ ಗೊತ್ತಾಗಿತ್ತು.

ಕಾರ್ಯಕ್ರಮದ ಕೊನೆಯ ಅಂಗವಾಗಿ ಪ್ರಶ್ನೋತ್ತರ ಸೆಷನ್ನು ಇತ್ತು. ಕೆಲವು ಜನ ಹಲವಾರು ಪ್ರಶ್ನೆ ಶಿವಗುರುಗಳಿಗೆ ಕೇಳಿ ಅವರು ಮನದಟ್ಟಾಗುವಚಿತೆ ಸುಧೀರ್ಘವಾಗಿ ಉತ್ತರಿಸಿದ ಬಳಿಕ ಇವನೂ ಕೈ ಎತ್ತಿದ. ಮೈಕು ಬಂತು. ರಾಜೀವ ಪ್ರಶ್ನೆ ಕೇಳುವದನ್ನೇ ಮರೆತು ಶಿವಗುರುಗಳನ್ನೇ ದಿಟ್ಟಿಸಿ ನೋಡುತ್ತಾ ನಿಂತ. ಅತೀತ ಏನನ್ನೋ ಕೇಳ ಬಯಸಿತ್ತು, ಭವಿಷ್ಯದ ಬಇಸಿಲಗುದುರೆಯೇರಿ ವರ್ತಮಾನ ಮುಗುರಿ ಬಿದ್ದಿತ್ತು. ಮನಸ್ಸು, ಬುಧ್ಧಿಗಳ ನಡುವಿನ ಅನ್ಯೋನ್ಯತೆ ತಪ್ಪಿ ಹೋದಂತಿತ್ತು. ಧೈರ‍್ಯ ಮಾಡಿ ಕ್ಷೀಣ ಧ್ವನಿಯಲ್ಲಿ ಕೇಳಿದ. ಸತ್ಯವೆಂದರೇನು? ಗುರುಗಳು ಮೌನವಾದರು. ಎಲ್ಲೆಲ್ಲೂ ಮೌನ. ತಾವಿರುವದರ ಬಗ್ಗೆಯೇ ಸಂಶಯವಾಗುವಂತಹ ಭೀಷಣವಾದ ಮೌನ. 

ಎಲ್ಲರೂ ಯಾವಾಗ ಎದು ಹೋದರೋ ರಾಜೀವನಿಗೆ ಗೊತ್ತಾಗಲಿಲ್ಲ. ತಾನೊಬ್ಬನೇ ಬಹಳ ಹೊತ್ತು ಅಲ್ಲಿಯೇ ಕುಳಿತಿದ್ದ.

----------------------------------------------------------------------------------------------------------



Monday, 27 January 2014

Business

"What is in it for me?" Is pretty much everyone asks. What you get can either be transactional or transformational, depending on your clarity of getting it.
-VV

Privilege

The one who can not give love, embrace, smile to oneself, can not expect these things from others.

- VV

Adhesive

Love is the natural adhesive to 'stick' to some one. There are many synthetic available in the market, such as, compulsion, responsibility and obligation.

-VV

Pain

Last step to know what we don't know is to know we don't know.

First one is being humble.

-VV

ಅಪ್ಪ ತಂದ ಕನ್ನಡಿ


ನನಗೆ ಸರಿಯಾಗಿ ನೆನಪಿಲ್ಲ
ತಿಳಿಯಲೂ ಇಲ್ಲ
ಕೂಸಾಗಿದ್ದೆ, ಬರೀ ಅಳುವೇ ನನ್ನ ಭಾಷೆ
ಕಣ್ಣು ಮಂಜು ಮಂಜು
ಅದಾಗ ಮೊದಲ ಬಾರಿ
ಅಪ್ಪ ಹಿಡಿದ ಕನ್ನಡಿ ನೋಡಿದ್ದೆ

ಹುಡುಗನಾದಾಗಲೂ ಅಷ್ಟೇ
ಕನ್ನಡಿ ನೋಡುವದು
ಕ್ರಾಪ್ ತಿದ್ದಿಕೊಳ್ಳಲಿಕ್ಕೆ ಮಾತ್ರ
ನನ್ನ ಕಣ್ಣಿನ ಬಣ್ಣವನ್ನೂ
ನೋಡಲಿಲ್ಲ ನಾನು
ಅಪ್ಪ ಕನ್ನಡಿ ಹಿಡಿದು ಓಡುತ್ತಿದ್ದ

ಬರಬರುತ್ತಾ ನಾನು ಬೆಳೆದ್ಹಾಗೆ
ಕನ್ನಡಿಯೂ ದೊಡ್ಡದಾಗುತ್ತಾ ಹೋಯಿತು
ಆದರೆ ಕಾಣುತ್ತಿದ್ದುದು ಮುಖ ಮಾತ್ರ

ಯೌವ್ವನ ದಲ್ಲಿ ಕೆಲವರು
ಪಕ್ಕಕ್ಕೆ ಬಂದು ನಿಂತರು
ಪರಿಚಯವೂ ಕೂಡ
ಪರಸ್ಪರ ಕನ್ನಡಿಯಲ್ಲಿ ಮುಖ
ನೋಡಿಕೊಳ್ಳುವದರಲ್ಲೇ.

ಆಗದವರು ಮಾತ್ರ
ಇದಿರು ನಿಂತವರು
ಅವರ ಬೆನ್ನು ಮಾತ್ರ ನನಗೆ ಕಂಡಿತ್ತು
ಅವರಿಗೆ ಕನ್ನಡಿಯಲ್ಲಿನ ನನ್ನ ಮುಖ
ಕಾಣಲೇ ಇಲ್ಲವೇನೋ

ಅಪ್ಪ ಹಿಂದೆ ಉಳಿಯ ಹತ್ತಿದ
ಅವನು ಹಿಡಿದ ಕನ್ನಡಿಯೂ

ಎಲ್ಲಿ ಹೋದಲ್ಲೂ ಕನ್ನಡಿ
ಅದರ ಜೊತೆಗಿನ ಅಪ್ಪ
ಕೆಲವೊಮ್ಮೆ ಹಿಂದೆ
ಕೆಲವೊಮ್ಮೆ ನನ್ನ ಜೊತೆ
ಇನ್ನೂ ಕೆಲವೊಮ್ಮೆ
ನನಗಿಂತ ಮುಂದೆ, ತುಂಬಾ ಮುಂದೆ
ನನ್ನ ವಯಸ್ಸಿಗೆ ತಕ್ಕಂತೆ
ಅವನ ವೇಗ ವಿರುದ್ಧವಾಗಿತ್ತು

ಎಲ್ಲರಿಗೂ ಇರುವ ಹಾಗೆ
ಅಪ್ಪನ ಮೇಲೆ ಕೋಪ ನನಗೂ ಇತ್ತು
ಅವನು ಹಿಡಿದ ಕನ್ನಡಿಯ ಮೇಲೂ

ಓದಿ, ಓಡಿ ಕೆಲಸ ಮಾಡಿ
ಸುಸ್ತಾಯ್ತಿದ್ಧಂಗೆ
ಕನ್ನಡಿ ಅಪ್ಪ ಪ್ರತ್ಯಕ್ಷವಾಗುತ್ತಿದ್ದರು
ಅಪ್ಪನ ಕನ್ನಡಿಯೋ, ಕನ್ನಡಿಯ ಅಪ್ಪನೋ

ಅದೊಂದು ದಿನ ಸುಸ್ತಾಗಿರಲು
ಹೊತ್ತು ಹೋಗಲಿಕ್ಕೆಂದು
ಕನ್ನಡಿಯ ಮಾತನಾಡಿಸಿದೆ
ಹಾಗೆ ಮಾತನಾಡಿದ್ದು ಅದೇ ಮೊದಲು

ಅವನ ಧ್ವನಿಯೂ ನನ್ನ ಹಾಗೇ ಇತ್ತು
ಕಣ್ಣುಗಳ ಬಣ್ಣ ಕಡುಗಪ್ಪು
ಕೈ ಕಾಲುಗಳೆಲ್ಲ ನನ್ನವೇ
ಆದರೆ ಮುಖದ ಮೇಲೆ ಮಾತ್ರ
ಅಕಾಲಿಕ ಮುಪ್ಪು
ಅದೆಷ್ಟು ಜನರ ಬೆನ್ನು ನೋಡಿದ
ನನ್ನ ಬೆನ್ನೂ ಗೂನು
ಕಣ್ಣುಗಳಲ್ಲಿನ ಕ್ರೌರ್ಯ ಯಾರೂ ಅರ್ಥ ಮಾಡಿಕೊಳ್ಳದ
ನೋವಾಗಿ ಕಂಡಿತ್ತು
ಖುಷಿ ಕಂಡ ಮುಖದ ಮೇಲೆ
ಖುಷಿ ಉಗುಳಿ ಹೋದಂತಿತ್ತು

ಮುಖ ಒರೆಸಿಕೊಂಡೆ.
ಇದು ನೀನೆ ಎಂದ ಅಪ್ಪ
ಹೌದಲ್ಲ ಇದು ನಾನೇ
ನಿನಗ್ಹೇಗೆ ಗೊತ್ತಪ್ಪ ?

ನಾನು ಕನ್ನಡಿಯ ಹೊತ್ತಿದ್ದು ಮಾತ್ರ,
ನೋಡುತ್ತಿದ್ದುದು ನಿನ್ನನ್ನೇ ಎಂದನಪ್ಪ

ಇನ್ನಾದರು ಸುಧಾರಿಸಿಕೋ,
ಎಂದು ಒಂದು ಕಡೆ ಕುಳಿತುಬಿಟ್ಟ

ನಾನೂ ಕುಳಿತೆ, ಹಾಗೆಯೇ ಜೊಂಪು ಹೋದೆ.
----------------------------

'ಸಮಯ' ಅಂತ ಯಾರೋ ಕರೆದದ್ದು ಕೇಳಿತು
ಅಪ್ಪ ಕನ್ನಡಿ ಎತ್ತಿ ಹೊರಟು ಹೋದಂತಿತ್ತು

ಆ ಧ್ವನಿ ಬಂದಕಡೆ.

-VV